‘ದೇಶವನ್ನು ಮುನ್ನಡೆಸುವುದು ಬಿಟ್ಟು, ಕೇಂದ್ರ ಸಚಿವರಿಗೆ ಇಲ್ಲೇನು ಕೆಲಸ? ಅವರಿಗೆ ಏನು ಬೇಕು? ನನ್ನನ್ನು ಕೊಲ್ಲಬೇಕಿದೆಯೇ? ನನ್ನನ್ನು ಕೊಲ್ಲುವ ಮೂಲಕ ಚುನಾವಣೆ ಗೆಲ್ಲಬಹುದು ಎಂದು ಅವರು ಅಂದುಕೊಂಡಿದ್ದರೆ, ಅದು ಸುಳ್ಳು. ನನ್ನ ಮೇಲೆ ಅವರು ಎಷ್ಟೇ ದಾಳಿ ನಡೆಸಿದರೂ, ಟಿಎಂಸಿಯನ್ನು ಗೆಲ್ಲಿಸುವ ಪ್ರಯತ್ನವನ್ನು ನಾನು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.