<p><strong>ಭೋಪಾಲ್/ಇಂದೋರ್</strong> : ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಆಡಿರುವ ವಿವಾದಾತ್ಮಕ ಮಾತುಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸೂಚನೆಯ ಅನುಸಾರ ರಚನೆ ಆಗಿರುವ ವಿಶೇಷ ತಂಡವು (ಎಸ್ಐಟಿ) ತನ್ನ ಕೆಲಸ ಆರಂಭಿಸಿದೆ.</p>.<p>ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಗುರಿಯಾಗಿಸಿಕೊಂಡು ವಿಜಯ್ ಶಾ ಅವರು ಆಕ್ಷೇಪಾರ್ಹ ಮಾತುಗಳನ್ನು ಆಡಿದ ಸ್ಥಳಕ್ಕೆ ತೆರಳಿ, ಅಲ್ಲಿನ ಜನರ ಜೊತೆ ಮಾತುಕತೆ ನಡೆಸುವ ಕೆಲಸವನ್ನು ಮೂವರು ಸದಸ್ಯರ ಎಸ್ಐಟಿ ಶುರು ಮಾಡಿದೆ ಎಂದು ಮೂಲಗಳು ಹೇಳಿವೆ.</p>.<p>ಮಧ್ಯಪ್ರದೇಶದ ಸಾಗರ ವಲಯದ ಐಜಿಪಿ ಪ್ರಮೋದ್ ವರ್ಮಾ ಅವರು ಎಸ್ಐಟಿ ಮುಖ್ಯಸ್ಥರು. ‘ನಾವು ತನಿಖೆಯನ್ನು ಗುರುವಾರ ಆರಂಭಿಸಿದ್ದೇವೆ’ ಎಂದು ಎಸ್ಐಟಿಯ ಸದಸ್ಯರೊಬ್ಬರು ಹೇಳಿದ್ದಾರೆ. ತನಿಖೆಯನ್ನು ಎಸ್ಐಟಿ ಮೂಲಕ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿತ್ತು.</p>.<p>ಮಧ್ಯಪ್ರದೇಶ ಹೈಕೋರ್ಟ್ನ ಸೂಚನೆ ಆಧರಿಸಿ ಪೊಲೀಸರು ವಿಜಯ್ ಶಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ಅನ್ನು ಎಸ್ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.</p>.<p>ಸಚಿವ ವಿಜಯ್ ಶಾ ಅವರನ್ನು ಯಾವಾಗ ವಿಚಾರಣೆಗೆ ಗುರಿಪಡಿಸಲಾಗುತ್ತದೆ ಎಂಬ ಪ್ರಶ್ನೆಗೆ ಹೆಚ್ಚಿನ ವಿವರ ಒದಗಿಸಲು ಎಸ್ಐಟಿ ಸದಸ್ಯರು ನಿರಾಕರಿಸಿದ್ದಾರೆ. ಮೇ 28ರೊಳಗೆ ಪ್ರಥಮ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಎಸ್ಐಟಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.</p>.<p>ವಿಜಯ್ ಶಾ ಆಡಿರುವ ಮಾತುಗಳು ದೇಶವು ನಾಚಿಕೆಪಟ್ಟುಕೊಳ್ಳುವಂತೆ ಮಾಡಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.ವಿಜಯ್ ಶಾ ಕಾಣೆ, ಮಾಹಿತಿ ಕೊಟ್ಟವರಿಗೆ ₹11 ಸಾವಿರ: ಭಿತ್ತಿಪತ್ರ ಅಂಟಿಸಿದ ‘ಕೈ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೋಪಾಲ್/ಇಂದೋರ್</strong> : ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಆಡಿರುವ ವಿವಾದಾತ್ಮಕ ಮಾತುಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸೂಚನೆಯ ಅನುಸಾರ ರಚನೆ ಆಗಿರುವ ವಿಶೇಷ ತಂಡವು (ಎಸ್ಐಟಿ) ತನ್ನ ಕೆಲಸ ಆರಂಭಿಸಿದೆ.</p>.<p>ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಗುರಿಯಾಗಿಸಿಕೊಂಡು ವಿಜಯ್ ಶಾ ಅವರು ಆಕ್ಷೇಪಾರ್ಹ ಮಾತುಗಳನ್ನು ಆಡಿದ ಸ್ಥಳಕ್ಕೆ ತೆರಳಿ, ಅಲ್ಲಿನ ಜನರ ಜೊತೆ ಮಾತುಕತೆ ನಡೆಸುವ ಕೆಲಸವನ್ನು ಮೂವರು ಸದಸ್ಯರ ಎಸ್ಐಟಿ ಶುರು ಮಾಡಿದೆ ಎಂದು ಮೂಲಗಳು ಹೇಳಿವೆ.</p>.<p>ಮಧ್ಯಪ್ರದೇಶದ ಸಾಗರ ವಲಯದ ಐಜಿಪಿ ಪ್ರಮೋದ್ ವರ್ಮಾ ಅವರು ಎಸ್ಐಟಿ ಮುಖ್ಯಸ್ಥರು. ‘ನಾವು ತನಿಖೆಯನ್ನು ಗುರುವಾರ ಆರಂಭಿಸಿದ್ದೇವೆ’ ಎಂದು ಎಸ್ಐಟಿಯ ಸದಸ್ಯರೊಬ್ಬರು ಹೇಳಿದ್ದಾರೆ. ತನಿಖೆಯನ್ನು ಎಸ್ಐಟಿ ಮೂಲಕ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿತ್ತು.</p>.<p>ಮಧ್ಯಪ್ರದೇಶ ಹೈಕೋರ್ಟ್ನ ಸೂಚನೆ ಆಧರಿಸಿ ಪೊಲೀಸರು ವಿಜಯ್ ಶಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ಅನ್ನು ಎಸ್ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.</p>.<p>ಸಚಿವ ವಿಜಯ್ ಶಾ ಅವರನ್ನು ಯಾವಾಗ ವಿಚಾರಣೆಗೆ ಗುರಿಪಡಿಸಲಾಗುತ್ತದೆ ಎಂಬ ಪ್ರಶ್ನೆಗೆ ಹೆಚ್ಚಿನ ವಿವರ ಒದಗಿಸಲು ಎಸ್ಐಟಿ ಸದಸ್ಯರು ನಿರಾಕರಿಸಿದ್ದಾರೆ. ಮೇ 28ರೊಳಗೆ ಪ್ರಥಮ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಎಸ್ಐಟಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.</p>.<p>ವಿಜಯ್ ಶಾ ಆಡಿರುವ ಮಾತುಗಳು ದೇಶವು ನಾಚಿಕೆಪಟ್ಟುಕೊಳ್ಳುವಂತೆ ಮಾಡಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.ವಿಜಯ್ ಶಾ ಕಾಣೆ, ಮಾಹಿತಿ ಕೊಟ್ಟವರಿಗೆ ₹11 ಸಾವಿರ: ಭಿತ್ತಿಪತ್ರ ಅಂಟಿಸಿದ ‘ಕೈ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>