ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರಿಗಾಗಿ ಭೂಮಿ ಹಗರಣ: ಮೊದಲ ಆರೋಪ ಪಟ್ಟಿ ಸಲ್ಲಿಕೆ

ಇದೇ 16ಕ್ಕೆ ವಿಚಾರಣೆ ನಿಗದಿಪಡಿಸಿದ ವಿಶೇಷ ನ್ಯಾಯಾಲಯ
Published 9 ಜನವರಿ 2024, 20:44 IST
Last Updated 9 ಜನವರಿ 2024, 20:44 IST
ಅಕ್ಷರ ಗಾತ್ರ

ನವದೆಹಲಿ: ರೈಲ್ವೆ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ‘ನೌಕರಿಗಾಗಿ ಭೂಮಿ’ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ, ಅವರ ಪುತ್ರಿಯಾದ ಸಂಸದೆ ಮಿಸಾ ಭಾರ್ತಿ ವಿರುದ್ಧ ಜಾರಿ ನಿರ್ದೇಶನಾಲಯವು ಮಂಗಳವಾರ ಮೊದಲ ಆರೋಪಟ್ಟ ಪಟ್ಟಿ ಸಲ್ಲಿಸಿದೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಮತ್ತೊಬ್ಬ ಮಗಳು ಹೇಮಾ ಯಾದವ್ (40), ಯಾದವ್ ಕುಟುಂಬಕ್ಕೆ ಹತ್ತಿರದ ಸಂಬಂಧಿ ಎನ್ನಲಾದ ಅಮಿತ್ ಕಾತ್ಯಾಲ್ (49), ರೈಲ್ವೆ ನೌಕರ ಹಾಗೂ ಈ ಯೋಜನೆಯ ಫಲಾನುಭವಿ ಎನ್ನಲಾದ ಹೃದಯಾನಂದ ಚೌಧರಿ, ಇನ್ಫೊಸಿಸ್ಟಮ್ಸ್ ಪ್ರೈ. ಲಿ. ಹಾಗೂ ಎ.ಬಿ. ಎಕ್ಸ್‌ಪೋರ್ಟ್ಸ್ ಪ್ರೈ. ಲಿ. ಹಾಗೂ ಅವುಗಳ ನಿರ್ದೇಶಕ ಶಾರಿಕುಲ್ ಬಾರಿ ಅವರ ಹೆಸರುಗಳು ಸಹ ಆರೋಪ ಪಟ್ಟಿಯಲ್ಲಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT