‘ಪಕ್ಷದ ಎಲ್ಲಾ ಶಾಸಕರ ಹೆಸರು, ಕ್ಷೇತ್ರದ ವಿವರ ಹಾಗೂ ಅವರ ಸಹಿಯನ್ನು ನಾವು ಸಂಗ್ರಹಿಸಿಟ್ಟಿದ್ದೆವು. ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಕಾರಣಕ್ಕೆ ಆ ದಾಖಲೆಗಳು ಅಜಿತ್ ಪವಾರ್ ಅವರ ವಶದಲ್ಲಿದ್ದವು. ಅವರು ಅದನ್ನೇ ರಾಜ್ಯಪಾಲರಿಗೆ ನೀಡಿರುವಂತೆ ಕಾಣಿಸುತ್ತದೆ. ಅದು ನಿಜವಾಗಿದ್ದರೆ, ರಾಜ್ಯಪಾಲರನ್ನು ಹಾದಿತಪ್ಪಿಸಲಾಗಿದೆ ಎಂದು ಭಾವಿಸಬೇಕಾಗುತ್ತದೆ ಎಂದು ಪವಾರ್ ಹೇಳಿದರು.