<p><strong>ನವದೆಹಲಿ: </strong>ಮಧ್ಯಪ್ರದೇಶದಲ್ಲಿ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಕಮಲನಾಥ್ ಮತ್ತು ಅವರ ಆಪ್ತರ ಮನೆ ಮೇಲೆ ನಡೆಸಿದ ದಾಳಿಯಲ್ಲಿ, ದಾಖಲೆ ಇಲ್ಲದ ಒಟ್ಟು ₹281 ನಗದು ಪತ್ತೆಯಾಗಿದೆಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ತಿಳಿಸಿದೆ.</p>.<p>‘ವ್ಯಾಪಾರ, ರಾಜಕೀಯ ಚಟುವಟಿಕೆ ಮತ್ತು ನಾಗರಿಕ ಸೇವೆ ರೂಪದಲ್ಲಿರಾಜಕಾರಣಿಗಳಿಗೆ ಅಥವಾ ಮತದಾರರಿಗೆ ಹಂಚಲು ₹281 ಕೋಟಿಯನ್ನು ಸಂಗ್ರಹಿಸಲಾಗಿತ್ತು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮಧ್ಯಪ್ರದೇಶದ ವಿವಿಧ ಕಡೆಭಾನುವಾರ ಮತ್ತು ಸೋಮವಾರ ಐಟಿ ದಾಳಿ ನಡೆದಿತ್ತು.</p>.<p>‘ಮಧ್ಯಪ್ರದೇಶದಿಂದ ದೆಹಲಿಯ ಪ್ರಮುಖ ರಾಜಕೀಯ ಪಕ್ಷಕ್ಕೆ ಕಳುಹಿಸಲು ಯತ್ನಿಸುತ್ತಿದ್ದ ₹20 ಕೋಟಿ ಅಕ್ರಮ ಹಣವನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಸಿಬಿಡಿಟಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ದಾಳಿ ವೇಳೆ, ₹14.6 ಕೋಟಿ ನಗದು, ಹುಲಿ ಚರ್ಮ, 252 ಮದ್ಯದ ಬಾಟಲಿ, ದಾಖಲೆ ಪತ್ರ, ಡೈರಿಗಳು,ಕಂಪ್ಯೂಟರ್ ಫೈಲ್ಗಳು, ನಕಲಿ ಬಿಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ದಾಖಲೆ ಪತ್ರಗಳಲ್ಲಿ ₹230 ಕೋಟಿ ಅಕ್ರಮ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಮಧ್ಯಪ್ರದೇಶದಲ್ಲಿ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಕಮಲನಾಥ್ ಮತ್ತು ಅವರ ಆಪ್ತರ ಮನೆ ಮೇಲೆ ನಡೆಸಿದ ದಾಳಿಯಲ್ಲಿ, ದಾಖಲೆ ಇಲ್ಲದ ಒಟ್ಟು ₹281 ನಗದು ಪತ್ತೆಯಾಗಿದೆಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ತಿಳಿಸಿದೆ.</p>.<p>‘ವ್ಯಾಪಾರ, ರಾಜಕೀಯ ಚಟುವಟಿಕೆ ಮತ್ತು ನಾಗರಿಕ ಸೇವೆ ರೂಪದಲ್ಲಿರಾಜಕಾರಣಿಗಳಿಗೆ ಅಥವಾ ಮತದಾರರಿಗೆ ಹಂಚಲು ₹281 ಕೋಟಿಯನ್ನು ಸಂಗ್ರಹಿಸಲಾಗಿತ್ತು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮಧ್ಯಪ್ರದೇಶದ ವಿವಿಧ ಕಡೆಭಾನುವಾರ ಮತ್ತು ಸೋಮವಾರ ಐಟಿ ದಾಳಿ ನಡೆದಿತ್ತು.</p>.<p>‘ಮಧ್ಯಪ್ರದೇಶದಿಂದ ದೆಹಲಿಯ ಪ್ರಮುಖ ರಾಜಕೀಯ ಪಕ್ಷಕ್ಕೆ ಕಳುಹಿಸಲು ಯತ್ನಿಸುತ್ತಿದ್ದ ₹20 ಕೋಟಿ ಅಕ್ರಮ ಹಣವನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಸಿಬಿಡಿಟಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ದಾಳಿ ವೇಳೆ, ₹14.6 ಕೋಟಿ ನಗದು, ಹುಲಿ ಚರ್ಮ, 252 ಮದ್ಯದ ಬಾಟಲಿ, ದಾಖಲೆ ಪತ್ರ, ಡೈರಿಗಳು,ಕಂಪ್ಯೂಟರ್ ಫೈಲ್ಗಳು, ನಕಲಿ ಬಿಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ದಾಖಲೆ ಪತ್ರಗಳಲ್ಲಿ ₹230 ಕೋಟಿ ಅಕ್ರಮ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>