ದೆಹಲಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ಪ್ರಧಾನಿ ಈಗ ಭಾಷಣ ಮಾಡುತ್ತಲೇ ಇದ್ದಾರೆ, ಆದರೆ ಆರು ತಿಂಗಳ ನಂತರ, ಅವರಿಗೆ ತಮ್ಮ ಮನೆ ಬಿಟ್ಟು ಹೊರಬರುವುದಕ್ಕೂ ಸಾಧ್ಯವಾಗುವುದಿಲ್ಲ. ಭಾರತದ ಯುವಜನರು ಬಡಿಗೆ ತೆಗೆದುಕೊಂಡು ಪ್ರಧಾನಿಗೆ ಬಡಿಯುತ್ತಾರೆ ಮತ್ತು ತಮಗೆ ಉದ್ಯೋಗ ಒದಗಿಸುವುದರ ಹೊರತಾಗಿ ಈ ದೇಶದ ಉದ್ಧಾರ ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಅರ್ಥೈಸುತ್ತಾರೆ" ಎಂದು ಹೇಳಿದರು.