‘ಬೇರೆಯದಕ್ಕೆ ಹೋಲಿಸಿದರೆ ಗೌಣ’
ಬೆಂಗಳೂರು: ‘ಸಣ್ಣ ಉಳಿತಾಯ ಯೋಜನೆಗಳ ಪೈಕಿ ಕೆಲವು ಯೋಜನೆಗಳ ಬಡ್ಡಿ ದರವನ್ನು ಹೆಚ್ಚಿಸಿರುವುದು ನಿಶ್ಚಿತ ಆದಾಯ ಬಯಸುವವರಿಗೆ ಸಂತಸ ತರಬಹುದು. ಆದರೆ, ಹೆಚ್ಚಳವಾದ ನಂತರದ ಬಡ್ಡಿ ದರವೂ, ಇತರ ಹೂಡಿಕೆ ಉತ್ಪನ್ನಗಳಾಗಿರುವ ಮ್ಯೂಚುವಲ್ ಫಂಡ್, ಷೇರುಗಳು, ಇಟಿಎಫ್ಗಳು ನೀಡಬಹುದಾದ ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಗೌಣ’ ಎಂದು ಆದಾಯ ತೆರಿಗೆ ಮತ್ತು ವೈಯಕ್ತಿಕ ಹಣಕಾಸು ತಜ್ಞ ಪ್ರಮೋದ ಶ್ರೀಕಾಂತ ದೈತೋಟ ಹೇಳಿದರು.