<p><strong>ಚೆನ್ನೈ: </strong>ತಮಿಳುನಾಡು ವಿಶ್ವವಿದ್ಯಾಲಯವೊಂದರ ಇಂಗ್ಲೀಷ್ ಸ್ನಾತಕೋತ್ತರ ಪದವಿ ಪಠ್ಯಕ್ರಮದ ಭಾಗವಾಗಿದ್ದ ಅರುಂಧತಿ ರಾಯ್ ಅವರ ‘ವಾಕಿಂಗ್ ವಿದ್ ದಿ ಕಾಮ್ರೆಡ್ಸ್’ ಕೃತಿಯನ್ನು, ಪಠ್ಯಕ್ರಮದಿಂದ ತೆಗೆಯಲಾಗಿದೆ.</p>.<p>ಈ ಕೃತಿಯನ್ನು ಪಠ್ಯಕ್ರಮದ ಭಾಗ ಮಾಡಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್(ಎಬಿವಿಪಿ) ಸೇರಿದಂತೆ ಹಲವರು ಖಂಡಿಸಿದ್ದರು. ಈ ಕೃತಿಯು ಉಗ್ರವಾದವನ್ನು ವೈಭವೀಕರಿಸುತ್ತಿದೆ ಹಾಗೂ ದೇಶದ್ರೋಹಿ ವಿಷಯಗಳನ್ನು ಒಳಗೊಂಡಿದೆ ಎಂದು ಎಬಿವಿಪಿ ಆರೋಪಿಸಿತ್ತು. ತಿರುನಲ್ವೇಲಿ ಮೂಲದ ಮನೋನ್ಮನಿಯಂ ಸುಂದರನರ್ ವಿಶ್ವವಿದ್ಯಾಲಯದಡಿ ಬರುವ ಕಾಲೇಜುಗಳ ಎಂ.ಎ ಇಂಗ್ಲೀಷ್ ಮೂರನೇ ಸೆಮಿಸ್ಟರ್ನ ಪಠ್ಯಕ್ರಮದಲ್ಲಿ 2017–18ರಿಂದ ಈ ಕೃತಿಯು ಭಾಗವಾಗಿತ್ತು. ವಿಶ್ವವಿದ್ಯಾಲಯದ ಈ ಕ್ರಮವನ್ನು ವಿರೋಧ ಪಕ್ಷಗಳಾದ ಡಿಎಂಕೆ ಹಾಗೂ ಸಿಪಿಐಎಂ ಖಂಡಿಸಿವೆ.</p>.<p>‘ಎಬಿವಿಪಿಯು ಕಳೆದ ವಾರ ನಮಗೆ ಲಿಖಿತ ದೂರನ್ನು ನೀಡಿತ್ತು. ಜೊತೆಗೆ ಸಿಂಡಿಕೇಟ್ ಸದಸ್ಯರೂ ಈ ಕುರಿತು ದೂರು ಸಲ್ಲಿಸಿದ್ದರು. ಪುಸ್ತಕದಲ್ಲಿ ವಿವಾದಾತ್ಮಕ ವಿಷಯಗಳಿದ್ದು, ಪಠ್ಯಕ್ರಮದಿಂದ ಇದನ್ನು ತೆಗೆಯಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿತ್ತು. 207–18ರಲ್ಲಿ ಪಠ್ಯಕ್ರಮವನ್ನು ರಚಿಸಿದ ಸಮಿತಿಯ ಅಧ್ಯಕ್ಷರೂ ಇದರ ಭಾಗವಾಗಿದ್ದರು. ಬುಧವಾರ ನಡೆದ ಸಭೆಯಲ್ಲಿ ಈ ಕೃತಿಯನ್ನು ಪಠ್ಯಕ್ರಮದಿಂದ ತೆಗೆಯಲು ನಿರ್ಧರಿಸಲಾಗಿದ್ದು, ಇದರ ಬದಲಾಗಿ ಪದ್ಮ ಪ್ರಶಸ್ತಿ ಪುರಸ್ಕೃತ ಎಂ.ಕೃಷ್ಣನ್ ಅವರ ‘ಮೈ ನೇಟಿವ್ ಲ್ಯಾಂಡ್, ಎಸ್ಸೇಸ್ ಆನ್ ನೇಚರ್’ ಕೃತಿಯನ್ನು ಸೇರಿಸಲಾಗಿದೆ’ ಎಂದು ಎಂಎಸ್ಯು ಕುಲಪತಿ ಕೆ.ಪಿಚುಮಣಿ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ: </strong>ತಮಿಳುನಾಡು ವಿಶ್ವವಿದ್ಯಾಲಯವೊಂದರ ಇಂಗ್ಲೀಷ್ ಸ್ನಾತಕೋತ್ತರ ಪದವಿ ಪಠ್ಯಕ್ರಮದ ಭಾಗವಾಗಿದ್ದ ಅರುಂಧತಿ ರಾಯ್ ಅವರ ‘ವಾಕಿಂಗ್ ವಿದ್ ದಿ ಕಾಮ್ರೆಡ್ಸ್’ ಕೃತಿಯನ್ನು, ಪಠ್ಯಕ್ರಮದಿಂದ ತೆಗೆಯಲಾಗಿದೆ.</p>.<p>ಈ ಕೃತಿಯನ್ನು ಪಠ್ಯಕ್ರಮದ ಭಾಗ ಮಾಡಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್(ಎಬಿವಿಪಿ) ಸೇರಿದಂತೆ ಹಲವರು ಖಂಡಿಸಿದ್ದರು. ಈ ಕೃತಿಯು ಉಗ್ರವಾದವನ್ನು ವೈಭವೀಕರಿಸುತ್ತಿದೆ ಹಾಗೂ ದೇಶದ್ರೋಹಿ ವಿಷಯಗಳನ್ನು ಒಳಗೊಂಡಿದೆ ಎಂದು ಎಬಿವಿಪಿ ಆರೋಪಿಸಿತ್ತು. ತಿರುನಲ್ವೇಲಿ ಮೂಲದ ಮನೋನ್ಮನಿಯಂ ಸುಂದರನರ್ ವಿಶ್ವವಿದ್ಯಾಲಯದಡಿ ಬರುವ ಕಾಲೇಜುಗಳ ಎಂ.ಎ ಇಂಗ್ಲೀಷ್ ಮೂರನೇ ಸೆಮಿಸ್ಟರ್ನ ಪಠ್ಯಕ್ರಮದಲ್ಲಿ 2017–18ರಿಂದ ಈ ಕೃತಿಯು ಭಾಗವಾಗಿತ್ತು. ವಿಶ್ವವಿದ್ಯಾಲಯದ ಈ ಕ್ರಮವನ್ನು ವಿರೋಧ ಪಕ್ಷಗಳಾದ ಡಿಎಂಕೆ ಹಾಗೂ ಸಿಪಿಐಎಂ ಖಂಡಿಸಿವೆ.</p>.<p>‘ಎಬಿವಿಪಿಯು ಕಳೆದ ವಾರ ನಮಗೆ ಲಿಖಿತ ದೂರನ್ನು ನೀಡಿತ್ತು. ಜೊತೆಗೆ ಸಿಂಡಿಕೇಟ್ ಸದಸ್ಯರೂ ಈ ಕುರಿತು ದೂರು ಸಲ್ಲಿಸಿದ್ದರು. ಪುಸ್ತಕದಲ್ಲಿ ವಿವಾದಾತ್ಮಕ ವಿಷಯಗಳಿದ್ದು, ಪಠ್ಯಕ್ರಮದಿಂದ ಇದನ್ನು ತೆಗೆಯಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿತ್ತು. 207–18ರಲ್ಲಿ ಪಠ್ಯಕ್ರಮವನ್ನು ರಚಿಸಿದ ಸಮಿತಿಯ ಅಧ್ಯಕ್ಷರೂ ಇದರ ಭಾಗವಾಗಿದ್ದರು. ಬುಧವಾರ ನಡೆದ ಸಭೆಯಲ್ಲಿ ಈ ಕೃತಿಯನ್ನು ಪಠ್ಯಕ್ರಮದಿಂದ ತೆಗೆಯಲು ನಿರ್ಧರಿಸಲಾಗಿದ್ದು, ಇದರ ಬದಲಾಗಿ ಪದ್ಮ ಪ್ರಶಸ್ತಿ ಪುರಸ್ಕೃತ ಎಂ.ಕೃಷ್ಣನ್ ಅವರ ‘ಮೈ ನೇಟಿವ್ ಲ್ಯಾಂಡ್, ಎಸ್ಸೇಸ್ ಆನ್ ನೇಚರ್’ ಕೃತಿಯನ್ನು ಸೇರಿಸಲಾಗಿದೆ’ ಎಂದು ಎಂಎಸ್ಯು ಕುಲಪತಿ ಕೆ.ಪಿಚುಮಣಿ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>