‘ರೈಲುಗಳ ಸುರಕ್ಷತೆಗೆ ಸಂಬಂಧಿಸಿ ನಿತ್ಯವೂ ಕಣ್ಗಾವಲಿರಿಸಬೇಕು. ರೈಲ್ವೆಯಿಂದ ವೇತನ ಪಡೆಯುವ ಪ್ರತಿಯೊಬ್ಬರ ಮೇಲೂ ಸುರಕ್ಷತೆ ಖಾತರಿಪಡಿಸುವ ಜವಾಬ್ಧಾರಿ ಇದೆ. ಈ ವಿಷಯದಲ್ಲಿ ನಿರ್ವಹಣೆಯೂ ಮಹತ್ವದ ಪಾತ್ರ ವಹಿಸುತ್ತದೆ. ಮುಂಗಾರು ಆರಂಭಗೊಳ್ಳುತ್ತಿರುವ ಕಾರಣ ಸುರಕ್ಷತೆ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು’ ಎಂದಿದ್ದಾರೆ.