ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರಪ್ರವೇಶವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಂಘರ್ಷಕ್ಕೆ ಕಾರಣರಾಗಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರೆ ಜಾಮೀನು ಪಡೆಯುವುದು ಕೂಡಾ ಕಷ್ಟವಾಗಲಿದೆ.ಪ್ರತಿಭಟನೆ ವೇಳೆ ಕೆಲವರು ಪೊಲೀಸ್ ವಾಹನ, ಕೆಎಸ್ಆರ್ಟಿಸಿ ವಾಹನಗಳನ್ನು ಹಾನಿಮಾಡಿದ್ದರು. ಇಂಥಾ ಪ್ರಕರಣದಲ್ಲಿ ಬಂಧಿಯಾದವರು ಜಾಮೀನು ಪಡೆದು ಬಂಧಮುಕ್ತವಾಗಬೇಕಾದರೆ ₹10,000 ದಿಂದ ₹13ಲಕ್ಷದ ವರೆಗೆ ದಂಡ ಪಾವತಿಸಬೇಕಾಗುತ್ತದೆ ಎಂದು ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.