<p><strong>ಮುಜಫ್ಫರ್ನಗರ (ಪಿಟಿಐ):</strong> ಕಾವಡ್ ಯಾತ್ರಾ ಮಾರ್ಗದಲ್ಲಿರುವ ಹೋಟೆಲ್ಗಳ ಮಾಲೀಕರ ಗುರುತನ್ನು ಬಹಿರಂಗಪಡಿಸುವಂತೆ ಒತ್ತಾಯಿಸುತ್ತಿದ್ದ ಆರೋಪದಲ್ಲಿ ಸ್ವಾಮಿ ಯಶವೀರ್ ಮಹಾರಾಜ್ ಅವರ 6 ಮಂದಿ ಅನುಯಾಯಿಗಳಿಗೆ ಸಮನ್ಸ್ ನೀಡಿರುವುದಾಗಿ ಪೊಲೀಸರು ಬುಧವಾರ ಹೇಳಿದ್ದಾರೆ.</p>.<p>ಜಿಲ್ಲಾಡಳಿತದ ಅನುಮತಿಯನ್ನೂ ಪಡೆಯದೇ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಹೋಟೆಲ್ ಸಿಬ್ಬಂದಿಯ ಗುರುತು ಪರಿಶೀಲನೆಗೆ ಮುಂದಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. </p>.<p>ಸುಮಿತ್ ಬಹ್ರಾಗಿ, ರೋಹಿತ್, ವಿವೇಕ್, ಸುಮಿತ್, ಸುನ್ನಿ ಹಾಗೂ ರಾಕೇಶ್ ಎಂಬವರಿಗೆ 3 ದಿನಗಳ ಒಳಗೆ ಠಾಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ. ಈ 6 ಮಂದಿ ಸ್ವಾಮಿ ಯಶವೀರ್ ಅವರ ಯೋಗ ಸಾಧನಾ ಯಶವೀರ ಆಶ್ರಮದ ಕಾರ್ಯಕರ್ತರು ಎಂದು ಪೊಲೀಸರು ಹೇಳಿದ್ದಾರೆ. ಇವರಲ್ಲದೇ, ವಿಡಿಯೊದಲ್ಲಿ ಕಂಡುಬಂದಿರುವ ಇತರರಿಗೂ ಶೀಘ್ರವೇ ಸಮನ್ಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ. </p>.<p>ಸ್ಥಳೀಯರ ಪ್ರಕಾರ, ಕಾವಡ್ ಯಾತ್ರಾ ಮಾರ್ಗದಲ್ಲಿರುವ ಹೋಟೆಲ್ಗಳ ಮಾಲೀಕರ ಪೂರ್ವಪರ, ಗುರುತು ವಿಚಾರಿಸುವ ಅಭಿಯಾನಕ್ಕೆ ಭಾನುವಾರ ಸ್ವಾಮಿ ಯಶವೀರ್ ಚಾಲನೆ ನೀಡಿದರು ಎನ್ನಲಾಗಿದೆ.</p>.<p><strong>ಭಯೋತ್ಪಾದನೆಗೆ ಸಮ: ಹಸನ್</strong> </p>.<p>‘ಯಾತ್ರಾ ಮಾರ್ಗದಲ್ಲಿರುವ ಹೋಟೆಲ್ ಮಾಲೀಕರು ಯಾವ ಧರ್ಮಕ್ಕೆ ಸೇರಿದವರೆಂದು ತಿಳಿಯಲು ಬಲವಂತವಾಗಿ ಅವರ ಹೆಸರು ಹೇಳುವಂತೆ ಪೀಡಿಸಲಾಗುತ್ತಿದೆ, ಅವರನ್ನು ವಿವಸ್ತ್ರಗೊಳಿಸಲಾಗುತ್ತಿದೆ. ಈ ಕೃತ್ಯಕ್ಕೂ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಕೃತ್ಯಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇದೂ ಒಂದು ರೀತಿಯ ಭಯೋತ್ಪಾದನೆ’ ಹೀಗೆಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಎಸ್.ಟಿ ಹಸನ್ ಹೇಳಿದ್ದಾರೆ.</p>.<p>ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಸ್ಥಳೀಯ ಹಿಂದೂ ಸಂಘಟನೆಗಳ ಸದಸ್ಯರು ಹೋಟೆಲ್ ಮಾಲೀಕರ ಗುರುತು ಬಹಿರಂಗ ಪಡಿಸಲು ಒತ್ತಾಯಿಸಿರುವ ವಿಡಿಯೊಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಹಸನ್ ಈ ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಜಫ್ಫರ್ನಗರ (ಪಿಟಿಐ):</strong> ಕಾವಡ್ ಯಾತ್ರಾ ಮಾರ್ಗದಲ್ಲಿರುವ ಹೋಟೆಲ್ಗಳ ಮಾಲೀಕರ ಗುರುತನ್ನು ಬಹಿರಂಗಪಡಿಸುವಂತೆ ಒತ್ತಾಯಿಸುತ್ತಿದ್ದ ಆರೋಪದಲ್ಲಿ ಸ್ವಾಮಿ ಯಶವೀರ್ ಮಹಾರಾಜ್ ಅವರ 6 ಮಂದಿ ಅನುಯಾಯಿಗಳಿಗೆ ಸಮನ್ಸ್ ನೀಡಿರುವುದಾಗಿ ಪೊಲೀಸರು ಬುಧವಾರ ಹೇಳಿದ್ದಾರೆ.</p>.<p>ಜಿಲ್ಲಾಡಳಿತದ ಅನುಮತಿಯನ್ನೂ ಪಡೆಯದೇ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಹೋಟೆಲ್ ಸಿಬ್ಬಂದಿಯ ಗುರುತು ಪರಿಶೀಲನೆಗೆ ಮುಂದಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. </p>.<p>ಸುಮಿತ್ ಬಹ್ರಾಗಿ, ರೋಹಿತ್, ವಿವೇಕ್, ಸುಮಿತ್, ಸುನ್ನಿ ಹಾಗೂ ರಾಕೇಶ್ ಎಂಬವರಿಗೆ 3 ದಿನಗಳ ಒಳಗೆ ಠಾಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ. ಈ 6 ಮಂದಿ ಸ್ವಾಮಿ ಯಶವೀರ್ ಅವರ ಯೋಗ ಸಾಧನಾ ಯಶವೀರ ಆಶ್ರಮದ ಕಾರ್ಯಕರ್ತರು ಎಂದು ಪೊಲೀಸರು ಹೇಳಿದ್ದಾರೆ. ಇವರಲ್ಲದೇ, ವಿಡಿಯೊದಲ್ಲಿ ಕಂಡುಬಂದಿರುವ ಇತರರಿಗೂ ಶೀಘ್ರವೇ ಸಮನ್ಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ. </p>.<p>ಸ್ಥಳೀಯರ ಪ್ರಕಾರ, ಕಾವಡ್ ಯಾತ್ರಾ ಮಾರ್ಗದಲ್ಲಿರುವ ಹೋಟೆಲ್ಗಳ ಮಾಲೀಕರ ಪೂರ್ವಪರ, ಗುರುತು ವಿಚಾರಿಸುವ ಅಭಿಯಾನಕ್ಕೆ ಭಾನುವಾರ ಸ್ವಾಮಿ ಯಶವೀರ್ ಚಾಲನೆ ನೀಡಿದರು ಎನ್ನಲಾಗಿದೆ.</p>.<p><strong>ಭಯೋತ್ಪಾದನೆಗೆ ಸಮ: ಹಸನ್</strong> </p>.<p>‘ಯಾತ್ರಾ ಮಾರ್ಗದಲ್ಲಿರುವ ಹೋಟೆಲ್ ಮಾಲೀಕರು ಯಾವ ಧರ್ಮಕ್ಕೆ ಸೇರಿದವರೆಂದು ತಿಳಿಯಲು ಬಲವಂತವಾಗಿ ಅವರ ಹೆಸರು ಹೇಳುವಂತೆ ಪೀಡಿಸಲಾಗುತ್ತಿದೆ, ಅವರನ್ನು ವಿವಸ್ತ್ರಗೊಳಿಸಲಾಗುತ್ತಿದೆ. ಈ ಕೃತ್ಯಕ್ಕೂ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಕೃತ್ಯಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇದೂ ಒಂದು ರೀತಿಯ ಭಯೋತ್ಪಾದನೆ’ ಹೀಗೆಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಎಸ್.ಟಿ ಹಸನ್ ಹೇಳಿದ್ದಾರೆ.</p>.<p>ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಸ್ಥಳೀಯ ಹಿಂದೂ ಸಂಘಟನೆಗಳ ಸದಸ್ಯರು ಹೋಟೆಲ್ ಮಾಲೀಕರ ಗುರುತು ಬಹಿರಂಗ ಪಡಿಸಲು ಒತ್ತಾಯಿಸಿರುವ ವಿಡಿಯೊಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಹಸನ್ ಈ ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>