<p><strong>ಕೋಯಿಕ್ಕೋಡ್</strong>: 27 ವರ್ಷದ ವೃತ್ತಿ ಬದುಕಿನಲ್ಲಿ ಬರೋಬ್ಬರಿ 608 ದಿನಗಳನ್ನು ಬಾಹ್ಯಾಕಾಶದಲ್ಲೇ ಕಳೆದರೂ ಮತ್ತೊಂದು ಬಾಹ್ಯಾಕಾಶ ಯೋಜನೆಯ ಭಾಗವಾಗುವ ಅವಕಾಶ ಕೈ ತಪ್ಪಿಹೋಗುತ್ತದೆ ಎಂಬ ಆತಂಕ ತನ್ನನ್ನು ಈಗಲೂ ಕಾಡುತ್ತದೆ ಎಂದು ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಗಗನಯಾನಿ ಸುನಿತಾ ವಿಲಿಯಮ್ಸ್ ಹೇಳಿದ್ದಾರೆ. </p>.<p>ಈ ಮೂಲಕ ಬಾಹ್ಯಾಕಾಶ ಪಯಣ, ಅನ್ವೇಷಣೆ ಹಾಗೂ ಗಗನಯಾನದ ಬಗೆಗಿನ ತಮ್ಮ ಅಪಾರ ಒಲವನ್ನು ಸುನಿತಾ ವ್ಯಕ್ತಪಡಿಸಿದ್ದಾರೆ. </p>.<p class="bodytext">ಕೇರಳ ಸಾಹಿತ್ಯೋತ್ಸವದಲ್ಲಿ ‘ಡ್ರೀಮ್ಸ್ ರೀಚ್ ಆರ್ಬಿಟ್’ ಎಂಬ ಗೋಷ್ಠಿಯಲ್ಲಿ ಸುನಿತಾ ಮಾತನಾಡಿದರು. ಈ ವೇಳೆ, ನಾಸಾದ ಉದ್ದೇಶಿತ ಆರ್ಟೆಮಿಸ್–2 ಚಂದ್ರಯಾನ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು. </p>.<p class="bodytext">‘ಚಂದ್ರಯಾನ ಕೈಗೊಳ್ಳಬೇಕು ಎಂಬ ಬಯಕೆ ಯಾರಿಗಿರುವುದಿಲ್ಲ? ನಾನು ನಾಸಾ ಸೇರಲು ಈ ಬಯಕೆಯೂ ಒಂದು ಪ್ರಮುಖ ಕಾರಣವಾಗಿತ್ತು. ಹೀಗಾಗಿ ಆ ಅವಕಾಶ ನನ್ನ ಕೈತಪ್ಪಿ ಹೋಗುತ್ತಿದೆ ಎಂಬ ಆತಂಕ ನನ್ನನ್ನು ಕಾಡುತ್ತದೆ. ಆದರೆ, ನನ್ನ ಸಹೋದ್ಯೋಗಿಗಳು, ಸ್ನೇಹಿತರು ಈ ಯೋಜನೆಯ ಭಾಗವಾಗುವುದನ್ನು ನೋಡಲು ನಾನು ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ. </p>.<p class="bodytext">ಜತೆಗೆ ‘ನಾನು ಬಾಹ್ಯಾಕಾಶದಲ್ಲಿದ್ದ ಕಾರಣ ಭೂಮಿ ಮೇಲಿನ ಹಲವು ಅದ್ಭುತ ಜಾಗಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಈಗ ಆ ಜಾಗಗಳಿಗೆಲ್ಲಾ ಭೇಟಿ ನೀಡುತ್ತಿದ್ದೇನೆ. ಆ ಪೈಕಿ ಕೇರಳವೂ ಒಂದು’ ಎಂದೂ ಹೇಳಿದ್ದಾರೆ. </p>.<p>ಇದೇ ವೇಳೆ, ತನ್ನನ್ನು ಭಾರತದ ಮಗಳು ಎಂದು ಪರಿಗಣಿಸಿ, ಸುರಕ್ಷಿತವಾಗಿ ಹಿಂದಿರುಗಬೇಕು ಎಂದು ಭಾರತೀಯರು ಆಶಿಸಿದ್ದರ ಬಗ್ಗೆಯೂ ಸುನಿತಾ ಸಂತಸ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಯಿಕ್ಕೋಡ್</strong>: 27 ವರ್ಷದ ವೃತ್ತಿ ಬದುಕಿನಲ್ಲಿ ಬರೋಬ್ಬರಿ 608 ದಿನಗಳನ್ನು ಬಾಹ್ಯಾಕಾಶದಲ್ಲೇ ಕಳೆದರೂ ಮತ್ತೊಂದು ಬಾಹ್ಯಾಕಾಶ ಯೋಜನೆಯ ಭಾಗವಾಗುವ ಅವಕಾಶ ಕೈ ತಪ್ಪಿಹೋಗುತ್ತದೆ ಎಂಬ ಆತಂಕ ತನ್ನನ್ನು ಈಗಲೂ ಕಾಡುತ್ತದೆ ಎಂದು ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಗಗನಯಾನಿ ಸುನಿತಾ ವಿಲಿಯಮ್ಸ್ ಹೇಳಿದ್ದಾರೆ. </p>.<p>ಈ ಮೂಲಕ ಬಾಹ್ಯಾಕಾಶ ಪಯಣ, ಅನ್ವೇಷಣೆ ಹಾಗೂ ಗಗನಯಾನದ ಬಗೆಗಿನ ತಮ್ಮ ಅಪಾರ ಒಲವನ್ನು ಸುನಿತಾ ವ್ಯಕ್ತಪಡಿಸಿದ್ದಾರೆ. </p>.<p class="bodytext">ಕೇರಳ ಸಾಹಿತ್ಯೋತ್ಸವದಲ್ಲಿ ‘ಡ್ರೀಮ್ಸ್ ರೀಚ್ ಆರ್ಬಿಟ್’ ಎಂಬ ಗೋಷ್ಠಿಯಲ್ಲಿ ಸುನಿತಾ ಮಾತನಾಡಿದರು. ಈ ವೇಳೆ, ನಾಸಾದ ಉದ್ದೇಶಿತ ಆರ್ಟೆಮಿಸ್–2 ಚಂದ್ರಯಾನ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು. </p>.<p class="bodytext">‘ಚಂದ್ರಯಾನ ಕೈಗೊಳ್ಳಬೇಕು ಎಂಬ ಬಯಕೆ ಯಾರಿಗಿರುವುದಿಲ್ಲ? ನಾನು ನಾಸಾ ಸೇರಲು ಈ ಬಯಕೆಯೂ ಒಂದು ಪ್ರಮುಖ ಕಾರಣವಾಗಿತ್ತು. ಹೀಗಾಗಿ ಆ ಅವಕಾಶ ನನ್ನ ಕೈತಪ್ಪಿ ಹೋಗುತ್ತಿದೆ ಎಂಬ ಆತಂಕ ನನ್ನನ್ನು ಕಾಡುತ್ತದೆ. ಆದರೆ, ನನ್ನ ಸಹೋದ್ಯೋಗಿಗಳು, ಸ್ನೇಹಿತರು ಈ ಯೋಜನೆಯ ಭಾಗವಾಗುವುದನ್ನು ನೋಡಲು ನಾನು ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ. </p>.<p class="bodytext">ಜತೆಗೆ ‘ನಾನು ಬಾಹ್ಯಾಕಾಶದಲ್ಲಿದ್ದ ಕಾರಣ ಭೂಮಿ ಮೇಲಿನ ಹಲವು ಅದ್ಭುತ ಜಾಗಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಈಗ ಆ ಜಾಗಗಳಿಗೆಲ್ಲಾ ಭೇಟಿ ನೀಡುತ್ತಿದ್ದೇನೆ. ಆ ಪೈಕಿ ಕೇರಳವೂ ಒಂದು’ ಎಂದೂ ಹೇಳಿದ್ದಾರೆ. </p>.<p>ಇದೇ ವೇಳೆ, ತನ್ನನ್ನು ಭಾರತದ ಮಗಳು ಎಂದು ಪರಿಗಣಿಸಿ, ಸುರಕ್ಷಿತವಾಗಿ ಹಿಂದಿರುಗಬೇಕು ಎಂದು ಭಾರತೀಯರು ಆಶಿಸಿದ್ದರ ಬಗ್ಗೆಯೂ ಸುನಿತಾ ಸಂತಸ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>