<p><strong>ಮೀರತ್ (ಉತ್ತರ ಪ್ರದೇಶ):</strong> ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಥಳಿಸಿದ ಗುಂಪೊಂದು, ಜೈಶ್ರೀರಾಮ್ ಜಪಿಸುವಂತೆ ಒತ್ತಾಯಿಸಿದೆ ಎಂದು ಆತನ ಕುಟುಂಬವು ಆರೋಪಿಸಿದೆ.</p>.<p>ಪಲ್ಲವ್ಪುರಂನ ಸೋಫಿಪುರದ ನಿವಾಸಿ ಗುಲ್ಫಾಮ್ ಅವರು ಮಂಗಲ್ ಪಾಂಡೆ ನಗರದಲ್ಲಿರುವ ಖಾಸಗಿ ಶೂಟಿಂಗ್ ರೇಂಜ್ನಲ್ಲಿ ತಾಲೀಮು ನಡೆಸಿ, ಶನಿವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಆತನ ತಂದೆ ಅಫ್ತಾಬ್ ಹೇಳಿದ್ದಾರೆ.</p>.<p>‘ಮೂವರು ಯುವಕರು ತಮ್ಮ ಪುತ್ರನನ್ನು ವಿಕ್ಟೋರಿಯಾ ಪಾರ್ಕ್ಗೆ ಬೈಕ್ನಲ್ಲಿ ಕರೆದೊಯ್ದು, ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಮೊಬೈಲ್ ಫೋನ್ ಕಸಿದುಕೊಂಡು ಜೈಶ್ರೀರಾಮ್ ಜಪಿಸುವಂತೆ ಒತ್ತಾಯಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.</p>.<p>‘ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಗುಲ್ಫಾಮ್ನನ್ನು ಬೆತ್ತಲೆಗೊಳಿಸಿ ಥಳಿಸಿದ ನಂತರ, ಆತ ಪ್ರಜ್ಞಾಹೀನನಾಗಿ ಅಲ್ಲಿಯೇ ಬಿದ್ದಿದ್ದ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ’ ಎಂದು ಸಂತ್ರಸ್ತನ ಕುಟುಂಬಸ್ಥರು ತಿಳಿಸಿದ್ದಾರೆ.</p>.<p>‘ಜೈಶ್ರೀರಾಮ್ ಜಪಿಸುವಂತೆ ಸಂತ್ರಸ್ತನಿಗೆ ಒತ್ತಾಯಿಸಲಾಗಿದೆ ಎಂಬ ಉಲ್ಲೇಖ ಎಫ್ಐಆರ್ನಲ್ಲಿ ಇಲ್ಲ. ಮೇಲ್ನೋಟಕ್ಕೆ ಇದು ಯುವಕರ ನಡುವಿನ ದ್ವೇಷದ ಪ್ರಕರಣ ಎನ್ನುವುದು ಕಂಡು ಬಂದಿದೆ’ ಎಂದು ಠಾಣಾಧಿಕಾರಿ ಮಹಾವೀರ್ ಸಿಂಗ್ ತಿಳಿಸಿದ್ದಾರೆ.</p>.<p>ಅಫ್ತಾಬ್ ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸುವ ಯತ್ನ ನಡೆದಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೀರತ್ (ಉತ್ತರ ಪ್ರದೇಶ):</strong> ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಥಳಿಸಿದ ಗುಂಪೊಂದು, ಜೈಶ್ರೀರಾಮ್ ಜಪಿಸುವಂತೆ ಒತ್ತಾಯಿಸಿದೆ ಎಂದು ಆತನ ಕುಟುಂಬವು ಆರೋಪಿಸಿದೆ.</p>.<p>ಪಲ್ಲವ್ಪುರಂನ ಸೋಫಿಪುರದ ನಿವಾಸಿ ಗುಲ್ಫಾಮ್ ಅವರು ಮಂಗಲ್ ಪಾಂಡೆ ನಗರದಲ್ಲಿರುವ ಖಾಸಗಿ ಶೂಟಿಂಗ್ ರೇಂಜ್ನಲ್ಲಿ ತಾಲೀಮು ನಡೆಸಿ, ಶನಿವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಆತನ ತಂದೆ ಅಫ್ತಾಬ್ ಹೇಳಿದ್ದಾರೆ.</p>.<p>‘ಮೂವರು ಯುವಕರು ತಮ್ಮ ಪುತ್ರನನ್ನು ವಿಕ್ಟೋರಿಯಾ ಪಾರ್ಕ್ಗೆ ಬೈಕ್ನಲ್ಲಿ ಕರೆದೊಯ್ದು, ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಮೊಬೈಲ್ ಫೋನ್ ಕಸಿದುಕೊಂಡು ಜೈಶ್ರೀರಾಮ್ ಜಪಿಸುವಂತೆ ಒತ್ತಾಯಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.</p>.<p>‘ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಗುಲ್ಫಾಮ್ನನ್ನು ಬೆತ್ತಲೆಗೊಳಿಸಿ ಥಳಿಸಿದ ನಂತರ, ಆತ ಪ್ರಜ್ಞಾಹೀನನಾಗಿ ಅಲ್ಲಿಯೇ ಬಿದ್ದಿದ್ದ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ’ ಎಂದು ಸಂತ್ರಸ್ತನ ಕುಟುಂಬಸ್ಥರು ತಿಳಿಸಿದ್ದಾರೆ.</p>.<p>‘ಜೈಶ್ರೀರಾಮ್ ಜಪಿಸುವಂತೆ ಸಂತ್ರಸ್ತನಿಗೆ ಒತ್ತಾಯಿಸಲಾಗಿದೆ ಎಂಬ ಉಲ್ಲೇಖ ಎಫ್ಐಆರ್ನಲ್ಲಿ ಇಲ್ಲ. ಮೇಲ್ನೋಟಕ್ಕೆ ಇದು ಯುವಕರ ನಡುವಿನ ದ್ವೇಷದ ಪ್ರಕರಣ ಎನ್ನುವುದು ಕಂಡು ಬಂದಿದೆ’ ಎಂದು ಠಾಣಾಧಿಕಾರಿ ಮಹಾವೀರ್ ಸಿಂಗ್ ತಿಳಿಸಿದ್ದಾರೆ.</p>.<p>ಅಫ್ತಾಬ್ ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸುವ ಯತ್ನ ನಡೆದಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>