ಹಣದುಬ್ಬರ, ನಿರುದ್ಯೋಗ, ಹಿಂಸಾಕೃತ್ಯಗಳು ಮತ್ತು ಸಾಮಾಜಿಕ ಶಾಂತಿಭಂಗಗಳಂತಹ ಗಂಭೀರ ಸಮಸ್ಯೆಗಳು ರಾಷ್ಟ್ರದಲ್ಲಿ ಶಾಪವಾಗಿ ಪರಿಣಮಿಸಿವೆ. ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆರ್ಎಸ್ಎಸ್ ಮತಾಂತರ ಮತ್ತು ಜನಸಂಖ್ಯಾ ನೀತಿ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ಬಿಜೆಪಿ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಹೆಣೆದಿರುವ ಯೋಜಿತ ಕುತಂತ್ರ ಇದಾಗಿದೆ ಎಂದು ಮಾಯಾವತಿ ಗಂಭೀರ ಆರೋಪ ಮಾಡಿದ್ದಾರೆ.