<p><strong>ನವದೆಹಲಿ</strong>: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ನ ಭರ್ಜರಿ ಗೆಲುವಿನ ಹಿಂದಿರುವ ಶಕ್ತಿಗಳಲ್ಲಿ, ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ (ಪಿಕೆ) ಅವರೂ ಒಬ್ಬರು.</p>.<p>ಈ ಹಿಂದೆಯೂ ವಿವಿಧ ರಾಜ್ಯಗಳಲ್ಲಿ ಬೇರೆಬೇರೆ ಪಕ್ಷಗಳಿಗಾಗಿ ಕಾರ್ಯತಂತ್ರಗೆಲುವಿಗೆಕಾರಣರಾಗಿದ್ದಪ್ರಶಾಂತ್, ಈಗ ಈ ವೃತ್ತಿಯನ್ನು ತ್ಯಜಿಸುವುದಾಗಿ ಹೇಳಿದ್ದಾರೆ. ಮಮತಾ ಅವರ ಗೆಲುವು ಖಚಿತವಾಗುತ್ತಿರುವುದು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಎರಡಂಕಿಗಿಂತ ಹೆಚ್ಚಿನ ಸ್ಥಾನಗಳು ಲಭಿಸದು ಎಂಬುದು ಖಚಿತವಾಗುತ್ತಿದ್ದಂತೆ, ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.</p>.<p>‘ಈವರೆಗೆ ಏನು ಮಾಡುತ್ತಿದ್ದೆನೋ ಅದನ್ನು ಮುಂದುವರಿಸಲು ನಾನು ಬಯಸುವುದಿಲ್ಲ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಈಗ ಸ್ವಲ್ಪ ಬಿಡುವು ತೆಗೆದುಕೊಂಡು ಬೇರೇನನ್ನಾದರೂ ಮಾಡುವ ಸಮಯ ಬಂದಿದೆ. ಈ ಸ್ಥಾನವನ್ನು ತ್ಯಜಿಸಲು ನಾನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಜತೆಯಲ್ಲೇ, ರಾಜಕೀಯವನ್ನು ಪ್ರವೇಶಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.</p>.<p>‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಅಸಾಧಾರಣ ಶಕ್ತಿಯಾಗಿದೆ’ ಎಂಬ ತಮ್ಮ ನಿಲುವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ, ‘ಮೋದಿ ಅವರ ಜನಪ್ರಿಯತೆ ಹೆಚ್ಚಿದೆ ಎಂದರೆ ಬಿಜೆಪಿಯು ಎಲ್ಲಾ ಚುನಾವಣೆಗಳನ್ನು ಗೆಲ್ಲುತ್ತದೆ ಎಂದು ಅರ್ಥವಲ್ಲ’ ಎಂದಿದ್ದಾರೆ.</p>.<p><strong>ವೈರಲ್ ಆದ ಟ್ವೀಟ್: </strong>ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಭಾರಿ ಗೆಲುವು ಖಚಿತವಾಗುತ್ತಿದ್ದಂತೆಯೇ ಪ್ರಶಾಂತ್ ಅವರು ಕಳೆದ ಡಿಸೆಂಬರ್ನಲ್ಲಿ ಮಾಡಿದ್ದ ಒಂದು ಟ್ವೀಟ್ ಟ್ವಿಟರ್ನಲ್ಲಿ ಪುನಃ ಹರಿದಾಡಿತು.</p>.<p>ಡಿಸೆಂಬರ್ 21ರಂದು ಬಿಜೆಪಿಗೆ ಸವಾಲು ಹಾಕುವ ರೀತಿಯಲ್ಲಿ ಮಾಡಿದ್ದ ಆ ಟ್ವೀಟ್ನಲ್ಲಿ ಅವರು, ‘294 ಸದಸ್ಯಬಲದ ವಿಧಾನಸಭೆಯಲ್ಲಿ, ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವು ಎರಡಂಕಿ ಸಂಖ್ಯೆಯನ್ನು ದಾಟಲೂ ಹೆಣಗಾಡಬೇಕಾಗುತ್ತದೆ. ಈ ಟ್ವೀಟ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ. ಕೇಂದ್ರಕ್ಕೆ ಬೆಂಬಲವಾಗಿ ನಿಂತಿರುವ ಮಾಧ್ಯಮದ ಒಂದು ಭಾಗದವರಿಗೆ ಹೇಳುತ್ತಿದ್ದೇನೆ, ಬಿಜೆಪಿಯು ಎರಡಂಕಿ ಸಾಧನೆ ಮಾಡಲು ಯಶಸ್ವಿಯಾದರೆ ನಾನು ಈ ಜಾಗವನ್ನು ಖಾಲಿಮಾಡುತ್ತೇನೆ’ ಎಂದಿದ್ದರು.</p>.<p>ಈ ಟ್ವೀಟ್ಗೆ ಪ್ರತಿ ಟ್ವೀಟ್ ಮಾಡಿದ್ದ ಬಿಜೆಪಿಯ ಕೈಲಾಶ್ ವಿಜಯವರ್ಗೀಯ ‘ಬಂಗಾಳದಲ್ಲಿ ಎದ್ದಿರುವ ಬಿಜೆಪಿಯ ಸುನಾಮಿಯ ಫಲವಾಗಿ ಅಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ, ದೇಶವು ಒಬ್ಬ ಚುನಾವಣಾ ನೀತಿ ನಿರೂಪಕನನ್ನು ಕಳೆದುಕೊಳ್ಳಲಿದೆ’ ಎಂದಿದ್ದರು.</p>.<p>ಪ್ರಶಾಂತ್ ಅವರ ಹಳೆಯ ಟ್ವೀಟ್ ಅನ್ನು ಉಲ್ಲೇಖಿಸಿ ಅನೇಕ ಮಂದಿ ಭಾನುವಾರ ಟ್ವೀಟ್ಗಳನ್ನು ಮಾಡಿದ್ದಾರೆ. ‘ಬಿಜೆಪಿಯು ಬಂಗಾಳದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವುದು ಸದ್ಯಕ್ಕೆ ಅಸಾಧ್ಯ. ಪ್ರಶಾಂತ್ ಅವರು ಇನ್ನೂ ಕಣದಲ್ಲಿದ್ದಾರೆ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.</p>.<p>ಮತ ಎಣಿಕೆ ಆರಂಭವಾದ ಮೊದಲ ಕೆಲವು ಗಂಟೆಗಳ ಕಾಲ ಬಿಜೆಪಿ –ಟಿಎಂಸಿ ಮಧ್ಯೆ ತೀವ್ರ ಪೈಪೋಟಿ ನಡೆಯುವ ಲಕ್ಷಣಗಳು ಗೋಚರಿಸಿದ್ದವು. ಆ ಸಂದರ್ಭದಲ್ಲಿ ಕೆಲವರು, ‘ಪ್ರಶಾಂತ್ ಅವರು ಬೇರೆ ಉದ್ಯೋಗ ಹುಡುಕುವುದು ಸೂಕ್ತ’ ಎಂದು ಟ್ವೀಟ್ ಮಾಡಿದ್ದರು.</p>.<p><strong>‘ಬಿಜೆಪಿ ಪಕ್ಷಪಾತಿ ಚುನಾವಣಾ ಆಯೋಗ’</strong><br />ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಆಯೋಗವು ನಡೆದುಕೊಂಡಿರುವ ರೀತಿಗೆ ಪ್ರಶಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಕಠಿಣ ಸ್ಪರ್ಧೆ ಇತ್ತು. ಚುನಾವಣಾ ಆಯೋಗವು ಕಣ್ಣಿಗೆ ರಾಚುವಷ್ಟು ಪಕ್ಷಪಾತಿಯಾಗಿತ್ತು. ಇದಕ್ಕಿಂತ ಹೆಚ್ಚು ಪಕ್ಷಪಾತಿಯಾಗಿದ್ದ ಚುನಾವಣಾ ಆಯೋಗವನ್ನು ನಾನು ಈವರೆಗೆ ನೋಡಿಲ್ಲ. ಬಿಜೆಪಿಗೆ ಸಹಾಯ ಮಾಡಲು ಈ ಆಯೋಗವು ಬೇಕಾದ ಎಲ್ಲವನ್ನೂ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.</p>.<p>‘ಪ್ರಚಾರದಲ್ಲಿ ಧರ್ಮದ ಬಳಕೆಯಿಂದ ಆರಂಭಿಸಿ ಮತದಾನದ ದಿನಾಂಕವನ್ನು ನಿರ್ಧರಿಸುವುದು, ಕಾನೂನುಗಳನ್ನು ತಿರುಚುವಲ್ಲಿಯವರೆಗೆ ಆಯೋಗವು ಬಿಜೆಪಿಗಾಗಿ ಎಲ್ಲವನ್ನೂ ಮಾಡಿದೆ. ಬಿಜೆಪಿಯವಿಸ್ತರಿತ ಸಂಸ್ಥೆಯಂತೆ ಆಯೋಗ ಕೆಲಸ ಮಾಡಿದೆ’ ಎಂದು ಅವರು ಆರೋಪಿಸಿದರು.</p>.<p>‘ನಮಗೆ ಪ್ರಚಾರ ನಡೆಸುವುದೇ ಸವಾಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ನಾವೇ ಗೆಲ್ಲಲಿದ್ದೇವೆ ಎಂಬ ಬೃಹತ್ ಪ್ರಚಾರಾಂದೋಲನ ನಡೆಸಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ಒಳ್ಳೆಯ ಸಾಧನೆ ಮಾಡುತ್ತೇವೆ, ಬಯಸಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಜನರು ನೀಡುತ್ತಾರೆ ಎಂಬ ವಿಶ್ವಾಸ ನಮಗಿತ್ತು’ ಎಂದಿದ್ದಾರೆ.</p>.<p><strong>ಡಬಲ್ ಗೆಲುವು</strong><br />ಪ್ರಶಾಂತ್ ಈ ಬಾರಿ ಡಬಲ್ ಗೆಲುವು ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅವರು ಟಿಎಂಸಿಗಾಗಿ ಕಾರ್ಯತಂತ್ರ ಹೆಣೆದರೆ, ತಮಿಳುನಾಡಿನಲ್ಲಿ ಅವರು ಡಿಎಂಕೆ ಪರವಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ಒಂದು ದಶಕದ ಕಾಲ ವಿರೋಧಪಕ್ಷದ ಸ್ಥಾನದಲ್ಲಿದ್ದ ಡಿಎಂಕೆಯು ಗೆಲುವು ದಾಖಲಿಸಿದೆ.</p>.<p>ಕಿಶೋರ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ, 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯುಗೆ ಚುನಾವಣಾ ಕಾರ್ಯತಂತ್ರ ರೂಪಿಸಿ, ಆ ಪಕ್ಷಗಳ ಗೆಲುವಿಗೆ ಕಾರಣರಾಗಿದ್ದರು. ಆದರೆ, ಪಶ್ಚಿಮ ಬಂಗಾಳ ಅವರಿಗೆ ದೊಡ್ಡ ಸವಾಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ನ ಭರ್ಜರಿ ಗೆಲುವಿನ ಹಿಂದಿರುವ ಶಕ್ತಿಗಳಲ್ಲಿ, ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ (ಪಿಕೆ) ಅವರೂ ಒಬ್ಬರು.</p>.<p>ಈ ಹಿಂದೆಯೂ ವಿವಿಧ ರಾಜ್ಯಗಳಲ್ಲಿ ಬೇರೆಬೇರೆ ಪಕ್ಷಗಳಿಗಾಗಿ ಕಾರ್ಯತಂತ್ರಗೆಲುವಿಗೆಕಾರಣರಾಗಿದ್ದಪ್ರಶಾಂತ್, ಈಗ ಈ ವೃತ್ತಿಯನ್ನು ತ್ಯಜಿಸುವುದಾಗಿ ಹೇಳಿದ್ದಾರೆ. ಮಮತಾ ಅವರ ಗೆಲುವು ಖಚಿತವಾಗುತ್ತಿರುವುದು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಎರಡಂಕಿಗಿಂತ ಹೆಚ್ಚಿನ ಸ್ಥಾನಗಳು ಲಭಿಸದು ಎಂಬುದು ಖಚಿತವಾಗುತ್ತಿದ್ದಂತೆ, ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.</p>.<p>‘ಈವರೆಗೆ ಏನು ಮಾಡುತ್ತಿದ್ದೆನೋ ಅದನ್ನು ಮುಂದುವರಿಸಲು ನಾನು ಬಯಸುವುದಿಲ್ಲ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಈಗ ಸ್ವಲ್ಪ ಬಿಡುವು ತೆಗೆದುಕೊಂಡು ಬೇರೇನನ್ನಾದರೂ ಮಾಡುವ ಸಮಯ ಬಂದಿದೆ. ಈ ಸ್ಥಾನವನ್ನು ತ್ಯಜಿಸಲು ನಾನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಜತೆಯಲ್ಲೇ, ರಾಜಕೀಯವನ್ನು ಪ್ರವೇಶಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.</p>.<p>‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಅಸಾಧಾರಣ ಶಕ್ತಿಯಾಗಿದೆ’ ಎಂಬ ತಮ್ಮ ನಿಲುವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ, ‘ಮೋದಿ ಅವರ ಜನಪ್ರಿಯತೆ ಹೆಚ್ಚಿದೆ ಎಂದರೆ ಬಿಜೆಪಿಯು ಎಲ್ಲಾ ಚುನಾವಣೆಗಳನ್ನು ಗೆಲ್ಲುತ್ತದೆ ಎಂದು ಅರ್ಥವಲ್ಲ’ ಎಂದಿದ್ದಾರೆ.</p>.<p><strong>ವೈರಲ್ ಆದ ಟ್ವೀಟ್: </strong>ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಭಾರಿ ಗೆಲುವು ಖಚಿತವಾಗುತ್ತಿದ್ದಂತೆಯೇ ಪ್ರಶಾಂತ್ ಅವರು ಕಳೆದ ಡಿಸೆಂಬರ್ನಲ್ಲಿ ಮಾಡಿದ್ದ ಒಂದು ಟ್ವೀಟ್ ಟ್ವಿಟರ್ನಲ್ಲಿ ಪುನಃ ಹರಿದಾಡಿತು.</p>.<p>ಡಿಸೆಂಬರ್ 21ರಂದು ಬಿಜೆಪಿಗೆ ಸವಾಲು ಹಾಕುವ ರೀತಿಯಲ್ಲಿ ಮಾಡಿದ್ದ ಆ ಟ್ವೀಟ್ನಲ್ಲಿ ಅವರು, ‘294 ಸದಸ್ಯಬಲದ ವಿಧಾನಸಭೆಯಲ್ಲಿ, ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವು ಎರಡಂಕಿ ಸಂಖ್ಯೆಯನ್ನು ದಾಟಲೂ ಹೆಣಗಾಡಬೇಕಾಗುತ್ತದೆ. ಈ ಟ್ವೀಟ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ. ಕೇಂದ್ರಕ್ಕೆ ಬೆಂಬಲವಾಗಿ ನಿಂತಿರುವ ಮಾಧ್ಯಮದ ಒಂದು ಭಾಗದವರಿಗೆ ಹೇಳುತ್ತಿದ್ದೇನೆ, ಬಿಜೆಪಿಯು ಎರಡಂಕಿ ಸಾಧನೆ ಮಾಡಲು ಯಶಸ್ವಿಯಾದರೆ ನಾನು ಈ ಜಾಗವನ್ನು ಖಾಲಿಮಾಡುತ್ತೇನೆ’ ಎಂದಿದ್ದರು.</p>.<p>ಈ ಟ್ವೀಟ್ಗೆ ಪ್ರತಿ ಟ್ವೀಟ್ ಮಾಡಿದ್ದ ಬಿಜೆಪಿಯ ಕೈಲಾಶ್ ವಿಜಯವರ್ಗೀಯ ‘ಬಂಗಾಳದಲ್ಲಿ ಎದ್ದಿರುವ ಬಿಜೆಪಿಯ ಸುನಾಮಿಯ ಫಲವಾಗಿ ಅಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ, ದೇಶವು ಒಬ್ಬ ಚುನಾವಣಾ ನೀತಿ ನಿರೂಪಕನನ್ನು ಕಳೆದುಕೊಳ್ಳಲಿದೆ’ ಎಂದಿದ್ದರು.</p>.<p>ಪ್ರಶಾಂತ್ ಅವರ ಹಳೆಯ ಟ್ವೀಟ್ ಅನ್ನು ಉಲ್ಲೇಖಿಸಿ ಅನೇಕ ಮಂದಿ ಭಾನುವಾರ ಟ್ವೀಟ್ಗಳನ್ನು ಮಾಡಿದ್ದಾರೆ. ‘ಬಿಜೆಪಿಯು ಬಂಗಾಳದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವುದು ಸದ್ಯಕ್ಕೆ ಅಸಾಧ್ಯ. ಪ್ರಶಾಂತ್ ಅವರು ಇನ್ನೂ ಕಣದಲ್ಲಿದ್ದಾರೆ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.</p>.<p>ಮತ ಎಣಿಕೆ ಆರಂಭವಾದ ಮೊದಲ ಕೆಲವು ಗಂಟೆಗಳ ಕಾಲ ಬಿಜೆಪಿ –ಟಿಎಂಸಿ ಮಧ್ಯೆ ತೀವ್ರ ಪೈಪೋಟಿ ನಡೆಯುವ ಲಕ್ಷಣಗಳು ಗೋಚರಿಸಿದ್ದವು. ಆ ಸಂದರ್ಭದಲ್ಲಿ ಕೆಲವರು, ‘ಪ್ರಶಾಂತ್ ಅವರು ಬೇರೆ ಉದ್ಯೋಗ ಹುಡುಕುವುದು ಸೂಕ್ತ’ ಎಂದು ಟ್ವೀಟ್ ಮಾಡಿದ್ದರು.</p>.<p><strong>‘ಬಿಜೆಪಿ ಪಕ್ಷಪಾತಿ ಚುನಾವಣಾ ಆಯೋಗ’</strong><br />ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಆಯೋಗವು ನಡೆದುಕೊಂಡಿರುವ ರೀತಿಗೆ ಪ್ರಶಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಕಠಿಣ ಸ್ಪರ್ಧೆ ಇತ್ತು. ಚುನಾವಣಾ ಆಯೋಗವು ಕಣ್ಣಿಗೆ ರಾಚುವಷ್ಟು ಪಕ್ಷಪಾತಿಯಾಗಿತ್ತು. ಇದಕ್ಕಿಂತ ಹೆಚ್ಚು ಪಕ್ಷಪಾತಿಯಾಗಿದ್ದ ಚುನಾವಣಾ ಆಯೋಗವನ್ನು ನಾನು ಈವರೆಗೆ ನೋಡಿಲ್ಲ. ಬಿಜೆಪಿಗೆ ಸಹಾಯ ಮಾಡಲು ಈ ಆಯೋಗವು ಬೇಕಾದ ಎಲ್ಲವನ್ನೂ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.</p>.<p>‘ಪ್ರಚಾರದಲ್ಲಿ ಧರ್ಮದ ಬಳಕೆಯಿಂದ ಆರಂಭಿಸಿ ಮತದಾನದ ದಿನಾಂಕವನ್ನು ನಿರ್ಧರಿಸುವುದು, ಕಾನೂನುಗಳನ್ನು ತಿರುಚುವಲ್ಲಿಯವರೆಗೆ ಆಯೋಗವು ಬಿಜೆಪಿಗಾಗಿ ಎಲ್ಲವನ್ನೂ ಮಾಡಿದೆ. ಬಿಜೆಪಿಯವಿಸ್ತರಿತ ಸಂಸ್ಥೆಯಂತೆ ಆಯೋಗ ಕೆಲಸ ಮಾಡಿದೆ’ ಎಂದು ಅವರು ಆರೋಪಿಸಿದರು.</p>.<p>‘ನಮಗೆ ಪ್ರಚಾರ ನಡೆಸುವುದೇ ಸವಾಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ನಾವೇ ಗೆಲ್ಲಲಿದ್ದೇವೆ ಎಂಬ ಬೃಹತ್ ಪ್ರಚಾರಾಂದೋಲನ ನಡೆಸಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ಒಳ್ಳೆಯ ಸಾಧನೆ ಮಾಡುತ್ತೇವೆ, ಬಯಸಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಜನರು ನೀಡುತ್ತಾರೆ ಎಂಬ ವಿಶ್ವಾಸ ನಮಗಿತ್ತು’ ಎಂದಿದ್ದಾರೆ.</p>.<p><strong>ಡಬಲ್ ಗೆಲುವು</strong><br />ಪ್ರಶಾಂತ್ ಈ ಬಾರಿ ಡಬಲ್ ಗೆಲುವು ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅವರು ಟಿಎಂಸಿಗಾಗಿ ಕಾರ್ಯತಂತ್ರ ಹೆಣೆದರೆ, ತಮಿಳುನಾಡಿನಲ್ಲಿ ಅವರು ಡಿಎಂಕೆ ಪರವಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ಒಂದು ದಶಕದ ಕಾಲ ವಿರೋಧಪಕ್ಷದ ಸ್ಥಾನದಲ್ಲಿದ್ದ ಡಿಎಂಕೆಯು ಗೆಲುವು ದಾಖಲಿಸಿದೆ.</p>.<p>ಕಿಶೋರ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ, 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯುಗೆ ಚುನಾವಣಾ ಕಾರ್ಯತಂತ್ರ ರೂಪಿಸಿ, ಆ ಪಕ್ಷಗಳ ಗೆಲುವಿಗೆ ಕಾರಣರಾಗಿದ್ದರು. ಆದರೆ, ಪಶ್ಚಿಮ ಬಂಗಾಳ ಅವರಿಗೆ ದೊಡ್ಡ ಸವಾಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>