ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಏಕ್ತಾ ಗೌಬಾ ಮಾನ್, ‘ಪ್ರಕರಣ ಕುರಿತ ತನಿಖೆ ಆರಂಭಿಕ ಹಂತದಲ್ಲಿದೆ. ಸಂತ್ರಸ್ತೆಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದು, ತನ್ನ ಹಾಗೂ ತನ್ನ ಕುಟುಂಬದ ಸದಸ್ಯರ ಸುರಕ್ಷತೆ ಬಗ್ಗೆ ಆಕೆಗೆ ಭಯವಿದೆ. ಅಲ್ಲದೇ, ಆರೋಪಿ ಅಥವಾ ಮೇಲ್ಮನವಿದಾರನೂ ಆಗಿರುವ ಬಿಭವ್ ಕುಮಾರ್ ಅವರನ್ನು ಜಾಮೀನಿನ ಬಿಡುಗಡೆ ಮಾಡಿದಲ್ಲಿ, ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಆತಂಕವೂ ಇದೆ’ ಎಂದು ಹೇಳಿದರು.