ಸುಲ್ತಾನ್ಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯವು ಮೇ 2ಕ್ಕೆ ಮುಂದೂಡಿತು.
ರಾಹುಲ್ ಗಾಂಧಿ ಅವರ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಅವರ ಪ್ರಕಾರ, ‘ಇಂದು ವಿಚಾರಣೆ ನಿಗದಿ ಆಗಿತ್ತು. ಆದರೆ, ನ್ಯಾಯಾಧೀಶರ ನಿಯೋಜನೆ ಆಗದ ಕಾರಣ ವಿಚಾರಣೆ ನಡೆಯಲಿಲ್ಲ’ ಎಂದರು.
ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು 2018ರ ಆಗಸ್ಟ್ 4ರಂದು ಈ ಮೊಕದ್ದೆಮೆ ದಾಖಲಿಸಿದ್ದರು. ಕಳೆದ ಡಿಸೆಂಬರ್ನಲ್ಲಿ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ವಾರಂಟ್ ನೀಡಿತ್ತು. ಕೋರ್ಟ್ಗೆ ಹಾಜರಾಗಿದ್ದ ಅವರಿಗೆ ಬಳಿಕ ಜಾಮೀನು ಮಂಜೂರು ಮಾಡಿತ್ತು.