<p><strong>ಪಣಜಿ</strong>: ಭಾರಿ ಮಳೆಯ ಕಾರಣ ಗೋವಾದ ಪೆರ್ನೆಮ್ ಸುರಂಗದೊಳಗೆ ಹೆಚ್ಚು ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರ ಬುಧವಾರ ಬೆಳಿಗ್ಗೆ ಮತ್ತೊಮ್ಮೆ ಸ್ಥಗಿತವಾಗಿತ್ತು.</p>.<p>ಇದರ ಪರಿಣಾಮ, ಸಿಎಸ್ಎಂಟಿ ಮುಂಬೈನಿಂದ ಹೊರಡುವ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದಾಯಿತು. ಕೆಲ ರೈಲುಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಎದುರಿಸಿದರು. </p>.<p>ಮೂರು ದಿನಗಳಿಂದ ಗೋವಾದಲ್ಲಿ ಭಾರಿ ಮಳೆಯಾಗುತ್ತಿದೆ. ಬುಧವಾರ ಬೆಳಿಗ್ಗೆಯಿಂದ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಘೋಷಿಸಿದೆ. </p>.<p>ಮಧುರೆ–ಪೆರ್ನೆಮ್ ವಿಭಾಗದ ನಡುವಿನ ಪೆರ್ನೆಮ್ ಸುರಂಗದೊಳಗೆ ಮಂಗಳವಾರ ಮಧ್ಯಾಹ್ನ 2.35 ಗಂಟೆಗೆ ನೀರು ಹರಿಯಲು ಪ್ರಾರಂಭಿಸಿ, ರೈಲು ಸಂಚಾರಕ್ಕೆ ಅಡಚಣೆಯಾಯಿತು. ಈ ನೀರನ್ನು ತೆರವುಗೊಳಿಸಿದ ಬಳಿಕ ರಾತ್ರಿ 10.13ಕ್ಕೆ ಸಂಚಾರ ಪುನರಾರಂಭವಾಗಿತ್ತು. ಆದರೆ ಬುಧವಾರ ನಸುಕಿನ 2.35ಕ್ಕೆ ಪುನಃ ಸುರಂಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೇರಿತು ಎಂದು ಕೊಂಕಣ ರೈಲ್ವೆ ಕಾರ್ಪೊರೇಷನ್ನ ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಕೆಲ ರೈಲುಗಳ ಸಂಚಾರ ಹಠಾತ್ತನೆ ರದ್ದಾಗಿದ್ದರಿಂದ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸಿದರು. ಗೋವಾ ಸಂಪರ್ಕಕ್ರಾಂತಿ ಎಕ್ಸ್ಪ್ರೆಸ್ ಅನ್ನು, ಅದು ಹೊರಡುವ ಎರಡು ಗಂಟೆಗಳ ಮುನ್ನ ರದ್ದುಗೊಳಿಸಲಾಯಿತು. ಹಿರಿಯ ನಾಗರಿಕರು ಸೇರಿದಂತೆ ಗುಜರಾತಿನ 200 ಪ್ರಯಾಣಿಕರ ಗುಂಪು ಈ ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಸಂಚಾರ ರದ್ದಾಗಿದ್ದು ಅವರ ಆತಂಕಕ್ಕೆ ಕಾರಣವಾಯಿತು.</p>.<p>‘ನಮ್ಮ ಗುಂಪಿನಲ್ಲಿ 60 ಮಂದಿ ಹಿರಿಯ ನಾಗರಿಕರಿದ್ದಾರೆ. ರೈಲು ಸಂಚಾರ ರದ್ದಾಗಿದ್ದರಿಂದ ಏನು ಮಾಡಬೇಕು ಎಂಬುದು ತಿಳಿಯದಂತಾಗಿದೆ’ ಎಂದು ಗುಂಪಿನ ಸದಸ್ಯ ಅಬ್ದುಲ್ ವಾಲೇಕರ್ ಬೇಸರ ವ್ಯಕ್ತಪಡಿಸಿದರು. </p>.<p>‘ನಮ್ಮ ಗುಂಪು ದೊಡ್ಡದಿದ್ದು, ಗೋವಾದಲ್ಲಿ ಉಳಿಯುವುದು ಆರ್ಥಿಕ ಹೊರೆಯನ್ನು ಉಂಟು ಮಾಡುತ್ತದೆ. ಹೀಗಾಗಿ ನಮ್ಮ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡಿ’ ಎಂದು ಮತ್ತೊಬ್ಬ ಸದಸ್ಯರು ಮನವಿ ರೈಲ್ವೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. </p>.<p>‘ಪೆರ್ನೆಮ್ ಸುರಂಗ ಮಾರ್ಗದಲ್ಲಿ ಸಂಚಾರ ಪುನರಾರಂಭಿಸಲು ಎಲ್ಲ ಪ್ರಯತ್ನ ನಡೆಯುತ್ತಿದೆ’ ಎಂದು ಕೊಂಕಣ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ಬಾಬನ್ ಘಾಟ್ಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ</strong>: ಭಾರಿ ಮಳೆಯ ಕಾರಣ ಗೋವಾದ ಪೆರ್ನೆಮ್ ಸುರಂಗದೊಳಗೆ ಹೆಚ್ಚು ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರ ಬುಧವಾರ ಬೆಳಿಗ್ಗೆ ಮತ್ತೊಮ್ಮೆ ಸ್ಥಗಿತವಾಗಿತ್ತು.</p>.<p>ಇದರ ಪರಿಣಾಮ, ಸಿಎಸ್ಎಂಟಿ ಮುಂಬೈನಿಂದ ಹೊರಡುವ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದಾಯಿತು. ಕೆಲ ರೈಲುಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಎದುರಿಸಿದರು. </p>.<p>ಮೂರು ದಿನಗಳಿಂದ ಗೋವಾದಲ್ಲಿ ಭಾರಿ ಮಳೆಯಾಗುತ್ತಿದೆ. ಬುಧವಾರ ಬೆಳಿಗ್ಗೆಯಿಂದ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಘೋಷಿಸಿದೆ. </p>.<p>ಮಧುರೆ–ಪೆರ್ನೆಮ್ ವಿಭಾಗದ ನಡುವಿನ ಪೆರ್ನೆಮ್ ಸುರಂಗದೊಳಗೆ ಮಂಗಳವಾರ ಮಧ್ಯಾಹ್ನ 2.35 ಗಂಟೆಗೆ ನೀರು ಹರಿಯಲು ಪ್ರಾರಂಭಿಸಿ, ರೈಲು ಸಂಚಾರಕ್ಕೆ ಅಡಚಣೆಯಾಯಿತು. ಈ ನೀರನ್ನು ತೆರವುಗೊಳಿಸಿದ ಬಳಿಕ ರಾತ್ರಿ 10.13ಕ್ಕೆ ಸಂಚಾರ ಪುನರಾರಂಭವಾಗಿತ್ತು. ಆದರೆ ಬುಧವಾರ ನಸುಕಿನ 2.35ಕ್ಕೆ ಪುನಃ ಸುರಂಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೇರಿತು ಎಂದು ಕೊಂಕಣ ರೈಲ್ವೆ ಕಾರ್ಪೊರೇಷನ್ನ ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಕೆಲ ರೈಲುಗಳ ಸಂಚಾರ ಹಠಾತ್ತನೆ ರದ್ದಾಗಿದ್ದರಿಂದ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸಿದರು. ಗೋವಾ ಸಂಪರ್ಕಕ್ರಾಂತಿ ಎಕ್ಸ್ಪ್ರೆಸ್ ಅನ್ನು, ಅದು ಹೊರಡುವ ಎರಡು ಗಂಟೆಗಳ ಮುನ್ನ ರದ್ದುಗೊಳಿಸಲಾಯಿತು. ಹಿರಿಯ ನಾಗರಿಕರು ಸೇರಿದಂತೆ ಗುಜರಾತಿನ 200 ಪ್ರಯಾಣಿಕರ ಗುಂಪು ಈ ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಸಂಚಾರ ರದ್ದಾಗಿದ್ದು ಅವರ ಆತಂಕಕ್ಕೆ ಕಾರಣವಾಯಿತು.</p>.<p>‘ನಮ್ಮ ಗುಂಪಿನಲ್ಲಿ 60 ಮಂದಿ ಹಿರಿಯ ನಾಗರಿಕರಿದ್ದಾರೆ. ರೈಲು ಸಂಚಾರ ರದ್ದಾಗಿದ್ದರಿಂದ ಏನು ಮಾಡಬೇಕು ಎಂಬುದು ತಿಳಿಯದಂತಾಗಿದೆ’ ಎಂದು ಗುಂಪಿನ ಸದಸ್ಯ ಅಬ್ದುಲ್ ವಾಲೇಕರ್ ಬೇಸರ ವ್ಯಕ್ತಪಡಿಸಿದರು. </p>.<p>‘ನಮ್ಮ ಗುಂಪು ದೊಡ್ಡದಿದ್ದು, ಗೋವಾದಲ್ಲಿ ಉಳಿಯುವುದು ಆರ್ಥಿಕ ಹೊರೆಯನ್ನು ಉಂಟು ಮಾಡುತ್ತದೆ. ಹೀಗಾಗಿ ನಮ್ಮ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡಿ’ ಎಂದು ಮತ್ತೊಬ್ಬ ಸದಸ್ಯರು ಮನವಿ ರೈಲ್ವೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. </p>.<p>‘ಪೆರ್ನೆಮ್ ಸುರಂಗ ಮಾರ್ಗದಲ್ಲಿ ಸಂಚಾರ ಪುನರಾರಂಭಿಸಲು ಎಲ್ಲ ಪ್ರಯತ್ನ ನಡೆಯುತ್ತಿದೆ’ ಎಂದು ಕೊಂಕಣ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ಬಾಬನ್ ಘಾಟ್ಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>