<p><strong>ಪುರಿ</strong>: ಐತಿಹಾಸಿಕ ಪುರಿ ಜಗನ್ನಾಥ ದೇವರ ಭವ್ಯ ‘ಬಹುದಾ ಯಾತ್ರೆ’ಯು ವಾದ್ಯಮೇಳಗಳೊಂದಿಗೆ ಶನಿವಾರ ಆರಂಭವಾಯಿತು. ‘ಪಹಾಂಡಿ’ ಆಚರಣೆಯೊಂದಿಗೆ ಶ್ರೀ ಗುಂಡಿಚಾ ದೇವಸ್ಥಾನದಿಂದ ಯಾತ್ರೆಯು ಅದ್ಧೂರಿಯಾಗಿ ಸಾಗಿತು. </p>.<p>‘ಪಹಾಂಡಿ’ ಯಾತ್ರೆಯು ಬೆಳಿಗ್ಗೆ 10.30ಕ್ಕೆ ಆರಂಭವಾಯಿತು. ವಿಶೇಷ ಪೂಜೆ ಹಾಗೂ ಮಂಗಳಾರತಿ ಬಳಿಕ, ತಾಲಧ್ವಜ ರಥದಲ್ಲಿ ಬಲಭದ್ರ, ದರ್ಪದಲನದಲ್ಲಿ ದೇವಿ ಸುಭದ್ರ ಹಾಗೂ ನಂದಿಘೋಷದಲ್ಲಿ ಜಗನ್ನಾಥ ದೇವರ ವಿಗ್ರಹಗಳನ್ನು ಇರಿಸಲಾಯಿತು. </p>.<p>ಇಲ್ಲಿಂದ 2.6 ಕಿ.ಮೀ ದೂರದಲ್ಲಿರುವ ಜಗನ್ನಾಥ ದೇವರ ಮೂಲಸ್ಥಾನ ಎನ್ನಲಾಗುವ ದೇವಸ್ಥಾನಕ್ಕೆ ರಥಗಳನ್ನು ಎಳೆದು, ಅಲ್ಲಿ ದೇವರನ್ನು ಮತ್ತೆ ಪ್ರತಿಷ್ಠಾಪಿಸಲಾಗುತ್ತದೆ. ಬಹುದಾ ಯಾತ್ರೆಗೆ ಲಕ್ಷಾಂತರ ಜನ ಭಕ್ತರು ಬಂದಿದ್ದಾರೆ. </p>.<p>‘ಗುಂಡಿಚಾ ದೇವಸ್ಥಾನದಲ್ಲಿದ್ದ ಚಕ್ರರಾಜ ಸುದರ್ಶನವನ್ನು ದೇವಿ ಸುಭದ್ರೆಯ ‘ದರ್ಪದಲನ’ ರಥದಲ್ಲಿ ಇರಿಸಲಾಯಿತು. ಸುದರ್ಶನವು ಭಗವಾನ್ ವಿಷ್ಣುವಿನ ಚಕ್ರಾಯುಧವಾಗಿದೆ. ವಿಷ್ಣು ದೇವರನ್ನು ಪುರಿಯಲ್ಲಿ ಜಗನ್ನಾಥನನ್ನಾಗಿ ಆರಾಧಿಸಲಾಗುತ್ತದೆ’ ಎಂದು ಪಂಡಿತ್ ಸೂರ್ಯನಾರಾಯಣ ರಥಶರ್ಮಾ ತಿಳಿಸಿದರು. </p>.<p>ಒಡಿಶಾ ಪೊಲೀಸರು ಹಾಗೂ ಸಿಎಪಿಎಫ್ ಸಿಬ್ಬಂದಿ ಸೇರಿದಂತೆ ಒಟ್ಟು 10,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಹಾಗೂ ಡ್ರೋನ್ ಕಣ್ಗಾವಲು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. </p>.<p>ಜೂನ್ 29ರಂದು ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟು, 50 ಮಂದಿ ಗಾಯಗೊಂಡಿದ್ದರು. ಬಳಿಕ ಸ್ಥಳದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುರಿ</strong>: ಐತಿಹಾಸಿಕ ಪುರಿ ಜಗನ್ನಾಥ ದೇವರ ಭವ್ಯ ‘ಬಹುದಾ ಯಾತ್ರೆ’ಯು ವಾದ್ಯಮೇಳಗಳೊಂದಿಗೆ ಶನಿವಾರ ಆರಂಭವಾಯಿತು. ‘ಪಹಾಂಡಿ’ ಆಚರಣೆಯೊಂದಿಗೆ ಶ್ರೀ ಗುಂಡಿಚಾ ದೇವಸ್ಥಾನದಿಂದ ಯಾತ್ರೆಯು ಅದ್ಧೂರಿಯಾಗಿ ಸಾಗಿತು. </p>.<p>‘ಪಹಾಂಡಿ’ ಯಾತ್ರೆಯು ಬೆಳಿಗ್ಗೆ 10.30ಕ್ಕೆ ಆರಂಭವಾಯಿತು. ವಿಶೇಷ ಪೂಜೆ ಹಾಗೂ ಮಂಗಳಾರತಿ ಬಳಿಕ, ತಾಲಧ್ವಜ ರಥದಲ್ಲಿ ಬಲಭದ್ರ, ದರ್ಪದಲನದಲ್ಲಿ ದೇವಿ ಸುಭದ್ರ ಹಾಗೂ ನಂದಿಘೋಷದಲ್ಲಿ ಜಗನ್ನಾಥ ದೇವರ ವಿಗ್ರಹಗಳನ್ನು ಇರಿಸಲಾಯಿತು. </p>.<p>ಇಲ್ಲಿಂದ 2.6 ಕಿ.ಮೀ ದೂರದಲ್ಲಿರುವ ಜಗನ್ನಾಥ ದೇವರ ಮೂಲಸ್ಥಾನ ಎನ್ನಲಾಗುವ ದೇವಸ್ಥಾನಕ್ಕೆ ರಥಗಳನ್ನು ಎಳೆದು, ಅಲ್ಲಿ ದೇವರನ್ನು ಮತ್ತೆ ಪ್ರತಿಷ್ಠಾಪಿಸಲಾಗುತ್ತದೆ. ಬಹುದಾ ಯಾತ್ರೆಗೆ ಲಕ್ಷಾಂತರ ಜನ ಭಕ್ತರು ಬಂದಿದ್ದಾರೆ. </p>.<p>‘ಗುಂಡಿಚಾ ದೇವಸ್ಥಾನದಲ್ಲಿದ್ದ ಚಕ್ರರಾಜ ಸುದರ್ಶನವನ್ನು ದೇವಿ ಸುಭದ್ರೆಯ ‘ದರ್ಪದಲನ’ ರಥದಲ್ಲಿ ಇರಿಸಲಾಯಿತು. ಸುದರ್ಶನವು ಭಗವಾನ್ ವಿಷ್ಣುವಿನ ಚಕ್ರಾಯುಧವಾಗಿದೆ. ವಿಷ್ಣು ದೇವರನ್ನು ಪುರಿಯಲ್ಲಿ ಜಗನ್ನಾಥನನ್ನಾಗಿ ಆರಾಧಿಸಲಾಗುತ್ತದೆ’ ಎಂದು ಪಂಡಿತ್ ಸೂರ್ಯನಾರಾಯಣ ರಥಶರ್ಮಾ ತಿಳಿಸಿದರು. </p>.<p>ಒಡಿಶಾ ಪೊಲೀಸರು ಹಾಗೂ ಸಿಎಪಿಎಫ್ ಸಿಬ್ಬಂದಿ ಸೇರಿದಂತೆ ಒಟ್ಟು 10,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಹಾಗೂ ಡ್ರೋನ್ ಕಣ್ಗಾವಲು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. </p>.<p>ಜೂನ್ 29ರಂದು ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟು, 50 ಮಂದಿ ಗಾಯಗೊಂಡಿದ್ದರು. ಬಳಿಕ ಸ್ಥಳದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>