ಅಂಬುಬಾಚಿ ಹಬ್ಬದ ಕಾರ್ಯಕ್ರಮ ಸಿದ್ಧತೆಗಳನ್ನು ಪರಿಶೀಲಿಸಲು ಮಂಗಳವಾರ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಆಗಮಿಸಿದ್ದರು. ಇದರ ಮರುದಿನವೇ ಘಟನೆ ನಡೆದಿದೆ. ಇದು ಭಕ್ತರನ್ನು ಆತಂಕಕ್ಕೆ ದೂಡಿದೆ. ಗುವಾಹಟಿ ಪೊಲೀಸ್ ಕಮಿಷನರ್ ದೀಪಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ‘ಘಟನೆ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ. ಜೂನ್ 22ರಿಂದ 25ರವರೆಗೆ ಅಂಬುಬಾಚಿ ಹಬ್ಬ ನಿರಾತಂಕವಾಗಿ ನಡೆಯಲಿದೆ’ ಎಂಬ ಭರವಸೆ ನೀಡಿದ್ದಾರೆ.