ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಹತ್ಯೆ ಮತ್ತು ಜಾರ್ಖಂಡ್ನಲ್ಲಿ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣಗಳನ್ನು ಖಂಡಿಸದಿರುವುದು ಇವರ ಸಣ್ಣ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ನರೋತ್ತಮ ಮಿಶ್ರಾ ಆರೋಪಿಸಿದ್ದಾರೆ.
ಇತ್ತೀಚೆಗೆ, ಜಾರ್ಖಂಡ್ನಲ್ಲಿ ನಮ್ಮ ಮಗಳಿಗೆ ಬೆಂಕಿ ಹಚ್ಚಲಾಯಿತು. ಅವರು ಏನಾದರು ಹೇಳಿದರೆ? ಇಲ್ಲ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಇಂತಹ ಘಟನೆಯಾಗಿದ್ದಿದ್ದರೆ ನಾಸಿರುದ್ದೀನ್ ಶಾ ಅವರಿಗೆ ದೇಶದಲ್ಲಿರಲು ಭಯವಾಗುತ್ತಿತ್ತು. ಪ್ರಶಸ್ತಿ ವಾಪಸ್ ಮಾಡುವ ಗ್ಯಾಂಗ್ ಕೂಡ ಸಕ್ರಿಯವಾಗುತ್ತಿತ್ತು ಹಾಗೂ ಅವರೆಲ್ಲರೂ ಕೂಗಾಡುತ್ತಿದ್ದರು ಎಂದು ಮಿಶ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.