ಮುಂಬೈ: ಗಣೇಶ ಚತುರ್ಥಿಯ ಪ್ರಯುಕ್ತ ಮಹಾರಾಷ್ಟ್ರ ಸರ್ಕಾರವು ಕೊಂಕಣ ಪ್ರದೇಶಗಳಿಗೆ ತೆರಳುವ ವಾಹನಗಳಿಗೆ ಹೆದ್ದಾರಿಗಳಲ್ಲಿ ಟೋಲ್ ವಿನಾಯಿತಿ ನೀಡಿದೆ.
ಈ ಕ್ರಮವು ಸೆಪ್ಟೆಂಬರ್ 16 ರಿಂದ ಆಕ್ಟೋಬರ್ 1ರವರೆಗೆ ಜಾರಿಯಲ್ಲಿ ಇರಲಿದೆ.
ಟೋಲ್ ವಿನಾಯಿತಿಯು ಮುಂಬೈ– ಬೆಂಗಳೂರು ಹೆದ್ದಾರಿ, ಮುಂಬೈ– ಗೋವಾ ಹೆದ್ದಾರಿ ಸೇರಿ ಲೋಕೋಪಯೋಗಿ ಇಲಾಖೆ (PWD) ಅಡಿಯಲ್ಲಿ ಬರುವ ರಸ್ತೆಗಳಿಗೆ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸಾರಿಗೆ ಬಸ್ಗಳೂ ಕೂಡ ತೆರಿಗೆ ವಿನಾಯಿತಿಯನ್ನು ಪಡೆಯಲಿವೆ ಎಂದು ಅವರು ಹೇಳಿದ್ದಾರೆ.