<p><strong>ಚಂಡೀಗಢ:</strong> ‘ಸೇನಾ ಕಾರ್ಯಾಚರಣೆಯಲ್ಲಿ ಸಹ ಸೈನಿಕರಿಂದಲೇ ಹತನಾದರೆ ಅಂಥ ವ್ಯಕ್ತಿಯ ಕುಟುಂಬವು ಶತ್ರುಗಳ ದಾಳಿಯಿಂದ ಮೃತಪಟ್ಟವರಿಗೆ ಸಿಗುವ ಎಲ್ಲಾ ಸೌಲಭ್ಯಗಳಿಗೂ ಅರ್ಹರು’ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.</p><p>ಸಶಸ್ತ್ರ ಪಡೆಗಳ ನ್ಯಾಯಮಂಡಳಿಯು (AFT) 2022ರ ಫೆ. 22ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ‘ಕುಟುಂಬ ಪಿಂಚಣಿ’ಗೆ ಆಗ್ರಹಿಸಿದ ರುಕ್ಮಣಿ ದೇವಿ ಅವರ ಅರ್ಜಿಗೆ ಕೇಂದ್ರ ಸರ್ಕಾರ ಸಹಿತ ಇತರರು ಆಕ್ಷೇಪ ಸಲ್ಲಿಸಿದ್ದರು.</p><p>ರುಕ್ಮಿಣಿ ದೇವಿ ಅವರ ಮಗ ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ‘ಆಪರೇಷನ್ ರಕ್ಷಕ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಹ ಸೈನಿಕರಿಂದಲೇ ಹಾರಿದ ಗುಂಡಿಗೆ 1991ರ ಅ. 21ರಂದು ಹುತಾತ್ಮರಾದರು.</p><p>ಪಿಂಚಣಿಗಾಗಿ ತಡವಾಗಿ ಅರ್ಜಿ ಹಾಕಿದ್ದನ್ನೂ ಒಳಗೊಂಡು ವಿವಿಧ ಕಾರಣಗಳಿಗೆ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೋರಿದ್ದ ಕೇಂದ್ರದ ಮನವಿಯನ್ನು ನ್ಯಾ. ಅನುಪಿಂದರ್ ಸಿಂಗ್ ಗ್ರೆವಾಲ್ ಮತ್ತು ದೀಪಕ್ ಮಂಚಂಡ ಅವರಿದ್ದ ವಿಭಾಗೀಯ ಪೀಠವು ತಿರಸ್ಕರಿಸಿತು.</p><p>‘ಯಾವುದೇ ಕಾರ್ಯಾಚರಣೆ ಸಂದರ್ಭದಲ್ಲಿ ಸೈನಿಕ, ಸಹೋದ್ಯೋಗಿ ಗುಂಡೇಟಿನಿಂದ ಮೃತಪಟ್ಟರೆ ಅಂಥವರ ಕುಟುಂಬದವರು ಸರ್ಕಾರದಿಂದ ಲಭಿಸಬೇಕಾದ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು’ ಎಂದು ಪೀಠ ಅಭಿಪ್ರಾಯಪಟ್ಟಿತು.</p><p>1991ರಲ್ಲಿ ಸೈನಿಕ ಮೃತಪಟ್ಟರೂ ಪಿಂಚಣಿಗಾಗಿ 2018ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸಲ್ಲಿಸುವಲ್ಲಿ ವಿಳಂಬವಾಗಿದೆ ಎಂಬ ಕೇಂದ್ರದ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ‘ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧನಿಗೆ ಪ್ರತಿ ತಿಂಗಳು ಪಿಂಚಣಿ ಸಿಗಬೇಕು’ ಎಂದು ಹೈಕೋರ್ಟ್ ಒತ್ತಿ ಹೇಳಿದೆ.</p><p>ಕುಟುಂಬ ಪಿಂಚಣಿಯನ್ನು ಕೋರಿರುವ ರುಕ್ಮಿಣಿ ದೇವಿ ಅವರ ಬೇಡಿಕೆಯು ಸಾಮಾನ್ಯ ಪಿಂಚಣಿಗಿಂತ ಅಧಿಕವಾದದ್ದು ಎಂದು ಎಎಫ್ಟಿಯು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಿತ್ತು. ಆದರೆ ರುಕ್ಮಿಣಿ ದೇವಿ ಅವರ ಪ್ರಕರಣ ವಿಭಿನ್ನವಾದದ್ದು. ಇದನ್ನು ಬೇರೆ ರೀತಿಯಲ್ಲೇ ಪರಿಗಣಿಸಬೇಕು ಎಂದೆನ್ನಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ:</strong> ‘ಸೇನಾ ಕಾರ್ಯಾಚರಣೆಯಲ್ಲಿ ಸಹ ಸೈನಿಕರಿಂದಲೇ ಹತನಾದರೆ ಅಂಥ ವ್ಯಕ್ತಿಯ ಕುಟುಂಬವು ಶತ್ರುಗಳ ದಾಳಿಯಿಂದ ಮೃತಪಟ್ಟವರಿಗೆ ಸಿಗುವ ಎಲ್ಲಾ ಸೌಲಭ್ಯಗಳಿಗೂ ಅರ್ಹರು’ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.</p><p>ಸಶಸ್ತ್ರ ಪಡೆಗಳ ನ್ಯಾಯಮಂಡಳಿಯು (AFT) 2022ರ ಫೆ. 22ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ‘ಕುಟುಂಬ ಪಿಂಚಣಿ’ಗೆ ಆಗ್ರಹಿಸಿದ ರುಕ್ಮಣಿ ದೇವಿ ಅವರ ಅರ್ಜಿಗೆ ಕೇಂದ್ರ ಸರ್ಕಾರ ಸಹಿತ ಇತರರು ಆಕ್ಷೇಪ ಸಲ್ಲಿಸಿದ್ದರು.</p><p>ರುಕ್ಮಿಣಿ ದೇವಿ ಅವರ ಮಗ ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ‘ಆಪರೇಷನ್ ರಕ್ಷಕ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಹ ಸೈನಿಕರಿಂದಲೇ ಹಾರಿದ ಗುಂಡಿಗೆ 1991ರ ಅ. 21ರಂದು ಹುತಾತ್ಮರಾದರು.</p><p>ಪಿಂಚಣಿಗಾಗಿ ತಡವಾಗಿ ಅರ್ಜಿ ಹಾಕಿದ್ದನ್ನೂ ಒಳಗೊಂಡು ವಿವಿಧ ಕಾರಣಗಳಿಗೆ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೋರಿದ್ದ ಕೇಂದ್ರದ ಮನವಿಯನ್ನು ನ್ಯಾ. ಅನುಪಿಂದರ್ ಸಿಂಗ್ ಗ್ರೆವಾಲ್ ಮತ್ತು ದೀಪಕ್ ಮಂಚಂಡ ಅವರಿದ್ದ ವಿಭಾಗೀಯ ಪೀಠವು ತಿರಸ್ಕರಿಸಿತು.</p><p>‘ಯಾವುದೇ ಕಾರ್ಯಾಚರಣೆ ಸಂದರ್ಭದಲ್ಲಿ ಸೈನಿಕ, ಸಹೋದ್ಯೋಗಿ ಗುಂಡೇಟಿನಿಂದ ಮೃತಪಟ್ಟರೆ ಅಂಥವರ ಕುಟುಂಬದವರು ಸರ್ಕಾರದಿಂದ ಲಭಿಸಬೇಕಾದ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು’ ಎಂದು ಪೀಠ ಅಭಿಪ್ರಾಯಪಟ್ಟಿತು.</p><p>1991ರಲ್ಲಿ ಸೈನಿಕ ಮೃತಪಟ್ಟರೂ ಪಿಂಚಣಿಗಾಗಿ 2018ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸಲ್ಲಿಸುವಲ್ಲಿ ವಿಳಂಬವಾಗಿದೆ ಎಂಬ ಕೇಂದ್ರದ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ‘ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧನಿಗೆ ಪ್ರತಿ ತಿಂಗಳು ಪಿಂಚಣಿ ಸಿಗಬೇಕು’ ಎಂದು ಹೈಕೋರ್ಟ್ ಒತ್ತಿ ಹೇಳಿದೆ.</p><p>ಕುಟುಂಬ ಪಿಂಚಣಿಯನ್ನು ಕೋರಿರುವ ರುಕ್ಮಿಣಿ ದೇವಿ ಅವರ ಬೇಡಿಕೆಯು ಸಾಮಾನ್ಯ ಪಿಂಚಣಿಗಿಂತ ಅಧಿಕವಾದದ್ದು ಎಂದು ಎಎಫ್ಟಿಯು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಿತ್ತು. ಆದರೆ ರುಕ್ಮಿಣಿ ದೇವಿ ಅವರ ಪ್ರಕರಣ ವಿಭಿನ್ನವಾದದ್ದು. ಇದನ್ನು ಬೇರೆ ರೀತಿಯಲ್ಲೇ ಪರಿಗಣಿಸಬೇಕು ಎಂದೆನ್ನಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>