<p><strong>ಪುರಿ:</strong> ‘ನವಮಿ ತಿಥಿ’ಯ ಸಂದರ್ಭದಲ್ಲಿ ‘ಸಂಧ್ಯಾ ದರ್ಶನ’ಕ್ಕಾಗಿ ಇಲ್ಲಿನ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಶನಿವಾರ ‘ಬಹುದ ಯಾತ್ರೆ’ ನಡೆಯಲಿರುವುದರಿಂದ ಜನ್ಮಸ್ಥಳದಲ್ಲಿ ಬಲಭದ್ರ, ದೇವಿ ಸುಭದ್ರ ಹಾಗೂ ಸ್ವಾಮಿ ಜಗನ್ನಾಥ ದೇವರ ದರ್ಶನ ಪಡೆಯಲು ಶುಕ್ರವಾರ ಕೊನೆಯ ದಿನವಾಗಿತ್ತು. </p>.<p>ಬಹುದ ಯಾತ್ರೆಯೊಂದಿಗೆ ಎಲ್ಲಾ ದೇವರುಗಳನ್ನು ಮೂಲ ನಿವಾಸ ಎನ್ನಲಾಗುವ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಜೂನ್ 27ರಂದು ಆರಂಭವಾದ 9 ದಿನದ ಯಾತ್ರೆಯು ಶನಿವಾರ ಮುಕ್ತಾಯವಾಗಲಿದೆ. ದರ್ಶನ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಡಿಜಿಪಿ ವೈ.ಬಿ ಖುರಾನಿಯಾ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿ ಮೇಲ್ವಿಚಾರಣೆ ನಡೆಸಿದರು. </p>.<p>‘ಭಕ್ತರು ಸರತಿ ಸಾಲಿನಲ್ಲಿ ದರ್ಶನ ಪಡೆಯುತ್ತಿದ್ದು, ಮುಂಜಾನೆಯಿಂದಲೂ ದರ್ಶನ ಸುಗಮವಾಗಿ ನಡೆಯುತ್ತಿದೆ. ಭಕ್ತರ ಭದ್ರತೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಖಿರಾನಿಯಾ ಹೇಳಿದರು. </p>.<p>ಶುಕ್ರವಾರ ಸಂಜೆ 6 ಗಂಟೆವರೆಗೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿತು. </p>.<p>‘ಪ್ರತಿ ವರ್ಷ, ಆಷಾಢ ಶುಕ್ಲ ಪಕ್ಷ ನವಮಿ ತಿಥಿಯಂದು ಗುಂಡಿಚಾ ದೇವಸ್ಥಾನದಲ್ಲಿ ‘ಸಂಧ್ಯಾ ದರ್ಶನ’ ನಡೆಯುತ್ತದೆ. 9 ದಿನಗಳ ರಥ ಯಾತ್ರೆಯಲ್ಲಿ ಇದು ಪವಿತ್ರ ದಿನವಾಗಿದೆ’ ಎಂದು ಪಂಡಿತ್ ಸೂರ್ಯನಾರಾಯಣ ರಥ್ಶರ್ಮಾ ಹೇಳಿದರು. </p>.<p>ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪುರಿ ನಗರದಲ್ಲಿ ಹೋಟೆಲ್ಗಳ ತಪಾಸಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು. </p>.<p>ಭಾನುವಾರ ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟು, 50 ಮಂದಿ ಗಾಯಗೊಂಡಿದ್ದರು. ಬಳಿಕ ದೇವಾಲಯದ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುರಿ:</strong> ‘ನವಮಿ ತಿಥಿ’ಯ ಸಂದರ್ಭದಲ್ಲಿ ‘ಸಂಧ್ಯಾ ದರ್ಶನ’ಕ್ಕಾಗಿ ಇಲ್ಲಿನ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಶನಿವಾರ ‘ಬಹುದ ಯಾತ್ರೆ’ ನಡೆಯಲಿರುವುದರಿಂದ ಜನ್ಮಸ್ಥಳದಲ್ಲಿ ಬಲಭದ್ರ, ದೇವಿ ಸುಭದ್ರ ಹಾಗೂ ಸ್ವಾಮಿ ಜಗನ್ನಾಥ ದೇವರ ದರ್ಶನ ಪಡೆಯಲು ಶುಕ್ರವಾರ ಕೊನೆಯ ದಿನವಾಗಿತ್ತು. </p>.<p>ಬಹುದ ಯಾತ್ರೆಯೊಂದಿಗೆ ಎಲ್ಲಾ ದೇವರುಗಳನ್ನು ಮೂಲ ನಿವಾಸ ಎನ್ನಲಾಗುವ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಜೂನ್ 27ರಂದು ಆರಂಭವಾದ 9 ದಿನದ ಯಾತ್ರೆಯು ಶನಿವಾರ ಮುಕ್ತಾಯವಾಗಲಿದೆ. ದರ್ಶನ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಡಿಜಿಪಿ ವೈ.ಬಿ ಖುರಾನಿಯಾ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿ ಮೇಲ್ವಿಚಾರಣೆ ನಡೆಸಿದರು. </p>.<p>‘ಭಕ್ತರು ಸರತಿ ಸಾಲಿನಲ್ಲಿ ದರ್ಶನ ಪಡೆಯುತ್ತಿದ್ದು, ಮುಂಜಾನೆಯಿಂದಲೂ ದರ್ಶನ ಸುಗಮವಾಗಿ ನಡೆಯುತ್ತಿದೆ. ಭಕ್ತರ ಭದ್ರತೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಖಿರಾನಿಯಾ ಹೇಳಿದರು. </p>.<p>ಶುಕ್ರವಾರ ಸಂಜೆ 6 ಗಂಟೆವರೆಗೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿತು. </p>.<p>‘ಪ್ರತಿ ವರ್ಷ, ಆಷಾಢ ಶುಕ್ಲ ಪಕ್ಷ ನವಮಿ ತಿಥಿಯಂದು ಗುಂಡಿಚಾ ದೇವಸ್ಥಾನದಲ್ಲಿ ‘ಸಂಧ್ಯಾ ದರ್ಶನ’ ನಡೆಯುತ್ತದೆ. 9 ದಿನಗಳ ರಥ ಯಾತ್ರೆಯಲ್ಲಿ ಇದು ಪವಿತ್ರ ದಿನವಾಗಿದೆ’ ಎಂದು ಪಂಡಿತ್ ಸೂರ್ಯನಾರಾಯಣ ರಥ್ಶರ್ಮಾ ಹೇಳಿದರು. </p>.<p>ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪುರಿ ನಗರದಲ್ಲಿ ಹೋಟೆಲ್ಗಳ ತಪಾಸಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು. </p>.<p>ಭಾನುವಾರ ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟು, 50 ಮಂದಿ ಗಾಯಗೊಂಡಿದ್ದರು. ಬಳಿಕ ದೇವಾಲಯದ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>