<p><strong>ನವದೆಹಲಿ/ ತಿರುವನಂತಪುರ</strong>: ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ವಿವಿಧ ಧರ್ಮಗಳ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ಅಂತಿಮ ವಿಚಾರಣೆಯನ್ನು ಒಂಬತ್ತು ನ್ಯಾಯಮೂರ್ತಿಗಳ ವಿಸ್ತೃತ ಪೀಠವು ಏಪ್ರಿಲ್ 7ರಂದು ಆರಂಭಿಸಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.</p><p>ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠವು, ಈ ಪ್ರಕರಣದ ವಿಚಾರಣೆ ಏಪ್ರಿಲ್ 22ರಂದು ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದಿತು. </p><p>ಮಾರ್ಚ್ 14 ಅಥವಾ ಅದಕ್ಕೂ ಮೊದಲು ತಮ್ಮ ವಾದಗಳನ್ನು ಲಿಖಿತವಾಗಿ ಸಲ್ಲಿಸುವಂತೆ ಪೀಠವು ಕಕ್ಷಿದಾರರಿಗೆ ಸೂಚಿಸಿದೆ. ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ತೀರ್ಪಿನ ಮರುಪರಿಶೀಲನೆಗೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.</p><p>ತೀರ್ಪಿನ ಮರುಪರಿಶೀಲನೆಯನ್ನು ಬೆಂಬಲಿಸುವ ಕಕ್ಷಿದಾರರಿಗೆ ನೋಡಲ್ ವಕೀಲರಾಗಿ ಕೃಷ್ಣ ಕುಮಾರ್ ಸಿಂಗ್ ಅವರನ್ನು ಹಾಗೂ ಮರುಪರಿಶೀಲನೆ ವಿರೋಧಿಸುವವರಿಗೆ ನೋಡಲ್ ವಕೀಲರಾಗಿ ಶಾಶ್ವತಿ ಪಾರಿ ಅವರನ್ನು ಪೀಠವು ನೇಮಿಸಿದೆ.</p>.ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಎಲ್ಡಿಎಫ್ ಸ್ಪಷ್ಟನೆ ಕೋರಿದ ಕಾಂಗ್ರೆಸ್.ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ಬಳ್ಳಾರಿಯಲ್ಲಿ ಮತ್ತೆ ಕೇರಳ ಎಸ್ಐಟಿ ಶೋಧ .<p>‘ಹಿರಿಯ ವಕೀಲರಾದ ಶಿವಂ ಸಿಂಗ್ ಮತ್ತು ಕೆ.ಪರಮೇಶ್ವರ್ ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಕ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ತೆಗೆದುಕೊಂಡ ನಿಲುವನ್ನು ಶಿವಂ ಸಿಂಗ್ ಅವರು ಈ ನ್ಯಾಯಾಲಯಕ್ಕೆ ಸಲ್ಲಿಸುವರು’ ಎಂದು ಸಿಜೆಐ ಹೇಳಿದರು.</p><p>‘ಶಬರಿಮಲೆ ಪ್ರಕರಣದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 7ರಂದು ಬೆಳಿಗ್ಗೆ 10:30ಕ್ಕೆ ಪ್ರಾರಂಭಿಸಲಾಗುವುದು. ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದವರು ಅಥವಾ ಅವರನ್ನು ಬೆಂಬಲಿಸುವವರ ವಾದವನ್ನು ಏಪ್ರಿಲ್ 7ರಿಂದ 9ರವರೆಗೆ ಆಲಿಸಲಾಗುವುದು. ಅರ್ಜಿಯನ್ನು ವಿರೋಧಿಸುವವರ ವಾದವನ್ನು ಏಪ್ರಿಲ್ 14ರಿಂದ 16ರವರೆಗೆ ಆಲಿಸಲಾಗುವುದು. ಎರಡೂ ಕಡೆಯವರ ಹೆಚ್ಚುವರಿ ವಾದಗಳು ಇದ್ದಲ್ಲಿ, ಏಪ್ರಿಲ್ 21ಕ್ಕೆ ಆಲಿಸಲಾಗುವುದು. ಆ ಬಳಿಕ ಅಮಿಕಸ್ ಕ್ಯೂರಿ ತಮ್ಮ ವಾದ ಮುಂದಿಡುವರು’ ಎಂದು ಪೀಠ ತಿಳಿಸಿದೆ.</p>.ಶಬರಿಮಲೆ ಚಿನ್ನ ಕಳವು: ನಟ ಜಯರಾಂಗೆ ಇ.ಡಿ ಸಮನ್ಸ್.LDF ಸರ್ಕಾರದ ಆದೇಶದ ಮೇರೆಗೆ ಶಬರಿಮಲೆ ತನಿಖೆಯ ಮಾಹಿತಿ ಸೋರಿಕೆ: ಕಾಂಗ್ರೆಸ್ ಸಂಸದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ ತಿರುವನಂತಪುರ</strong>: ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ವಿವಿಧ ಧರ್ಮಗಳ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ಅಂತಿಮ ವಿಚಾರಣೆಯನ್ನು ಒಂಬತ್ತು ನ್ಯಾಯಮೂರ್ತಿಗಳ ವಿಸ್ತೃತ ಪೀಠವು ಏಪ್ರಿಲ್ 7ರಂದು ಆರಂಭಿಸಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.</p><p>ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠವು, ಈ ಪ್ರಕರಣದ ವಿಚಾರಣೆ ಏಪ್ರಿಲ್ 22ರಂದು ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದಿತು. </p><p>ಮಾರ್ಚ್ 14 ಅಥವಾ ಅದಕ್ಕೂ ಮೊದಲು ತಮ್ಮ ವಾದಗಳನ್ನು ಲಿಖಿತವಾಗಿ ಸಲ್ಲಿಸುವಂತೆ ಪೀಠವು ಕಕ್ಷಿದಾರರಿಗೆ ಸೂಚಿಸಿದೆ. ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ತೀರ್ಪಿನ ಮರುಪರಿಶೀಲನೆಗೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.</p><p>ತೀರ್ಪಿನ ಮರುಪರಿಶೀಲನೆಯನ್ನು ಬೆಂಬಲಿಸುವ ಕಕ್ಷಿದಾರರಿಗೆ ನೋಡಲ್ ವಕೀಲರಾಗಿ ಕೃಷ್ಣ ಕುಮಾರ್ ಸಿಂಗ್ ಅವರನ್ನು ಹಾಗೂ ಮರುಪರಿಶೀಲನೆ ವಿರೋಧಿಸುವವರಿಗೆ ನೋಡಲ್ ವಕೀಲರಾಗಿ ಶಾಶ್ವತಿ ಪಾರಿ ಅವರನ್ನು ಪೀಠವು ನೇಮಿಸಿದೆ.</p>.ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಎಲ್ಡಿಎಫ್ ಸ್ಪಷ್ಟನೆ ಕೋರಿದ ಕಾಂಗ್ರೆಸ್.ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ಬಳ್ಳಾರಿಯಲ್ಲಿ ಮತ್ತೆ ಕೇರಳ ಎಸ್ಐಟಿ ಶೋಧ .<p>‘ಹಿರಿಯ ವಕೀಲರಾದ ಶಿವಂ ಸಿಂಗ್ ಮತ್ತು ಕೆ.ಪರಮೇಶ್ವರ್ ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಕ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ತೆಗೆದುಕೊಂಡ ನಿಲುವನ್ನು ಶಿವಂ ಸಿಂಗ್ ಅವರು ಈ ನ್ಯಾಯಾಲಯಕ್ಕೆ ಸಲ್ಲಿಸುವರು’ ಎಂದು ಸಿಜೆಐ ಹೇಳಿದರು.</p><p>‘ಶಬರಿಮಲೆ ಪ್ರಕರಣದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 7ರಂದು ಬೆಳಿಗ್ಗೆ 10:30ಕ್ಕೆ ಪ್ರಾರಂಭಿಸಲಾಗುವುದು. ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದವರು ಅಥವಾ ಅವರನ್ನು ಬೆಂಬಲಿಸುವವರ ವಾದವನ್ನು ಏಪ್ರಿಲ್ 7ರಿಂದ 9ರವರೆಗೆ ಆಲಿಸಲಾಗುವುದು. ಅರ್ಜಿಯನ್ನು ವಿರೋಧಿಸುವವರ ವಾದವನ್ನು ಏಪ್ರಿಲ್ 14ರಿಂದ 16ರವರೆಗೆ ಆಲಿಸಲಾಗುವುದು. ಎರಡೂ ಕಡೆಯವರ ಹೆಚ್ಚುವರಿ ವಾದಗಳು ಇದ್ದಲ್ಲಿ, ಏಪ್ರಿಲ್ 21ಕ್ಕೆ ಆಲಿಸಲಾಗುವುದು. ಆ ಬಳಿಕ ಅಮಿಕಸ್ ಕ್ಯೂರಿ ತಮ್ಮ ವಾದ ಮುಂದಿಡುವರು’ ಎಂದು ಪೀಠ ತಿಳಿಸಿದೆ.</p>.ಶಬರಿಮಲೆ ಚಿನ್ನ ಕಳವು: ನಟ ಜಯರಾಂಗೆ ಇ.ಡಿ ಸಮನ್ಸ್.LDF ಸರ್ಕಾರದ ಆದೇಶದ ಮೇರೆಗೆ ಶಬರಿಮಲೆ ತನಿಖೆಯ ಮಾಹಿತಿ ಸೋರಿಕೆ: ಕಾಂಗ್ರೆಸ್ ಸಂಸದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>