<p><strong>ಲಖನೌ</strong>: ಪ್ರಗತಿಶೀಲ ಸಮಾಜವಾದಿ ಪಕ್ಷ– ಲೋಹಿಯಾ (ಪಿಎಸ್ಪಿಎಲ್) ಮುಖ್ಯಸ್ಥ ಶಿವಪಾಲ್ ಯಾದವ್ ಅವರು ಯಾದವ ಸಮುದಾಯಕ್ಕಾಗಿ ‘ಯದುಕುಲ ನವೋದಯ ಮಿಷನ್’ ಎಂಬ ಹೊಸ ಸಂಘಟನೆ ರಚಿಸುವುದಾಗಿ ಗುರುವಾರ ಘೋಷಿಸಿದರು.</p>.<p>ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಹೋರಾಟ ನಡೆಸಲಾಗುವುದು. ಯದುಕುಲ ನವೋದಯ ಮಿಷನ್ ಯಾವುದೇ ರಾಜಕೀಯ ಪಕ್ಷ ಪರ ಅಥವಾ ವಿರುದ್ಧ ಅಲ್ಲ ಎಂದು ಯಾದವ್ ಸ್ಪಷ್ಟಪಡಿಸಿದರು. </p>.<p>ಶಿವಪಾಲ್ ಯಾದವ್ ಸಂಘಟನೆ ಪೋಷಕರಾಗಿದ್ದರೆ, ಸಂಭಾಲ್ನ ಮಾಜಿ ಸಂಸದ ಡಿ.ಪಿ. ಯಾದವ್ ಅಧ್ಯಕ್ಷರಾಗಿದ್ದಾರೆ. ಬರಹಗಾರ ವಿಶ್ವಾತ್ಮ ಮಿಷನ್ನ ಸ್ಥಾಪಕ ಸದಸ್ಯರಾಗಿದ್ದಾರೆ.</p>.<p>ಈ ಅಭಿಯಾನವು ಸಮಾಜವಾದಿ ಪಕ್ಷದ ವಿರುದ್ಧದ ಗುರಿಯಾಗಿದೆಯೇ ಎಂಬ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಶಿವಪಾಲ್ ಯಾದವ್ , ‘ಮಿಷನ್ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಥವಾ ಪರವಾಗಿಲ್ಲ ಅಥವಾ ಯಾವುದೇ ರಾಜಕೀಯ ಸಂಘಟನೆಯ ವಿರುದ್ಧವಾಗಿಲ್ಲ. ಸಮುದಾಯದ ಒಗ್ಗಟ್ಟಿಗಾಗಿ ಇದ್ದೇವೆ.ಯಾದವ, ಕುರ್ಮಿ, ಲೋಧಿ ಸೇರಿದಂತೆ ಹಿಂದುಳಿದ ಸಮುದಾಯಗಳ ಸಾಮಾಜಿಕ ಉನ್ನತಿಗಾಗಿ ಮಿಷನ್ ಕೆಲಸ ಮಾಡುತ್ತದೆ’ ಎಂದು ಅವರು ಹೇಳಿದರು.</p>.<p>ಉತ್ತರ ಪ್ರದೇಶದಿಂದ ಪ್ರಾರಂಭವಾಗುವ ಈ ಮಿಷನ್ ಬಿಹಾರ, ಜಾರ್ಖಂಡ್, ರಾಜಸ್ಥಾನ ಮತ್ತು ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳನ್ನು ಒಳಗೊಂಡಿದೆ. ರೈತರು, ಯುವಕರು ಮತ್ತು ಇತರೆ ಹಿಂದುಳಿದ ಸಮುದಾಯಗಳ ಜನರ ಮುಂದೆ ದೊಡ್ಡ ಸವಾಲುಗಳಿವೆ. ಈ ಸಮುದಾಯದ ಜನರಿಗೆ ಶಿಕ್ಷಣ ಮತ್ತು ಒಗ್ಗೂಡಿಸುವ ಗುರಿಯನ್ನು ಮಿಷನ್ ಹೊಂದಿದೆ ಎಂದರು.</p>.<p>‘ನಾವು ನೇತಾಜಿ (ಮುಲಾಯಂ ಸಿಂಗ್ ಯಾದವ್) ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸುತ್ತೇವೆ. ಕಳೆದ ಚುನಾವಣೆಯಲ್ಲಿ ಅವರ ಪರವಾಗಿ ಪ್ರಚಾರ ಮಾಡಿದ್ದೇವೆ ಮತ್ತು ಮುಂದಿನ ಚುನಾವಣೆಯಲ್ಲೂ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಶಿವಪಾಲ್ ಯಾದವ್ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಪ್ರಗತಿಶೀಲ ಸಮಾಜವಾದಿ ಪಕ್ಷ– ಲೋಹಿಯಾ (ಪಿಎಸ್ಪಿಎಲ್) ಮುಖ್ಯಸ್ಥ ಶಿವಪಾಲ್ ಯಾದವ್ ಅವರು ಯಾದವ ಸಮುದಾಯಕ್ಕಾಗಿ ‘ಯದುಕುಲ ನವೋದಯ ಮಿಷನ್’ ಎಂಬ ಹೊಸ ಸಂಘಟನೆ ರಚಿಸುವುದಾಗಿ ಗುರುವಾರ ಘೋಷಿಸಿದರು.</p>.<p>ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಹೋರಾಟ ನಡೆಸಲಾಗುವುದು. ಯದುಕುಲ ನವೋದಯ ಮಿಷನ್ ಯಾವುದೇ ರಾಜಕೀಯ ಪಕ್ಷ ಪರ ಅಥವಾ ವಿರುದ್ಧ ಅಲ್ಲ ಎಂದು ಯಾದವ್ ಸ್ಪಷ್ಟಪಡಿಸಿದರು. </p>.<p>ಶಿವಪಾಲ್ ಯಾದವ್ ಸಂಘಟನೆ ಪೋಷಕರಾಗಿದ್ದರೆ, ಸಂಭಾಲ್ನ ಮಾಜಿ ಸಂಸದ ಡಿ.ಪಿ. ಯಾದವ್ ಅಧ್ಯಕ್ಷರಾಗಿದ್ದಾರೆ. ಬರಹಗಾರ ವಿಶ್ವಾತ್ಮ ಮಿಷನ್ನ ಸ್ಥಾಪಕ ಸದಸ್ಯರಾಗಿದ್ದಾರೆ.</p>.<p>ಈ ಅಭಿಯಾನವು ಸಮಾಜವಾದಿ ಪಕ್ಷದ ವಿರುದ್ಧದ ಗುರಿಯಾಗಿದೆಯೇ ಎಂಬ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಶಿವಪಾಲ್ ಯಾದವ್ , ‘ಮಿಷನ್ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಥವಾ ಪರವಾಗಿಲ್ಲ ಅಥವಾ ಯಾವುದೇ ರಾಜಕೀಯ ಸಂಘಟನೆಯ ವಿರುದ್ಧವಾಗಿಲ್ಲ. ಸಮುದಾಯದ ಒಗ್ಗಟ್ಟಿಗಾಗಿ ಇದ್ದೇವೆ.ಯಾದವ, ಕುರ್ಮಿ, ಲೋಧಿ ಸೇರಿದಂತೆ ಹಿಂದುಳಿದ ಸಮುದಾಯಗಳ ಸಾಮಾಜಿಕ ಉನ್ನತಿಗಾಗಿ ಮಿಷನ್ ಕೆಲಸ ಮಾಡುತ್ತದೆ’ ಎಂದು ಅವರು ಹೇಳಿದರು.</p>.<p>ಉತ್ತರ ಪ್ರದೇಶದಿಂದ ಪ್ರಾರಂಭವಾಗುವ ಈ ಮಿಷನ್ ಬಿಹಾರ, ಜಾರ್ಖಂಡ್, ರಾಜಸ್ಥಾನ ಮತ್ತು ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳನ್ನು ಒಳಗೊಂಡಿದೆ. ರೈತರು, ಯುವಕರು ಮತ್ತು ಇತರೆ ಹಿಂದುಳಿದ ಸಮುದಾಯಗಳ ಜನರ ಮುಂದೆ ದೊಡ್ಡ ಸವಾಲುಗಳಿವೆ. ಈ ಸಮುದಾಯದ ಜನರಿಗೆ ಶಿಕ್ಷಣ ಮತ್ತು ಒಗ್ಗೂಡಿಸುವ ಗುರಿಯನ್ನು ಮಿಷನ್ ಹೊಂದಿದೆ ಎಂದರು.</p>.<p>‘ನಾವು ನೇತಾಜಿ (ಮುಲಾಯಂ ಸಿಂಗ್ ಯಾದವ್) ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸುತ್ತೇವೆ. ಕಳೆದ ಚುನಾವಣೆಯಲ್ಲಿ ಅವರ ಪರವಾಗಿ ಪ್ರಚಾರ ಮಾಡಿದ್ದೇವೆ ಮತ್ತು ಮುಂದಿನ ಚುನಾವಣೆಯಲ್ಲೂ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಶಿವಪಾಲ್ ಯಾದವ್ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>