<p>ನವದೆಹಲಿ: ನಿರ್ಮಲಾ ಸೀತಾರಾಮನ್ ಅವರು ತಾವು ಈರುಳ್ಳಿ ತಿನ್ನುವುದಿಲ್ಲ ಎಂದಿರುವುದು ದುರಹಂಕಾರದ ಮಾತು.ತಮ್ಮ ಸುತ್ತ ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದ ರೀತಿಯಲ್ಲಿ ಹಣಕಾಸು ಸಚಿವರು ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.</p>.<p>‘ಕೆಫೆ ನಿರ್ಮಲಾ ತಾಯ್: ದುರಹಂಕಾರ, ಸ್ವಲ್ಪ ಅಜ್ಞಾನ ಮತ್ತು ರಾಶಿ–ರಾಶಿ ಅಸಮರ್ಥತತೆಯನ್ನು ಬಳಸಿ ಸಿದ್ಧಪಡಿಸಲಾದ ತಿನಿಸುಗಳು ಇಲ್ಲಿ ದೊರೆಯುತ್ತವೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.</p>.<p>ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ನಿರ್ಮಲಾ ಅವರನ್ನು, ‘ಭಾರತದ ಮೇರಿ ಆಂಟೊನೆಟ್’ ಎಂದು ಕರೆದಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲೂ ನಿರ್ಮಲಾ ಅವರನ್ನು ‘ಭಾರತದ ಮೇರಿ ಆಂಟೊನೆಟ್’ ಎಂದು ಲೇವಡಿ ಮಾಡಲಾಗುತ್ತಿದೆ.ಟ್ವಿಟರ್ನಲ್ಲಿ#SayItLikeNirmalaTai ಹ್ಯಾಷ್ಟ್ಯಾಗ್ ಗುರುವಾರ ಟ್ರೆಂಡ್ ಆಗಿದೆ.</p>.<p>1789ರಲ್ಲಿ ಫ್ರಾನ್ಸ್ನ ಜನರಿಗೆ ತಿನ್ನಲು ಬ್ರೆಡ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ ರಾಣಿ ಮೇರಿ ಆಂಟೊನೆಟ್, ‘ಜನರು ಕೇಕ್ ತಿನ್ನಲಿ’ ಎಂದು ಹೇಳಿದ್ದಳು. ಜನರ ಪರಿಸ್ಥಿತಿಯ ಅರಿವು ಇಲ್ಲದೇ ಹೇಳಿಕೆ ನೀಡಿದವರನ್ನು ಟೀಕಿಸಲು ‘ಮೇರಿ ಆಂಟೊನೆಟ್’ ಎಂಬ ಮಾತನ್ನು ಬಳಸಲಾಗುತ್ತದೆ.</p>.<p>***</p>.<p>ಈರುಳ್ಳಿ ಖರೀದಿಸಲು ಹೆಣಗಾಡುತ್ತಿರುವ ಬಡಜನರ ಕಣ್ಣೀರನ್ನು, ‘ನಾನು ಈರುಳ್ಳಿ ತಿನ್ನುವುದಿಲ್ಲ’ ಎನ್ನುವ ಮೂಲಕ ಹಣಕಾಸು ಸಚಿವರು ಅಣಕಿಸುತ್ತಿದ್ದಾರೆ<br /><strong>- ರಾಘವ್ ಛಡ್ಡಾ, ಎಎಪಿ ನಾಯಕ</strong></p>.<p>***</p>.<p>ನಾನು ಪಕ್ಕಾ ಸಸ್ಯಾಹಾರಿ. ನಾನು ಈವರೆಗೂ ಈರುಳ್ಳಿಯ ರುಚಿ ನೋಡಿಯೇ ಇಲ್ಲ. ಈರುಳ್ಳಿ ಬೆಲೆ ಏರಿಕೆ ಆಗಿರುವುದು ನನಗೆ ಹೇಗೆ ಗೊತ್ತಾಗುತ್ತದೆ<br /><strong>- ಅಶ್ವಿನಿ ಚೌಬೆ, ಕೇಂದ್ರ ಸಚಿವ</strong></p>.<p><strong>ಆಧಾರ:</strong> ಪಿಟಿಐ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ನಿರ್ಮಲಾ ಸೀತಾರಾಮನ್ ಅವರು ತಾವು ಈರುಳ್ಳಿ ತಿನ್ನುವುದಿಲ್ಲ ಎಂದಿರುವುದು ದುರಹಂಕಾರದ ಮಾತು.ತಮ್ಮ ಸುತ್ತ ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದ ರೀತಿಯಲ್ಲಿ ಹಣಕಾಸು ಸಚಿವರು ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.</p>.<p>‘ಕೆಫೆ ನಿರ್ಮಲಾ ತಾಯ್: ದುರಹಂಕಾರ, ಸ್ವಲ್ಪ ಅಜ್ಞಾನ ಮತ್ತು ರಾಶಿ–ರಾಶಿ ಅಸಮರ್ಥತತೆಯನ್ನು ಬಳಸಿ ಸಿದ್ಧಪಡಿಸಲಾದ ತಿನಿಸುಗಳು ಇಲ್ಲಿ ದೊರೆಯುತ್ತವೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.</p>.<p>ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ನಿರ್ಮಲಾ ಅವರನ್ನು, ‘ಭಾರತದ ಮೇರಿ ಆಂಟೊನೆಟ್’ ಎಂದು ಕರೆದಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲೂ ನಿರ್ಮಲಾ ಅವರನ್ನು ‘ಭಾರತದ ಮೇರಿ ಆಂಟೊನೆಟ್’ ಎಂದು ಲೇವಡಿ ಮಾಡಲಾಗುತ್ತಿದೆ.ಟ್ವಿಟರ್ನಲ್ಲಿ#SayItLikeNirmalaTai ಹ್ಯಾಷ್ಟ್ಯಾಗ್ ಗುರುವಾರ ಟ್ರೆಂಡ್ ಆಗಿದೆ.</p>.<p>1789ರಲ್ಲಿ ಫ್ರಾನ್ಸ್ನ ಜನರಿಗೆ ತಿನ್ನಲು ಬ್ರೆಡ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ ರಾಣಿ ಮೇರಿ ಆಂಟೊನೆಟ್, ‘ಜನರು ಕೇಕ್ ತಿನ್ನಲಿ’ ಎಂದು ಹೇಳಿದ್ದಳು. ಜನರ ಪರಿಸ್ಥಿತಿಯ ಅರಿವು ಇಲ್ಲದೇ ಹೇಳಿಕೆ ನೀಡಿದವರನ್ನು ಟೀಕಿಸಲು ‘ಮೇರಿ ಆಂಟೊನೆಟ್’ ಎಂಬ ಮಾತನ್ನು ಬಳಸಲಾಗುತ್ತದೆ.</p>.<p>***</p>.<p>ಈರುಳ್ಳಿ ಖರೀದಿಸಲು ಹೆಣಗಾಡುತ್ತಿರುವ ಬಡಜನರ ಕಣ್ಣೀರನ್ನು, ‘ನಾನು ಈರುಳ್ಳಿ ತಿನ್ನುವುದಿಲ್ಲ’ ಎನ್ನುವ ಮೂಲಕ ಹಣಕಾಸು ಸಚಿವರು ಅಣಕಿಸುತ್ತಿದ್ದಾರೆ<br /><strong>- ರಾಘವ್ ಛಡ್ಡಾ, ಎಎಪಿ ನಾಯಕ</strong></p>.<p>***</p>.<p>ನಾನು ಪಕ್ಕಾ ಸಸ್ಯಾಹಾರಿ. ನಾನು ಈವರೆಗೂ ಈರುಳ್ಳಿಯ ರುಚಿ ನೋಡಿಯೇ ಇಲ್ಲ. ಈರುಳ್ಳಿ ಬೆಲೆ ಏರಿಕೆ ಆಗಿರುವುದು ನನಗೆ ಹೇಗೆ ಗೊತ್ತಾಗುತ್ತದೆ<br /><strong>- ಅಶ್ವಿನಿ ಚೌಬೆ, ಕೇಂದ್ರ ಸಚಿವ</strong></p>.<p><strong>ಆಧಾರ:</strong> ಪಿಟಿಐ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>