ಆದರೆ, ಆದರೆ ಠಾಕ್ರೆ ಬಣದ 14 ಶಾಸಕರು ವಿಪ್ ಉಲ್ಲಂಘಿಸಿದರು, ತಮ್ಮ ನಡೆಯ ಮೂಲಕ ಶಿವಸೇನಾ ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ತೊರೆದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟಿದ್ದು ಮಾತ್ರವೇ ಅಲ್ಲದೆ, 14 ಶಾಸಕರು ಶಿವಸೇನಾ ವಿರುದ್ಧ ಮತ ಚಲಾಯಿಸಿದ್ದರು ಎಂಬ ಸಂಗತಿಯನ್ನು ಪರಿಗಣಿಸಲು ಸ್ಪೀಕರ್ ವಿಫಲರಾಗಿದ್ದಾರೆ ಎಂದು ಗೋಗಾವಲೆ ಅವರು ಅರ್ಜಿಯಲ್ಲಿ ಹೇಳಿದ್ದಾರೆ.