‘ಬಹುತ್ವ ಗೆಲ್ಲಲಿದೆ, ಪ್ರಜಾಪ್ರಭುತ್ವಕ್ಕೆ ಜಯ ಸಿಗಲಿದೆ, ಸಂವಿಧಾನ ಗೆಲುವು ಸಾಧಿಸಲಿದೆ, ಕಾನೂನು ಗೆಲ್ಲುತ್ತದೆ, ನೈತಿಕತೆಗೆ ಜಯ ಸಿಗಲಿದೆ. ಒಂದು ಸಮಯದಲ್ಲಿ ಸೀತೆಯ ವಸ್ತ್ರಾಪಹರಣ(ದ್ರೌಪದಿ ಬದಲು ಸೀತೆ ಎಂದು ತಪ್ಪಾಗಿ ಹೇಳಿದ ಸುರ್ಜೆವಾಲ) ಮಾಡಿದ ಹಾಗೆ, ಸುಳ್ಳು ಹೇಳಿಕೊಂಡು ಓಡಾಡುತ್ತಿರುವವರು ಪ್ರಜಾಪ್ರಭುತ್ವದ ವಸ್ತ್ರಾಪಹರಣ ಮಾಡಲು ಯತ್ನಿಸುತ್ತಿದ್ದಾರೆ. ಅವರಿಗೆ ಖಂಡಿತಾ ಸೋಲಾಗುತ್ತದೆ. ಅವರು ಜನರ ಮುಂದೆ ಬಯಲಾಗುತ್ತಾರೆ’ ಎಂದು ಸುರ್ಜೆವಾಲ ಹೇಳಿದ್ದಾರೆ.