<p><strong>ಲಖನೌ</strong>: ಮಕ್ಕಳಲ್ಲಿ ಜ್ಞಾನ ವೃದ್ಧಿಸುವ ದೃಷ್ಟಿಯಿಂದ ಉತ್ತರ ಪ್ರದೇಶದ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಸುದ್ದಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಉತ್ತರ ಪ್ರದೇಶ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.</p> <p>ಮಕ್ಕಳನ್ನು ಮೊಬೈಲ್ ಚಟದಿಂದ ದೂರವಿಡಲು ಮತ್ತು ಓದುವ ಸಂಸ್ಕೃತಿ ಬಲಪಡಿಸುವ ದೃಷ್ಟಿಯಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.</p><p>ಈ ಸಂಬಂಧ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಾರ್ಥ ಸಾರಥಿ ಸೇನ್ ಶರ್ಮಾ ಆದೇಶ ಹೊರಡಿಸಿದ್ದಾರೆ. ಪ್ರತಿ ಗ್ರಂಥಾಲಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ದಿನಪತ್ರಿಕೆ ಲಭ್ಯವಾಗುವಂತೆ ನೋಡಿಕೊಳ್ಳುವ ಅಂಶವೂ ಆದೇಶದಲ್ಲಿದೆ.</p><p>ಶಾಲೆಯ ಬೆಳಗಿನ ಪ್ರಾರ್ಥನಾ ಸಮಯದಲ್ಲಿ 10 ನಿಮಿಷ ಸುದ್ದಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಪತ್ರಿಕೆಯ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಕ್ರೀಡೆಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಸೇರಿದಂತೆ ಮುಖ್ಯ ಅಂಶಗಳನ್ನು ರೊಟೇಶನ್ ಆಧಾರದಲ್ಲಿ ಓದಬೇಕು. </p><p>‘ದಿನದ ಪದ ಅಭ್ಯಾಸ’ವನ್ನು ಸಹ ಕಡ್ಡಾಯಗೊಳಿಸುವ ಅಂಶ ಆದೇಶದಲ್ಲಿ ಇದೆ. ಪತ್ರಿಕೆಯಲ್ಲಿ ಐದು ಕ್ಲಿಷ್ಟ ಶಬ್ದಗಳನ್ನು ಆಯ್ಕೆ ಮಾಡಿ ನೋಟಿಸ್ ಬೋರ್ಡ್ಗೆ ಹಾಕಿ ಅವುಗಳ ಉಚ್ಛಾರದ ಅಭ್ಯಾಸ ಮಾಡಬೇಕು.</p><p>ಈ ಅಭ್ಯಾಸವು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಶಬ್ಧಕೋಶ, ಯೋಚನಾಶಕ್ತಿ, ಏಕಾಗ್ರತೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ಧಗೊಳಿಸುತ್ತದೆ. ನಕಲಿ ಸುದ್ದಿಗಳ ಬಗ್ಗೆ ಅವರನ್ನು ಸೂಕ್ಷ್ಮಮತಿಗಳಾಗಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.</p><p>ಪತ್ರಿಕೆಗಳನ್ನು ಓದುವ ಜೊತೆಗೆ ಶಾಲೆಯಲ್ಲೇ ದಿನ ಪತ್ರಿಕೆ ಅಥವಾ ವಾರ ಪತ್ರಿಕೆ ಹೊರತರುವುದು, ಬರವಣಿಗೆ, 9ರಿಂದ 12ನೇ ತರಗತಿಯವರಿಗೆ ಗುಂಪು ಚರ್ಚೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸುಡೊಕು, ಪದಬಂಧ ಸ್ಪರ್ಧೆಗಳ ಆಯೋಜನೆಗೂ ನಿರ್ದೇಶಿಸಲಾಗಿದೆ.</p><p><strong>ಅಭಿಯಾನದ ಉದ್ದೇಶ</strong> </p><p>* ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಶಬ್ದಕೋಶ ವಿಮರ್ಶಾತ್ಮಕ ಚಿಂತನೆ ಏಕಾಗ್ರತೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವುದು </p><p>* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು </p><p>* ಸುಳ್ಳು ಸುದ್ದಿಗಳ ವಿರುದ್ಧ ವಿದ್ಯಾರ್ಥಿಗಳನ್ನು ಸಂವೇದನಾಶೀಲಗೊಳಿಸುವುದು ಚಟುವಟಿಕೆಗಳು</p><p> * ವಿದ್ಯಾರ್ಥಿಗಳು ಬೆಳಿಗ್ಗೆ ಕನಿಷ್ಠ 10 ನಿಮಿಷ ದಿನಪತ್ರಿಕೆಗಳನ್ನು ಓದಲು ಮೀಸಲಿಡಬೇಕು </p><p>* ರಾಷ್ಟ್ರೀಯ ಅಂತರರಾಷ್ಟ್ರೀಯ ಮತ್ತು ಕ್ರೀಡಾ ಸುದ್ದಿಗಳು ಪ್ರಮುಖ ಸಂಪಾದಕೀಯ ಸುದ್ದಿ ಹಾಗೂ ಬೆಳವಣಿಗೆಗಳನ್ನು ಸರದಿಯ ಆಧಾರದ ಮೇಲೆ ಓದಬೇಕು</p><p> * ‘ದಿನದ ಪದ’ ಅಭ್ಯಾಸವನ್ನೂ ಪರಿಚಯಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ಶಬ್ದ ಭಂಡಾರವನ್ನು ಹೆಚ್ಚಿಸಲು ಪತ್ರಿಕೆಗಳಿಂದ ಐದು ಕಷ್ಟಕರ ಪದಗಳನ್ನು ಆಯ್ಕೆ ಮಾಡಿ ಅವುಗಳ ಅರ್ಥಗಳನ್ನು ವಿವರಿಸಬೇಕು.</p><p> * ದಿನಪತ್ರಿಕೆ ಓದುವುದರ ಜೊತೆಗೆ ಶಾಲೆಗಳು ತಮ್ಮ ಸ್ವಂತ ಶಾಲಾ ಪತ್ರಿಕೆಗಳು ಅಥವಾ ನಿಯತಕಾಲಿಕೆಗಳನ್ನು ಪ್ರಕಟಿಸುವುದು</p><p> * 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಂಪಾದಕೀಯ ಆಧಾರಿತ ಬರವಣಿಗೆ ಅಥವಾ ಗುಂಪು ಚರ್ಚೆ ನಡೆಸುವುದು</p><p> * ಕ್ರಾಸ್ವರ್ಡ್ ಮತ್ತು ಸುಡೊಕು ಸ್ಪರ್ಧೆ ಆಯೋಜಿಸುವುದು</p><p> * ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿ ಹಾಗೂ ಚಿತ್ರದ ತುಣುಕುಗಳನ್ನು ಬಳಸಿಕೊಂಡು ಸ್ಕ್ರ್ಯಾಪ್ಬುಕ್ ತಯಾರಿಸುವುದನ್ನು ಉತ್ತೇಜಿಸುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಮಕ್ಕಳಲ್ಲಿ ಜ್ಞಾನ ವೃದ್ಧಿಸುವ ದೃಷ್ಟಿಯಿಂದ ಉತ್ತರ ಪ್ರದೇಶದ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಸುದ್ದಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಉತ್ತರ ಪ್ರದೇಶ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.</p> <p>ಮಕ್ಕಳನ್ನು ಮೊಬೈಲ್ ಚಟದಿಂದ ದೂರವಿಡಲು ಮತ್ತು ಓದುವ ಸಂಸ್ಕೃತಿ ಬಲಪಡಿಸುವ ದೃಷ್ಟಿಯಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.</p><p>ಈ ಸಂಬಂಧ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಾರ್ಥ ಸಾರಥಿ ಸೇನ್ ಶರ್ಮಾ ಆದೇಶ ಹೊರಡಿಸಿದ್ದಾರೆ. ಪ್ರತಿ ಗ್ರಂಥಾಲಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ದಿನಪತ್ರಿಕೆ ಲಭ್ಯವಾಗುವಂತೆ ನೋಡಿಕೊಳ್ಳುವ ಅಂಶವೂ ಆದೇಶದಲ್ಲಿದೆ.</p><p>ಶಾಲೆಯ ಬೆಳಗಿನ ಪ್ರಾರ್ಥನಾ ಸಮಯದಲ್ಲಿ 10 ನಿಮಿಷ ಸುದ್ದಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಪತ್ರಿಕೆಯ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಕ್ರೀಡೆಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಸೇರಿದಂತೆ ಮುಖ್ಯ ಅಂಶಗಳನ್ನು ರೊಟೇಶನ್ ಆಧಾರದಲ್ಲಿ ಓದಬೇಕು. </p><p>‘ದಿನದ ಪದ ಅಭ್ಯಾಸ’ವನ್ನು ಸಹ ಕಡ್ಡಾಯಗೊಳಿಸುವ ಅಂಶ ಆದೇಶದಲ್ಲಿ ಇದೆ. ಪತ್ರಿಕೆಯಲ್ಲಿ ಐದು ಕ್ಲಿಷ್ಟ ಶಬ್ದಗಳನ್ನು ಆಯ್ಕೆ ಮಾಡಿ ನೋಟಿಸ್ ಬೋರ್ಡ್ಗೆ ಹಾಕಿ ಅವುಗಳ ಉಚ್ಛಾರದ ಅಭ್ಯಾಸ ಮಾಡಬೇಕು.</p><p>ಈ ಅಭ್ಯಾಸವು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಶಬ್ಧಕೋಶ, ಯೋಚನಾಶಕ್ತಿ, ಏಕಾಗ್ರತೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ಧಗೊಳಿಸುತ್ತದೆ. ನಕಲಿ ಸುದ್ದಿಗಳ ಬಗ್ಗೆ ಅವರನ್ನು ಸೂಕ್ಷ್ಮಮತಿಗಳಾಗಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.</p><p>ಪತ್ರಿಕೆಗಳನ್ನು ಓದುವ ಜೊತೆಗೆ ಶಾಲೆಯಲ್ಲೇ ದಿನ ಪತ್ರಿಕೆ ಅಥವಾ ವಾರ ಪತ್ರಿಕೆ ಹೊರತರುವುದು, ಬರವಣಿಗೆ, 9ರಿಂದ 12ನೇ ತರಗತಿಯವರಿಗೆ ಗುಂಪು ಚರ್ಚೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸುಡೊಕು, ಪದಬಂಧ ಸ್ಪರ್ಧೆಗಳ ಆಯೋಜನೆಗೂ ನಿರ್ದೇಶಿಸಲಾಗಿದೆ.</p><p><strong>ಅಭಿಯಾನದ ಉದ್ದೇಶ</strong> </p><p>* ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಶಬ್ದಕೋಶ ವಿಮರ್ಶಾತ್ಮಕ ಚಿಂತನೆ ಏಕಾಗ್ರತೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವುದು </p><p>* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು </p><p>* ಸುಳ್ಳು ಸುದ್ದಿಗಳ ವಿರುದ್ಧ ವಿದ್ಯಾರ್ಥಿಗಳನ್ನು ಸಂವೇದನಾಶೀಲಗೊಳಿಸುವುದು ಚಟುವಟಿಕೆಗಳು</p><p> * ವಿದ್ಯಾರ್ಥಿಗಳು ಬೆಳಿಗ್ಗೆ ಕನಿಷ್ಠ 10 ನಿಮಿಷ ದಿನಪತ್ರಿಕೆಗಳನ್ನು ಓದಲು ಮೀಸಲಿಡಬೇಕು </p><p>* ರಾಷ್ಟ್ರೀಯ ಅಂತರರಾಷ್ಟ್ರೀಯ ಮತ್ತು ಕ್ರೀಡಾ ಸುದ್ದಿಗಳು ಪ್ರಮುಖ ಸಂಪಾದಕೀಯ ಸುದ್ದಿ ಹಾಗೂ ಬೆಳವಣಿಗೆಗಳನ್ನು ಸರದಿಯ ಆಧಾರದ ಮೇಲೆ ಓದಬೇಕು</p><p> * ‘ದಿನದ ಪದ’ ಅಭ್ಯಾಸವನ್ನೂ ಪರಿಚಯಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ಶಬ್ದ ಭಂಡಾರವನ್ನು ಹೆಚ್ಚಿಸಲು ಪತ್ರಿಕೆಗಳಿಂದ ಐದು ಕಷ್ಟಕರ ಪದಗಳನ್ನು ಆಯ್ಕೆ ಮಾಡಿ ಅವುಗಳ ಅರ್ಥಗಳನ್ನು ವಿವರಿಸಬೇಕು.</p><p> * ದಿನಪತ್ರಿಕೆ ಓದುವುದರ ಜೊತೆಗೆ ಶಾಲೆಗಳು ತಮ್ಮ ಸ್ವಂತ ಶಾಲಾ ಪತ್ರಿಕೆಗಳು ಅಥವಾ ನಿಯತಕಾಲಿಕೆಗಳನ್ನು ಪ್ರಕಟಿಸುವುದು</p><p> * 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಂಪಾದಕೀಯ ಆಧಾರಿತ ಬರವಣಿಗೆ ಅಥವಾ ಗುಂಪು ಚರ್ಚೆ ನಡೆಸುವುದು</p><p> * ಕ್ರಾಸ್ವರ್ಡ್ ಮತ್ತು ಸುಡೊಕು ಸ್ಪರ್ಧೆ ಆಯೋಜಿಸುವುದು</p><p> * ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿ ಹಾಗೂ ಚಿತ್ರದ ತುಣುಕುಗಳನ್ನು ಬಳಸಿಕೊಂಡು ಸ್ಕ್ರ್ಯಾಪ್ಬುಕ್ ತಯಾರಿಸುವುದನ್ನು ಉತ್ತೇಜಿಸುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>