<p><strong>ಹೈದರಾಬಾದ್:</strong> ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಅಜ್ಜನ ಮೃತದೇಹವನ್ನು ಮೊಮ್ಮಗ ಫ್ರಿಡ್ಜ್ನಲ್ಲಿರಿಸಿದ ಘಟನೆ ವರದಿಯಾಗಿದೆ.</p>.<p>ಅಂತ್ಯ ಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/terrorist-killed-2-security-personnel-injured-in-kulgam-encounter-857317.html" itemprop="url">ಕುಲ್ಗಾಂ ಎನ್ಕೌಂಟರ್: ಓರ್ವ ಉಗ್ರ ಸಾವು, ಇಬ್ಬರು ಯೋಧರಿಗೆ ಗಾಯ </a></p>.<p>ನಿವೃತ್ತ ಮುಖ್ಯೋಪಾಧ್ಯಾಯರಾದ ವೃದ್ಧನಿಗೆ 92ರಿಂದ 95 ವರ್ಷ ವಯಸ್ಸು ಅಂದಾಜಿಸಲಾಗಿದೆ. ಪಿಂಚಣಿಯಿಂದ ಸಿಗುವ ಹಣದಿಂದ ಮೊಮ್ಮಗನ ಜೊತೆಗಿದ್ದರು. ಅವರ ಕುಟಂಬ ಸದಸ್ಯರೆಲ್ಲ ಕಾಮರೆಡ್ಡಿ ಜಿಲ್ಲೆಯಲ್ಲಿ ವಾಸಿಸುತ್ತಾರೆ.<br /><br />ಗುರುವಾರದಂದು ನೆರೆಮನೆಯಿಂದ ದುರ್ವಾಸನೆ ಹೊರಹೊಮ್ಮುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಬಂದು ಶೋಧ ನಡೆಸಿದಾಗ ಫ್ರಿಡ್ಜ್ನಲ್ಲಿ ಮೃತದೇಹ ಪತ್ತೆಯಾಗಿದೆ.</p>.<p>'ಇತ್ತೀಚಿಗೆ ಅನಾರೋಗ್ಯಕ್ಕೊಳಗಾಗಿದ್ದ ಅಜ್ಜ ಹಾಸಿಗೆ ಹಿಡಿದಿದ್ದರು. ಅಂತ್ಯಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ ಮೃತದೇಹವನ್ನು ಫ್ರಿಡ್ಜ್ನಲ್ಲಿ ಇರಿಸಿದ್ದೆ' ಎಂದು ಮೊಮ್ಮಗ ತಪ್ಪೊಪ್ಪಿಕೊಂಡಿದ್ದಾನೆ.</p>.<p>ಮಾಸಿಕ ಪಿಂಚಣಿ ನಿಲ್ಲಬಾರದೆಂಬ ಕಾರಣಕ್ಕಾಗಿ ಈ ಕೃತ್ಯ ನಡೆಸಿದ್ದಾನೆಯೇ ಅಥವಾ ಘಟನೆಯಲ್ಲಿ ಇನ್ಯಾವುದೇ ದುರುದ್ದೇಶ ಅಡಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವಾಗಿ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಅಜ್ಜನ ಮೃತದೇಹವನ್ನು ಮೊಮ್ಮಗ ಫ್ರಿಡ್ಜ್ನಲ್ಲಿರಿಸಿದ ಘಟನೆ ವರದಿಯಾಗಿದೆ.</p>.<p>ಅಂತ್ಯ ಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/terrorist-killed-2-security-personnel-injured-in-kulgam-encounter-857317.html" itemprop="url">ಕುಲ್ಗಾಂ ಎನ್ಕೌಂಟರ್: ಓರ್ವ ಉಗ್ರ ಸಾವು, ಇಬ್ಬರು ಯೋಧರಿಗೆ ಗಾಯ </a></p>.<p>ನಿವೃತ್ತ ಮುಖ್ಯೋಪಾಧ್ಯಾಯರಾದ ವೃದ್ಧನಿಗೆ 92ರಿಂದ 95 ವರ್ಷ ವಯಸ್ಸು ಅಂದಾಜಿಸಲಾಗಿದೆ. ಪಿಂಚಣಿಯಿಂದ ಸಿಗುವ ಹಣದಿಂದ ಮೊಮ್ಮಗನ ಜೊತೆಗಿದ್ದರು. ಅವರ ಕುಟಂಬ ಸದಸ್ಯರೆಲ್ಲ ಕಾಮರೆಡ್ಡಿ ಜಿಲ್ಲೆಯಲ್ಲಿ ವಾಸಿಸುತ್ತಾರೆ.<br /><br />ಗುರುವಾರದಂದು ನೆರೆಮನೆಯಿಂದ ದುರ್ವಾಸನೆ ಹೊರಹೊಮ್ಮುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಬಂದು ಶೋಧ ನಡೆಸಿದಾಗ ಫ್ರಿಡ್ಜ್ನಲ್ಲಿ ಮೃತದೇಹ ಪತ್ತೆಯಾಗಿದೆ.</p>.<p>'ಇತ್ತೀಚಿಗೆ ಅನಾರೋಗ್ಯಕ್ಕೊಳಗಾಗಿದ್ದ ಅಜ್ಜ ಹಾಸಿಗೆ ಹಿಡಿದಿದ್ದರು. ಅಂತ್ಯಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ ಮೃತದೇಹವನ್ನು ಫ್ರಿಡ್ಜ್ನಲ್ಲಿ ಇರಿಸಿದ್ದೆ' ಎಂದು ಮೊಮ್ಮಗ ತಪ್ಪೊಪ್ಪಿಕೊಂಡಿದ್ದಾನೆ.</p>.<p>ಮಾಸಿಕ ಪಿಂಚಣಿ ನಿಲ್ಲಬಾರದೆಂಬ ಕಾರಣಕ್ಕಾಗಿ ಈ ಕೃತ್ಯ ನಡೆಸಿದ್ದಾನೆಯೇ ಅಥವಾ ಘಟನೆಯಲ್ಲಿ ಇನ್ಯಾವುದೇ ದುರುದ್ದೇಶ ಅಡಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವಾಗಿ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>