ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ಸುಪ್ರೀಂ ಕೋರ್ಟ್ ತೀರ್ಪು ಜಾರಿಯ ವಿರುದ್ಧದ ಪ್ರತಿಭಟನೆಯ ತೀವ್ರತೆಯನ್ನು ಬಿಜೆಪಿ ಇನ್ನಷ್ಟು ಹೆಚ್ಚಿಸಿದೆ. ಪಕ್ಷ ಆಯೋಜಿಸಿದ್ದಆರು ದಿನಗಳ ‘ಶಬರಿಮಲೆ ಉಳಿಸಿ ಯಾತ್ರೆ’ ಸೋಮವಾರ ಸಮಾರೋಪಗೊಂಡಿದ್ದು, ಬೃಹತ್ ರ್ಯಾಲಿಯನ್ನು ಸಂಘಟಿಸಲಾಯಿತು.