<p><strong>ನವದೆಹಲಿ:</strong> ಡೆಹ್ರಾಡೂನ್ನಲ್ಲಿ ತ್ರಿಪುರಾದ ವಿದ್ಯಾರ್ಥಿಯೊಬ್ಬರನ್ನು ಹತ್ಯೆ ಮಾಡಿರುವುದು ‘ದ್ವೇಷಪೂರಿತವಾದ ಭಯಾನಕ ಕೃತ್ಯ‘ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ</p>.<p>‘ಕೆಲ ಭಾರತೀಯರನ್ನು ಗುರಿಯಾಗಿಸಿಕೊಂಡಾಗ ದೂರ ಓಡುವಂಥ ಸತ್ತ ಸಮಾಜ ನಾವಾಗಬಾರದು. ನಮ್ಮ ದೇಶ ಏನಾಗಬೇಕೆಂದು ನಾವು ಬಯಸಿದ್ದೇವು ಅದಕ್ಕಾಗಿ ಹೋರಾಡಬೇಕು ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p class="title">‘ದ್ವೇಷವು ರಾತ್ರೋರಾತ್ರಿ ಉದ್ಭವಿಸುವುದಿಲ್ಲ. ಯುವಕರ ತಲೆಯಲ್ಲಿ ವಿಷ ಬೀಜ ಮತ್ತು ಬೇಜವಾಬ್ದಾರಿಯುತ ವಿಚಾರಗಳನ್ನು ವರ್ಷಾನುಗಟ್ಟಲೆ ತುಂಬುವ ಮೂಲಕ ದ್ವೇಷವನ್ನು ಹರಡಲಾಗುತ್ತಿದೆ’ ಎಂದು ರಾಹುಲ್ ಆರೋಪಿಸಿದರು.</p>.<p class="title">ದ್ವೇಷ ಕೃತ್ಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾತನಾಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.</p>.<p class="title">ಜನಾಂಗೀಯ ನಿಂದನೆಯನ್ನು ಆಕ್ಷೇಪಿಸಿದ್ದ ತ್ರಿಪುರಾ ನಿವಾಸಿ ಅಂಜೆಲ್ ಛಕ್ಮಾ(24) ಅವರಿಗೆ ಆರು ಜನರ ಗುಂಪೊಂದು ಡಿಸೆಂಬರ್ 9ರಂದು ಡೆಹ್ರಾಡೂನ್ನಲ್ಲಿ ಹಲ್ಲೆ ನಡೆಸಿ, ಮಾರಾಕಾಸ್ತ್ರಗಳಿಂದ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಡಿಸೆಂಬರ್ 26ರಂದು ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಡೆಹ್ರಾಡೂನ್ನಲ್ಲಿ ತ್ರಿಪುರಾದ ವಿದ್ಯಾರ್ಥಿಯೊಬ್ಬರನ್ನು ಹತ್ಯೆ ಮಾಡಿರುವುದು ‘ದ್ವೇಷಪೂರಿತವಾದ ಭಯಾನಕ ಕೃತ್ಯ‘ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ</p>.<p>‘ಕೆಲ ಭಾರತೀಯರನ್ನು ಗುರಿಯಾಗಿಸಿಕೊಂಡಾಗ ದೂರ ಓಡುವಂಥ ಸತ್ತ ಸಮಾಜ ನಾವಾಗಬಾರದು. ನಮ್ಮ ದೇಶ ಏನಾಗಬೇಕೆಂದು ನಾವು ಬಯಸಿದ್ದೇವು ಅದಕ್ಕಾಗಿ ಹೋರಾಡಬೇಕು ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p class="title">‘ದ್ವೇಷವು ರಾತ್ರೋರಾತ್ರಿ ಉದ್ಭವಿಸುವುದಿಲ್ಲ. ಯುವಕರ ತಲೆಯಲ್ಲಿ ವಿಷ ಬೀಜ ಮತ್ತು ಬೇಜವಾಬ್ದಾರಿಯುತ ವಿಚಾರಗಳನ್ನು ವರ್ಷಾನುಗಟ್ಟಲೆ ತುಂಬುವ ಮೂಲಕ ದ್ವೇಷವನ್ನು ಹರಡಲಾಗುತ್ತಿದೆ’ ಎಂದು ರಾಹುಲ್ ಆರೋಪಿಸಿದರು.</p>.<p class="title">ದ್ವೇಷ ಕೃತ್ಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾತನಾಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.</p>.<p class="title">ಜನಾಂಗೀಯ ನಿಂದನೆಯನ್ನು ಆಕ್ಷೇಪಿಸಿದ್ದ ತ್ರಿಪುರಾ ನಿವಾಸಿ ಅಂಜೆಲ್ ಛಕ್ಮಾ(24) ಅವರಿಗೆ ಆರು ಜನರ ಗುಂಪೊಂದು ಡಿಸೆಂಬರ್ 9ರಂದು ಡೆಹ್ರಾಡೂನ್ನಲ್ಲಿ ಹಲ್ಲೆ ನಡೆಸಿ, ಮಾರಾಕಾಸ್ತ್ರಗಳಿಂದ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಡಿಸೆಂಬರ್ 26ರಂದು ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>