ಶನಿವಾರ ಸಂಜೆ ಸಿಎಂ ಯೋಗಿ ಬದರಿನಾಥ ಧಾಮದ ಶಯನ ಆರತಿಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಉತ್ತರಾಖಂಡದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. 13,200 ಅಡಿ ಎತ್ತರದಲ್ಲಿರುವ ಚೀನಾ ಗಡಿ ಬಳಿಯ ಘಸ್ತೌಲಿ ಪೋಸ್ಟ್ಗೆ ತೆರಳಿದರು. ಅಲ್ಲಿ ನಿಯೋಜಿತ ಐಟಿಬಿಪಿ ಸಿಬ್ಬಂದಿಯನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ, ಧೈರ್ಯ ತುಂಬಿದರು.
ಶನಿವಾರ(ನಿನ್ನೆ) ತೆಹ್ರಿಯ ನರೇಂದ್ರ ನಗರದಲ್ಲಿ ನಡೆದ ಕೇಂದ್ರ ವಲಯ ಮಂಡಳಿಯ 24ನೇ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆದಿದ್ದು, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ಇಂದು (ಭಾನುವಾರ) ಸಿಎಂ ಯೋಗಿ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಪವಿತ್ರ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.