ಚೆನ್ನೈ: ತೂತುಕುಡಿಯಲ್ಲಿರುವ ವೇದಾಂತ ಸಮುಹದ ಸ್ಟೆರ್ಲೈಟ್ ಕಾಪರ್ ಕಂಪನಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದು, ಕಾರ್ಖಾನೆ ನಡೆಸಲು ಅವಶ್ಯಕವಾದಮಾನವ ಸಂಪನ್ಮೂಲ ಹಾಗೂ ವಿದ್ಯುತ್ ಸರಬರಾಜು ಮಾಡುವಂತೆ ಮನವಿ ಮಾಡಿದೆ.
ಕಾರ್ಖಾನೆಯಲ್ಲಿ ಸೋರಿಕೆಯಾಗಿರುವ ಗಂಧಕಾಮ್ಲ ಸ್ವಚ್ಛಗೊಳಿಸುವಕಾರ್ಯ ಜೂನ್ 18ರಿಂದ ಪ್ರಾರಂಭವಾಗಿದೆ. ಕಾರ್ಖಾನೆಗೆ ಸಿಬ್ಬಂದಿ, ಹಾಗೂ ವಿದ್ಯುತ್ ಅಗತ್ಯತೆ ಇದೆ ಎಂದು ಮಧುರೈ ಪೀಠಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.