<p><strong>ಪತ್ತನಂತಿಟ್ಟ (ಕೇರಳ):</strong> ಶಬರಿಮಲೆಯಲ್ಲಿ ನಡೆಯಲಿರುವ ಮಂಡಲಪೂಜೆಯಲ್ಲಿ ಅಯ್ಯಪ್ಪ ಸ್ವಾಮಿಗೆ ಅಲಂಕರಿಸುವ ಸ್ವರ್ಣವಸ್ತ್ರದ ಮೆರವಣಿಗೆಯು ಇಲ್ಲಿನ ಅರನ್ಮುಳದ ಶ್ರೀ ಪಾರ್ಥಸಾರಥಿ ದೇಗುಲದಿಂದ ಮಂಗಳವಾರ ಆರಂಭವಾಗಿದೆ.</p>.<p>ಅಲಂಕೃತ ರಥದಲ್ಲಿ ಸ್ವರ್ಣವಸ್ತ್ರದ ಮೆರವಣಿಗೆ ಹೊರಟಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ಹಾಗೂ ಅಪಾರ ಪ್ರಮಾಣದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. </p>.<p>ಶಬರಿಮಲೆ ತಲುಪುವ ಸಾಂಪ್ರದಾಯಿಕ ಮಾರ್ಗಗಳ ಮೂಲಕ ಮೆರವಣಿಗೆ ಹಾದು ಹೋಗಲಿದ್ದು, ಮಾರ್ಗದಲ್ಲಿನ ವಿವಿಧ ದೇವಾಲಯಗಳಲ್ಲಿ ಸ್ವರ್ಣವಸ್ತ್ರಕ್ಕೆ ಸ್ವಾಗತ ಸಿಗಲಿದೆ.</p>.<p class="title">ದೀಪಾರಾಧನೆ ಸಮಾರಂಭ ನಡೆಯುವ ಮುನ್ನ ಅಂದರೆ ಡಿ.26ರ ವೇಳೆಗೆ ಸ್ವರ್ಣವಸ್ತ್ರವು ಶಬರಿಮಲೆ ತಲುಪಲಿದೆ. ಡಿ.27ರ ಮಧ್ಯಾಹ್ನ ಅಯ್ಯಪ್ಪನಿಗೆ ಸ್ವರ್ಣವಸ್ತ್ರ ತೊಡಿಸಿ, ಮಂಡಲ ಪೂಜೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>453 ಸವರನ್ (3.7 ಕೆ.ಜಿ.) ತೂಕದ ಸ್ವರ್ಣವಸ್ತ್ರವನ್ನು ತಿರುವಂಕೂರು ರಾಜಮನೆತನವು 1970ರಲ್ಲಿ ಅಯ್ಯಪ್ಪ ಸ್ವಾಮಿಗೆ ಉಡುಗೊರೆಯಾಗಿ ನೀಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪತ್ತನಂತಿಟ್ಟ (ಕೇರಳ):</strong> ಶಬರಿಮಲೆಯಲ್ಲಿ ನಡೆಯಲಿರುವ ಮಂಡಲಪೂಜೆಯಲ್ಲಿ ಅಯ್ಯಪ್ಪ ಸ್ವಾಮಿಗೆ ಅಲಂಕರಿಸುವ ಸ್ವರ್ಣವಸ್ತ್ರದ ಮೆರವಣಿಗೆಯು ಇಲ್ಲಿನ ಅರನ್ಮುಳದ ಶ್ರೀ ಪಾರ್ಥಸಾರಥಿ ದೇಗುಲದಿಂದ ಮಂಗಳವಾರ ಆರಂಭವಾಗಿದೆ.</p>.<p>ಅಲಂಕೃತ ರಥದಲ್ಲಿ ಸ್ವರ್ಣವಸ್ತ್ರದ ಮೆರವಣಿಗೆ ಹೊರಟಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ಹಾಗೂ ಅಪಾರ ಪ್ರಮಾಣದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. </p>.<p>ಶಬರಿಮಲೆ ತಲುಪುವ ಸಾಂಪ್ರದಾಯಿಕ ಮಾರ್ಗಗಳ ಮೂಲಕ ಮೆರವಣಿಗೆ ಹಾದು ಹೋಗಲಿದ್ದು, ಮಾರ್ಗದಲ್ಲಿನ ವಿವಿಧ ದೇವಾಲಯಗಳಲ್ಲಿ ಸ್ವರ್ಣವಸ್ತ್ರಕ್ಕೆ ಸ್ವಾಗತ ಸಿಗಲಿದೆ.</p>.<p class="title">ದೀಪಾರಾಧನೆ ಸಮಾರಂಭ ನಡೆಯುವ ಮುನ್ನ ಅಂದರೆ ಡಿ.26ರ ವೇಳೆಗೆ ಸ್ವರ್ಣವಸ್ತ್ರವು ಶಬರಿಮಲೆ ತಲುಪಲಿದೆ. ಡಿ.27ರ ಮಧ್ಯಾಹ್ನ ಅಯ್ಯಪ್ಪನಿಗೆ ಸ್ವರ್ಣವಸ್ತ್ರ ತೊಡಿಸಿ, ಮಂಡಲ ಪೂಜೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>453 ಸವರನ್ (3.7 ಕೆ.ಜಿ.) ತೂಕದ ಸ್ವರ್ಣವಸ್ತ್ರವನ್ನು ತಿರುವಂಕೂರು ರಾಜಮನೆತನವು 1970ರಲ್ಲಿ ಅಯ್ಯಪ್ಪ ಸ್ವಾಮಿಗೆ ಉಡುಗೊರೆಯಾಗಿ ನೀಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>