<p><strong>ರೇವಾಡಿ</strong>: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘ರಾಹುಲ್ ಬಾಬಾ... ನಿಮಗೆ ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ವಿಸ್ತೃತ ರೂಪ ಏನೆಂದು ಗೊತ್ತೇ? ಮುಂಗಾರು ಮತ್ತು ಹಿಂಗಾರಿನಲ್ಲಿ ಯಾವ ಬೆಳೆ ಬೆಳೆಯುತ್ತಾರೆ ಎಂಬುದು ತಿಳಿದಿದೆಯೇ’ ಎಂದು ಶುಕ್ರವಾರ ಪ್ರಶ್ನಿಸಿದರು.</p>.<p>ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಭ್ರಷ್ಟಾಚಾರ ಮತ್ತು ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>‘ಎಂಎಸ್ಪಿ’ ಎಂದು ಹೇಳಿದರೆ ಮತಗಳು ಬರುತ್ತವೆ ಎಂದು ರಾಹುಲ್ ಬಾಬಾ ಅವರಿಗೆ ಕೆಲ ಎನ್ಜಿಒಗಳು ತಿಳಿಸಿವೆ. ಆದರೆ ಎಂಎಸ್ಪಿ ವಿಸ್ತೃತ ರೂಪ ಏನೆಂದು ಗೊತ್ತೇ ಎಂದು ಲೇವಡಿ ಮಾಡಿದರು.</p>.<p>‘ಹರಿಯಾಣದ ಬಿಜೆಪಿ ಸರ್ಕಾರವು 24 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿದೆ. ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎಷ್ಟು ಬೆಳೆಗಳಿಗೆ ಎಂಎಸ್ಪಿ ನೀಡಲಾಗುತ್ತಿದೆ’ ಎಂದು ಪ್ರಶ್ನಿಸಿದರು.</p>.<p>ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಒಂದು ಕ್ವಿಂಟಲ್ ಭತ್ತಕ್ಕೆ ₹1,300 ನೀಡಲಾಗುತ್ತಿತ್ತು. ಸದ್ಯ ಕ್ವಿಂಟಲ್ ಭತ್ತಕ್ಕೆ ₹2,300 ನೀಡಲಾಗುತ್ತಿದೆ. ಹರಿಯಾಣದಲ್ಲಿ ಮತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಕ್ವಿಂಟಲ್ ಭತ್ತಕ್ಕೆ ₹3,100 ನೀಡಲಾಗುವುದು ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೇವಾಡಿ</strong>: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘ರಾಹುಲ್ ಬಾಬಾ... ನಿಮಗೆ ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ವಿಸ್ತೃತ ರೂಪ ಏನೆಂದು ಗೊತ್ತೇ? ಮುಂಗಾರು ಮತ್ತು ಹಿಂಗಾರಿನಲ್ಲಿ ಯಾವ ಬೆಳೆ ಬೆಳೆಯುತ್ತಾರೆ ಎಂಬುದು ತಿಳಿದಿದೆಯೇ’ ಎಂದು ಶುಕ್ರವಾರ ಪ್ರಶ್ನಿಸಿದರು.</p>.<p>ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಭ್ರಷ್ಟಾಚಾರ ಮತ್ತು ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>‘ಎಂಎಸ್ಪಿ’ ಎಂದು ಹೇಳಿದರೆ ಮತಗಳು ಬರುತ್ತವೆ ಎಂದು ರಾಹುಲ್ ಬಾಬಾ ಅವರಿಗೆ ಕೆಲ ಎನ್ಜಿಒಗಳು ತಿಳಿಸಿವೆ. ಆದರೆ ಎಂಎಸ್ಪಿ ವಿಸ್ತೃತ ರೂಪ ಏನೆಂದು ಗೊತ್ತೇ ಎಂದು ಲೇವಡಿ ಮಾಡಿದರು.</p>.<p>‘ಹರಿಯಾಣದ ಬಿಜೆಪಿ ಸರ್ಕಾರವು 24 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿದೆ. ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎಷ್ಟು ಬೆಳೆಗಳಿಗೆ ಎಂಎಸ್ಪಿ ನೀಡಲಾಗುತ್ತಿದೆ’ ಎಂದು ಪ್ರಶ್ನಿಸಿದರು.</p>.<p>ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಒಂದು ಕ್ವಿಂಟಲ್ ಭತ್ತಕ್ಕೆ ₹1,300 ನೀಡಲಾಗುತ್ತಿತ್ತು. ಸದ್ಯ ಕ್ವಿಂಟಲ್ ಭತ್ತಕ್ಕೆ ₹2,300 ನೀಡಲಾಗುತ್ತಿದೆ. ಹರಿಯಾಣದಲ್ಲಿ ಮತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಕ್ವಿಂಟಲ್ ಭತ್ತಕ್ಕೆ ₹3,100 ನೀಡಲಾಗುವುದು ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>