<p><strong>ನವದೆಹಲಿ</strong>: ‘ಉಪಗ್ರಹಗಳು, ಡ್ರೋನ್ ಸೇರಿದಂತೆ ಭೂಮಿಯ ಕೆಳ ಕಕ್ಷೆಯಲ್ಲಿ (ಎಲ್ಇಒ) ಕಾರ್ಯಾಚರಣೆ ನಡೆಸುವ ‘ಬಾಹ್ಯಾಕಾಶ ಸಂಪನ್ಮೂಲ’ಗಳು ಭಾರತದ ಯುದ್ಧ ಸಾಮರ್ಥ್ಯ ಹೆಚ್ಚಿಸಿವೆ. ಅದರಲ್ಲೂ, ಆಧುನಿಕ ಯುದ್ಧದಲ್ಲಿ ಡ್ರೋನ್ಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.</p>.<p>ತಮಿಳುನಾಡಿನ ನೀಲಗಿರಿ ಜಿಲ್ಲೆ ವೆಲ್ಲಿಂಗ್ಟನ್ನಲ್ಲಿರುವ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ಭಾರತವು ಸೇನೆಗೆ ಸಂಬಂಧಿಸಿದ ಬಾಹ್ಯಾಕಾಶ ನೀತಿಯೊಂದನ್ನು 2–3 ತಿಂಗಳಲ್ಲಿ ಸಿದ್ಧಪಡಿಸಲಿದೆ’ ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ, ಸಚಿವ ರಾಜನಾಥ್ ಸಿಂಗ್ ನೀಡಿರುವ ಈ ಹೇಳಿಕೆಗೆ ಮಹತ್ವ ಬಂದಿದೆ.</p>.<p>‘ಆಧುನಿಕ ಯುದ್ಧಗಳ ಸ್ವರೂಪ ಬದಲಾಗಿದೆ. ಹೊಸದಾದ ತಂತ್ರಗಾರಿಕೆ ಹಾಗೂ ಸಾಧನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ, ಡ್ರೋನ್ಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.</p>.<p>‘ಗುಪ್ತಚರ ಸೇವೆ, ಕಣ್ಗಾವಲು, ಗುರಿ ನಿರ್ದೇಶಿತ ಕಾರ್ಯಾಚರಣೆ ಹಾಗೂ ಸಂವಹನ ಕ್ಷೇತ್ರಕ್ಕೆ ಸಂಬಂಧಿಸಿ ಬಾಹ್ಯಾಕಾಶ ಸಂಪನ್ಮೂಲಗಳು ನಮ್ಮ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಒಯ್ದಿವೆ’ ಎಂದು ಹೇಳಿದ್ದಾರೆ.</p>.<p>‘ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಡ್ರೋನ್ಗಳು ಹೊಸ ಮಾದರಿಯ ಆಯುಧವಾಗಿ ಹೊರಹೊಮ್ಮಿವೆ. ಈ ದೇಶಗಳ ನಡುವಿನ ಯುದ್ಧದಲ್ಲಿ ಸಾಕಷ್ಟು ಸಂಖ್ಯೆಯ ಯೋಧರು ಪ್ರಾಣ ಕಳೆದಕೊಂಡಿದ್ದಾರೆ. ಯೋಧರ ಸಾವಿನ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬದಲಾಗಿ ಡ್ರೋನ್ಗಳೇ ಕಾರಣ ಎಂಬುದು ಗಮನಾರ್ಹ’ ಎಂದು ಹೇಳಿದ್ದಾರೆ.</p>.<p>‘ಈಗ ಏನಿದ್ದರೂ ಹೈಬ್ರೀಡ್ ಯುದ್ಧಗಳ ಯುಗ. ಸೈಬರ್ ದಾಳಿ, ದೇಶವೊಂದರ ಕುರಿತು ತಪ್ಪು ಮಾಹಿತಿಗಳ ಪ್ರಸಾರ ಹಾಗೂ ಆರ್ಥಿಕತೆ ಮೇಲಿನ ದಾಳಿಗಳೇ ಈ ಹೈಬ್ರೀಡ್ ಯುದ್ಧದ ತಂತ್ರಗಳಾಗಿವೆ. ಒಂದೇ ಒಂದು ಗುಂಡು ಹಾರಿಸದೆಯೇ ತಮ್ಮ ರಾಜಕೀಯ ಹಾಗೂ ಮಿಲಿಟರಿ ಗುರಿ ಸಾಧನೆ ಇಂತಹ ತಂತ್ರಗಾರಿಕೆ ಉದ್ಧೇಶ’ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಉಪಗ್ರಹಗಳು, ಡ್ರೋನ್ ಸೇರಿದಂತೆ ಭೂಮಿಯ ಕೆಳ ಕಕ್ಷೆಯಲ್ಲಿ (ಎಲ್ಇಒ) ಕಾರ್ಯಾಚರಣೆ ನಡೆಸುವ ‘ಬಾಹ್ಯಾಕಾಶ ಸಂಪನ್ಮೂಲ’ಗಳು ಭಾರತದ ಯುದ್ಧ ಸಾಮರ್ಥ್ಯ ಹೆಚ್ಚಿಸಿವೆ. ಅದರಲ್ಲೂ, ಆಧುನಿಕ ಯುದ್ಧದಲ್ಲಿ ಡ್ರೋನ್ಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.</p>.<p>ತಮಿಳುನಾಡಿನ ನೀಲಗಿರಿ ಜಿಲ್ಲೆ ವೆಲ್ಲಿಂಗ್ಟನ್ನಲ್ಲಿರುವ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ಭಾರತವು ಸೇನೆಗೆ ಸಂಬಂಧಿಸಿದ ಬಾಹ್ಯಾಕಾಶ ನೀತಿಯೊಂದನ್ನು 2–3 ತಿಂಗಳಲ್ಲಿ ಸಿದ್ಧಪಡಿಸಲಿದೆ’ ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ, ಸಚಿವ ರಾಜನಾಥ್ ಸಿಂಗ್ ನೀಡಿರುವ ಈ ಹೇಳಿಕೆಗೆ ಮಹತ್ವ ಬಂದಿದೆ.</p>.<p>‘ಆಧುನಿಕ ಯುದ್ಧಗಳ ಸ್ವರೂಪ ಬದಲಾಗಿದೆ. ಹೊಸದಾದ ತಂತ್ರಗಾರಿಕೆ ಹಾಗೂ ಸಾಧನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ, ಡ್ರೋನ್ಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.</p>.<p>‘ಗುಪ್ತಚರ ಸೇವೆ, ಕಣ್ಗಾವಲು, ಗುರಿ ನಿರ್ದೇಶಿತ ಕಾರ್ಯಾಚರಣೆ ಹಾಗೂ ಸಂವಹನ ಕ್ಷೇತ್ರಕ್ಕೆ ಸಂಬಂಧಿಸಿ ಬಾಹ್ಯಾಕಾಶ ಸಂಪನ್ಮೂಲಗಳು ನಮ್ಮ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಒಯ್ದಿವೆ’ ಎಂದು ಹೇಳಿದ್ದಾರೆ.</p>.<p>‘ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಡ್ರೋನ್ಗಳು ಹೊಸ ಮಾದರಿಯ ಆಯುಧವಾಗಿ ಹೊರಹೊಮ್ಮಿವೆ. ಈ ದೇಶಗಳ ನಡುವಿನ ಯುದ್ಧದಲ್ಲಿ ಸಾಕಷ್ಟು ಸಂಖ್ಯೆಯ ಯೋಧರು ಪ್ರಾಣ ಕಳೆದಕೊಂಡಿದ್ದಾರೆ. ಯೋಧರ ಸಾವಿನ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬದಲಾಗಿ ಡ್ರೋನ್ಗಳೇ ಕಾರಣ ಎಂಬುದು ಗಮನಾರ್ಹ’ ಎಂದು ಹೇಳಿದ್ದಾರೆ.</p>.<p>‘ಈಗ ಏನಿದ್ದರೂ ಹೈಬ್ರೀಡ್ ಯುದ್ಧಗಳ ಯುಗ. ಸೈಬರ್ ದಾಳಿ, ದೇಶವೊಂದರ ಕುರಿತು ತಪ್ಪು ಮಾಹಿತಿಗಳ ಪ್ರಸಾರ ಹಾಗೂ ಆರ್ಥಿಕತೆ ಮೇಲಿನ ದಾಳಿಗಳೇ ಈ ಹೈಬ್ರೀಡ್ ಯುದ್ಧದ ತಂತ್ರಗಳಾಗಿವೆ. ಒಂದೇ ಒಂದು ಗುಂಡು ಹಾರಿಸದೆಯೇ ತಮ್ಮ ರಾಜಕೀಯ ಹಾಗೂ ಮಿಲಿಟರಿ ಗುರಿ ಸಾಧನೆ ಇಂತಹ ತಂತ್ರಗಾರಿಕೆ ಉದ್ಧೇಶ’ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>