<p><strong>ಲಖನೌ:</strong> ವಿಧಾನಸಭಾ ಚುನಾವಣೆಗೆ ಸಜ್ಜಾದ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಬೆನ್ನಟ್ಟಿದ್ದಾರೆ. ಪ್ರಚಾರ ನಡೆಸದೆ ಆ ಶಾಸಕ ವಾಪಸ್ಸಾಗಿದ್ದಾರೆ.</p>.<p>ಪ್ರಚಾರಕ್ಕಾಗಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರು ಗುರುವಾರ ಮುನ್ವಾರ್ಪುರ್ ಗ್ರಾಮಕ್ಕೆ ತೆರಳಿದ್ದರು. ಸೈನಿ ಅವರು ಗ್ರಾಮ ಪ್ರವೇಶಿಸುವುದನ್ನು ಗ್ರಾಮಸ್ಥರು ತಡೆದಿದ್ದಾರೆ. ನಂತರ ಅವರ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ವಾಪಸ್ ತೆರಳುವಂತೆ ಸೈನಿ ಅವರನ್ನು ಆಗ್ರಹಿಸಿದ್ದಾರೆ.</p>.<p>ಗ್ರಾಮಸ್ಥರ ಪ್ರತಿರೋಧ ಎದುರಿಸಿದ ಶಾಸಕರು, ಬೇರೆ ಆಯ್ಕೆಯಿಲ್ಲದೇ ಕಾರು ಹತ್ತಿ ವಾಪಸ್ ಹೋಗಿದ್ದಾರೆ.</p>.<p>ಈ ಕುರಿತ ವಿಡಿಯೊವನ್ನು ಕಿಸಾನ್ ಏಕತಾ ಮಂಚ್ ಟ್ವೀಟ್ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಡುವಾಗ ಸೈನಿ ಅವರು ಆ ಹೋರಾಟವನ್ನು ಲೇವಡಿ ಮಾಡಿದ್ದರು. ಲಖಿಂಪುರ ಖೇರಿ ಪ್ರಕರಣದಲ್ಲಿ ರೈತರ ಪರವಾಗಿ ಅವರು ಒಂದು ಮಾತನ್ನೂ ಹೇಳಿಲ್ಲ. ಹೀಗಿದ್ದೂ ಅವರು ಮತ ಕೇಳಲು ರೈತರ ಮುಂದೆ ಬಂದಿದ್ದಾರೆ. ಅವರ ಸ್ಥಾನ ಯಾವುದು ಎಂಬುದನ್ನು ನಾವು ಅವರಿಗೆ ತೋರಿಸಿ ದ್ದೇವೆ’ ಎಂದು ಸ್ಥಳದಲ್ಲಿದ್ದ ರೈತರು ಹೇಳಿದ್ದಾರೆ.</p>.<p>ಈ ಬಗ್ಗೆ ಸುದ್ದಿಗಾರರ ಜತೆ ಮಾತನಾ ಡಿರುವ ಶಾಸಕ ಸೈನಿ, ಗ್ರಾಮಸ್ಥರ ಪೈಕಿ ಕೆಲವರು ಮದ್ಯದ ಅಮಲಿನಲ್ಲಿದ್ದರು. ಹೀಗಾಗಿ ಭೇಟಿಗೆ ಪ್ರತಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ವಾಪಸ್ ಬಂದಿರುವುದಾಗಿ ಹೇಳಿದ್ದಾರೆ.</p>.<p><strong>‘ಹಳೆ ಪಿಂಚಣಿ ವ್ಯವಸ್ಥೆ ತರುತ್ತೇವೆ’</strong></p>.<p>‘ರಾಜ್ಯದಲ್ಲಿ ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರುಜಾರಿ ಮಾಡುತ್ತೇವೆ’ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಹೇಳಿದ್ದಾರೆ.</p>.<p>ಪಕ್ಷದ ವರ್ಚ್ಯುವಲ್ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಂಚಣಿ ವಿಷಯವನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದೇವೆ ಎಂದು ಹೇಳಿದರು.</p>.<p>‘ಪಿಂಚಣಿಯು ನೌಕರರ ಹಕ್ಕು. ಅಂಬೇಡ್ಕರ್ ಅವರು ರಚಿಸಿದ್ದ ಸಂವಿಧಾನದಲ್ಲಿದ್ದ ಈ ಹಕ್ಕನ್ನು ನೌಕರರಿಂದ ಕಸಿದುಕೊಳ್ಳಲಾಗಿತ್ತು. ಈ ಹಕ್ಕನ್ನು ನಾವು ಮತ್ತೆ ನೀಡುತ್ತೇವೆ. ಹಳೆಯ ಪಿಂಚಣಿ ವ್ಯವಸ್ಥೆ ಮರುಜಾರಿಯಾದರೆ, ಲಕ್ಷಾಂತರ ನೌಕರರಿಗೆ ಅದರ ಪ್ರಯೋಜನ ದೊರೆಯಲಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ವಿಧಾನಸಭಾ ಚುನಾವಣೆಗೆ ಸಜ್ಜಾದ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಬೆನ್ನಟ್ಟಿದ್ದಾರೆ. ಪ್ರಚಾರ ನಡೆಸದೆ ಆ ಶಾಸಕ ವಾಪಸ್ಸಾಗಿದ್ದಾರೆ.</p>.<p>ಪ್ರಚಾರಕ್ಕಾಗಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರು ಗುರುವಾರ ಮುನ್ವಾರ್ಪುರ್ ಗ್ರಾಮಕ್ಕೆ ತೆರಳಿದ್ದರು. ಸೈನಿ ಅವರು ಗ್ರಾಮ ಪ್ರವೇಶಿಸುವುದನ್ನು ಗ್ರಾಮಸ್ಥರು ತಡೆದಿದ್ದಾರೆ. ನಂತರ ಅವರ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ವಾಪಸ್ ತೆರಳುವಂತೆ ಸೈನಿ ಅವರನ್ನು ಆಗ್ರಹಿಸಿದ್ದಾರೆ.</p>.<p>ಗ್ರಾಮಸ್ಥರ ಪ್ರತಿರೋಧ ಎದುರಿಸಿದ ಶಾಸಕರು, ಬೇರೆ ಆಯ್ಕೆಯಿಲ್ಲದೇ ಕಾರು ಹತ್ತಿ ವಾಪಸ್ ಹೋಗಿದ್ದಾರೆ.</p>.<p>ಈ ಕುರಿತ ವಿಡಿಯೊವನ್ನು ಕಿಸಾನ್ ಏಕತಾ ಮಂಚ್ ಟ್ವೀಟ್ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಡುವಾಗ ಸೈನಿ ಅವರು ಆ ಹೋರಾಟವನ್ನು ಲೇವಡಿ ಮಾಡಿದ್ದರು. ಲಖಿಂಪುರ ಖೇರಿ ಪ್ರಕರಣದಲ್ಲಿ ರೈತರ ಪರವಾಗಿ ಅವರು ಒಂದು ಮಾತನ್ನೂ ಹೇಳಿಲ್ಲ. ಹೀಗಿದ್ದೂ ಅವರು ಮತ ಕೇಳಲು ರೈತರ ಮುಂದೆ ಬಂದಿದ್ದಾರೆ. ಅವರ ಸ್ಥಾನ ಯಾವುದು ಎಂಬುದನ್ನು ನಾವು ಅವರಿಗೆ ತೋರಿಸಿ ದ್ದೇವೆ’ ಎಂದು ಸ್ಥಳದಲ್ಲಿದ್ದ ರೈತರು ಹೇಳಿದ್ದಾರೆ.</p>.<p>ಈ ಬಗ್ಗೆ ಸುದ್ದಿಗಾರರ ಜತೆ ಮಾತನಾ ಡಿರುವ ಶಾಸಕ ಸೈನಿ, ಗ್ರಾಮಸ್ಥರ ಪೈಕಿ ಕೆಲವರು ಮದ್ಯದ ಅಮಲಿನಲ್ಲಿದ್ದರು. ಹೀಗಾಗಿ ಭೇಟಿಗೆ ಪ್ರತಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ವಾಪಸ್ ಬಂದಿರುವುದಾಗಿ ಹೇಳಿದ್ದಾರೆ.</p>.<p><strong>‘ಹಳೆ ಪಿಂಚಣಿ ವ್ಯವಸ್ಥೆ ತರುತ್ತೇವೆ’</strong></p>.<p>‘ರಾಜ್ಯದಲ್ಲಿ ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರುಜಾರಿ ಮಾಡುತ್ತೇವೆ’ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಹೇಳಿದ್ದಾರೆ.</p>.<p>ಪಕ್ಷದ ವರ್ಚ್ಯುವಲ್ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಂಚಣಿ ವಿಷಯವನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದೇವೆ ಎಂದು ಹೇಳಿದರು.</p>.<p>‘ಪಿಂಚಣಿಯು ನೌಕರರ ಹಕ್ಕು. ಅಂಬೇಡ್ಕರ್ ಅವರು ರಚಿಸಿದ್ದ ಸಂವಿಧಾನದಲ್ಲಿದ್ದ ಈ ಹಕ್ಕನ್ನು ನೌಕರರಿಂದ ಕಸಿದುಕೊಳ್ಳಲಾಗಿತ್ತು. ಈ ಹಕ್ಕನ್ನು ನಾವು ಮತ್ತೆ ನೀಡುತ್ತೇವೆ. ಹಳೆಯ ಪಿಂಚಣಿ ವ್ಯವಸ್ಥೆ ಮರುಜಾರಿಯಾದರೆ, ಲಕ್ಷಾಂತರ ನೌಕರರಿಗೆ ಅದರ ಪ್ರಯೋಜನ ದೊರೆಯಲಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>