ತರೂರ್ ಅವರು ಕಳೆದ ಅಕ್ಟೋಬರ್ 28ರಂದು ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಈ ಭಾಷಣ ಮಾಡಿದ್ದರು. ‘ಶಿವಲಿಂಗದ ಮೇಲಿನ ಚೇಳು’ ಹೋಲಿಕೆ ಅಸಾಧಾರಣವಾದ ರೂಪಕ ಎಂದೂ ತರೂರ್ ಬಣ್ಣಿಸಿದ್ದರು. ಅದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ತಕ್ಷಣವೇ ಪ್ರತಿಕ್ರಿಯಿಸಿದ ತರೂರ್, ‘ಅದು ನನ್ನ ಹೇಳಿಕೆ ಅಲ್ಲ. ಈ ದಾಖಲೆ 6 ವರ್ಷಗಳಿಂದ ಸಾರ್ವಜನಿಕವಾಗಿ ಲಭ್ಯವಿದೆ. ಅದನ್ನಷ್ಟೇ ಉಲ್ಲೇಖಿಸಿದ್ದೇನೆ’ ಎಂದಿದ್ದರು.