ಹರಿಪ್ರಿಯಾ ಪಟೇಲ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಅವರ ಮನೆ ರಾಷ್ಟ್ರೀಯ ಹೆದ್ದಾರಿ 10ರಲ್ಲಿದ್ದು, ಹೆದ್ದಾರಿಗಳಲ್ಲಿ ಪದೇ ಪದೇ ರಸ್ತೆ ರಿಪೇರಿ, ಅಗೆಯುವುದು, ಗುಂಡಿ ತೋಡುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿರುತ್ತವೆ. ಸಂಚಾರ ಅಸ್ತವ್ಯಸ್ತ ಆಗುತ್ತದೆ. ಸಾರ್ವಜನಿಕ ಹಣವೂ ಪೋಲು ಎಂದು ಹೇಳಿದ್ದಾರೆ.