<p><strong>ನವದೆಹಲಿ</strong>: ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಭಾರತೀಯ ರೈಲ್ವೆಯು ಕಲ್ಲಿದ್ದಲು ಸಾಗಣೆ ಸಾಮರ್ಥ್ಯವನ್ನು ಸದ್ಯ ಇರುವ 660 ದಶಲಕ್ಷ ಟನ್ಗಳನ್ನು 2030ರ ವೇಳೆಗೆ 1,200 ದಶಲಕ್ಷ ಟನ್ಗಳಿಗೆ ಹೆಚ್ಚಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸಾರಿಗೆ ಸಂಸ್ಥೆ ನಡೆಸಿದ ಆಂತರಿಕ ಅಧ್ಯಯನ ವರದಿ ಹೇಳಿದೆ.</p>.<p>2030ರ ವೇಳೆಗೆ ದೇಶದಲ್ಲಿ ರೈಲುಗಳ ಮೂಲಕ ಕಲ್ಲಿದ್ದಲು ಸಾಗಣೆಯ ಸಂಭವನೀಯ ಪ್ರಮಾಣ ಕಂಡುಕೊಳ್ಳಲು ರೈಲ್ವೆ ನಡೆಸಿದ ಆಂತರಿಕ ಅಧ್ಯಯನವು, ಮುಂಬರುವ ದಿನಗಳಲ್ಲಿ ಹೆಚ್ಚುವ ಕಲ್ಲಿದ್ದಲು ಸಾಗಣೆಯ ಬೇಡಿಕೆಯನ್ನು ಪೂರೈಸಲು ಸರಕು ಸಾಗಣೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾದ ತುರ್ತು ಅಗತ್ಯವನ್ನೂ ಒತ್ತಿಹೇಳಿದೆ. </p>.<p>ಸದ್ಯ ರೈಲ್ವೆಯ ಮೂಲಕ ಸಾಗಣೆಯಾಗುತ್ತಿರುವ ಸರಕುಗಳ ಪೈಕಿ ಶೇ 48ರಷ್ಟು ಸರಕು ಕಲ್ಲಿದ್ದಲೇ ಆಗಿದೆ. ಮುಂದಿನ 6–7 ವರ್ಷಗಳಲ್ಲಿ ಈ ನಿಗದಿತ ಗುರಿ ಸಾಧಿಸಲು, ಒಡಿಶಾ ಮತ್ತು ಛತ್ತೀಸಗಢ ಸೇರಿದಂತೆ ಕಲ್ಲಿದ್ದಲು ಉತ್ಪಾದಿಸುವ ಪ್ರಮುಖ ರಾಜ್ಯಗಳ ಮೂಲಕ ಸಂಪರ್ಕಿಸುವ ಪೂರ್ವ ಕರಾವಳಿ ಮತ್ತು ಪೂರ್ವ ಪಶ್ಚಿಮ ಸರಕು ಸಾಗಣೆ ಕಾರಿಡಾರ್ಗಳು ಸೇರಿದಂತೆ ಕೆಲವು ಪ್ರಮುಖ ಯೋಜನೆಗಳನ್ನು ತ್ವರಿತಗೊಳಿಸಲು ಅಧ್ಯಯನ ವರದಿಯಲ್ಲಿ ಸಲಹೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಭಾರತೀಯ ರೈಲ್ವೆಯು ಕಲ್ಲಿದ್ದಲು ಸಾಗಣೆ ಸಾಮರ್ಥ್ಯವನ್ನು ಸದ್ಯ ಇರುವ 660 ದಶಲಕ್ಷ ಟನ್ಗಳನ್ನು 2030ರ ವೇಳೆಗೆ 1,200 ದಶಲಕ್ಷ ಟನ್ಗಳಿಗೆ ಹೆಚ್ಚಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸಾರಿಗೆ ಸಂಸ್ಥೆ ನಡೆಸಿದ ಆಂತರಿಕ ಅಧ್ಯಯನ ವರದಿ ಹೇಳಿದೆ.</p>.<p>2030ರ ವೇಳೆಗೆ ದೇಶದಲ್ಲಿ ರೈಲುಗಳ ಮೂಲಕ ಕಲ್ಲಿದ್ದಲು ಸಾಗಣೆಯ ಸಂಭವನೀಯ ಪ್ರಮಾಣ ಕಂಡುಕೊಳ್ಳಲು ರೈಲ್ವೆ ನಡೆಸಿದ ಆಂತರಿಕ ಅಧ್ಯಯನವು, ಮುಂಬರುವ ದಿನಗಳಲ್ಲಿ ಹೆಚ್ಚುವ ಕಲ್ಲಿದ್ದಲು ಸಾಗಣೆಯ ಬೇಡಿಕೆಯನ್ನು ಪೂರೈಸಲು ಸರಕು ಸಾಗಣೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾದ ತುರ್ತು ಅಗತ್ಯವನ್ನೂ ಒತ್ತಿಹೇಳಿದೆ. </p>.<p>ಸದ್ಯ ರೈಲ್ವೆಯ ಮೂಲಕ ಸಾಗಣೆಯಾಗುತ್ತಿರುವ ಸರಕುಗಳ ಪೈಕಿ ಶೇ 48ರಷ್ಟು ಸರಕು ಕಲ್ಲಿದ್ದಲೇ ಆಗಿದೆ. ಮುಂದಿನ 6–7 ವರ್ಷಗಳಲ್ಲಿ ಈ ನಿಗದಿತ ಗುರಿ ಸಾಧಿಸಲು, ಒಡಿಶಾ ಮತ್ತು ಛತ್ತೀಸಗಢ ಸೇರಿದಂತೆ ಕಲ್ಲಿದ್ದಲು ಉತ್ಪಾದಿಸುವ ಪ್ರಮುಖ ರಾಜ್ಯಗಳ ಮೂಲಕ ಸಂಪರ್ಕಿಸುವ ಪೂರ್ವ ಕರಾವಳಿ ಮತ್ತು ಪೂರ್ವ ಪಶ್ಚಿಮ ಸರಕು ಸಾಗಣೆ ಕಾರಿಡಾರ್ಗಳು ಸೇರಿದಂತೆ ಕೆಲವು ಪ್ರಮುಖ ಯೋಜನೆಗಳನ್ನು ತ್ವರಿತಗೊಳಿಸಲು ಅಧ್ಯಯನ ವರದಿಯಲ್ಲಿ ಸಲಹೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>