ಪ್ರತಿಭಟನೆ: 3,345 ಮಂದಿ ಬಂಧನ
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಭಾನುವಾರದ ವರೆಗೆ 3,345 ಮಂದಿಯನ್ನು ಬಂಧಿಸಲಾಗಿದೆ.ಕೇರಳದಾದ್ಯಂತ 517 ಪ್ರಕರಣಗಳು ದಾಖಲಾಗಿವೆ.
ಭಾನುವಾರ ಬೆಳಗ್ಗೆ ರಾಹುಲ್ ಈಶ್ವರ್ ಅವರನ್ನು ಬಂಧಿಸುವ ಮೂಲಕ ಅಕ್ಟೋಬರ್ 26ರ ವರೆಗೆ 3,346 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ ಕಳೆದ 12 ಗಂಟೆಗಳಲ್ಲಿ 500ಕ್ಕಿಂತಲೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.ತಿರುವನಂತಪುಪರಂ, ಕೋಯಿಕ್ಕೋಡ್ ಮತ್ತು ಎರ್ನಾಕುಳಂ ಜಿಲ್ಲೆಯಲ್ಲಿಯೂ ಇದೇ ರೀತಿ ಬಂಧನ ನಡೆದಿದೆ.
ಇಲ್ಲಿಯವರೆಗೆ 122 ಮಂದಿ ಪೊಲೀಸರ ವಶದಲ್ಲಿದ್ದು, ಉಳಿದವರನ್ನು ಜಾಮೀನು ಮೂಲಕ ಬಂಧಮುಕ್ತಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.