ಅವಿಶ್ವಾಸ ಮತದಿಂದ ಹೊರಗುಳಿದಿರುವ ಬಗ್ಗೆ ಎನ್ಡಿಟಿವಿಜತೆ ಮಾತನಾಡಿದ ಶಿವಸೇನೆಯ ಮುಖಂಡ ಆನಂದ್ ರಾವ್ ಅದ್ಸುಲ್, ನಮ್ಮ ಪಕ್ಷ ಎಂದಿಗೂ ಪಕ್ಷದ ಮುಖ್ಯಸ್ಥರ ಮಾತನ್ನೇ ಪಾಲಿಸುತ್ತದೆ. ಕೇಂದ್ರ ಸರ್ಕಾರ ಭೂವಿವಾದ, ನೋಟು ರದ್ದತಿ ಮೊದಲಾದ ತಪ್ಪುಗಳನ್ನು ಮಾಡಿರುವುದರಿಂದ ಅವರೊಂದಿಗೆ ನಿಲ್ಲದೇ ಇರುವ ತೀರ್ಮಾನ ಕೈಗೊಂಡಿದ್ದೇವೆ ಎಂದಿದ್ದಾರೆ.