ಪತಿ ಮೃತಪಟ್ಟ ಬಳಿಕ ಏಕಾಂಗಿಯಾದ ಉತ್ತರ ಪ್ರದೇಶದ ಶಹಿಬಾಬಾದ್ ನಿವಾಸಿ ರಾಜಕುಮಾರಿ ತ್ಯಾಗಿ (77) ಅವರು ಜಮೀನಿನ ದಾಖಲೆಗಳು ಮತ್ತು ಉಯಿಲು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಿನ ಜ್ಞಾನ ಪಡೆದುಕೊಳ್ಳಲು ಮುಂದಾದರು. ಇದಕ್ಕಾಗಿ ಮೂರು ವರ್ಷದ ಕಾನೂನು ಪದವಿ ಪಡೆಯಲು ಆಸಕ್ತಿ ವಹಿಸಿದರು. ಆದರೆ, ಅವರಿಗೆ ಬಿಸಿಐ ರೂಪಿಸಿದ ನಿಯಮದ ಅನ್ವಯ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಲಾಯಿತು.