<p><strong>ನವದೆಹಲಿ</strong>: ವಿಧಾನಸಭಾ ಚುನಾವಣೆಯಲ್ಲಿ ಹಣ ಮತ್ತು ಉಡುಗೊರೆಗಳಿಗೆ ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ ಎಂದು ದೆಹಲಿ ಮತದಾರರಿಗೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದಾರೆ.</p><p>ಮತದಾರರಿಗೆ ಚಿನ್ನದ ಸರ, ಸೀರೆ, ಶೂಗಳು ಮತ್ತು ಹಣವನ್ನು ನೀಡುವ ಮೂಲಕ ಬಿಜೆಪಿ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.</p><p>‘ಬಿಜೆಪಿಯವರು ಕೊಡುತ್ತಿರುವುದು ನಿಮ್ಮ ಹಣ ಸ್ವೀಕರಿಸಿ, ಆದರೆ, ನಿಮ್ಮ ಮತವನ್ನು ₹1,100 ಅಥವಾ ಸೀರೆಗೆ ಮಾರಿಕೊಳ್ಳಬೇಡಿ. ಹಾಗೆ ಮಾಡಿದರೆ, ನಿಮ್ಮ ಮತಕ್ಕೆ ಮೌಲ್ಯವೇ ಇರುವುದಿಲ್ಲ’ಎಂದು ವಿಡಿಯೊ ಸಂದೇಶದ ಮೂಲಕ ಮತದಾರರನ್ನು ಒತ್ತಾಯಿಸಿದ್ದಾರೆ.</p><p>ಮತದಾನದ ಹಕ್ಕನ್ನು ಸುರಕ್ಷಿತವಾಗಿರಿಸಲು ಬಿ.ಆರ್. ಅಂಬೇಡ್ಕರ್ ಅವರು ಮಾಡಿರುವ ತ್ಯಾಗವನ್ನು ಕೇಜ್ರಿವಾಲ್, ಮತದಾರರಿಗೆ ನೆನಪಿಸಿದರು. </p><p>‘ನಿಮ್ಮ ಮತಗಳನ್ನು ಕೊಂಡುಕೊಳ್ಳಬಹುದಾದರೆ ಅಲ್ಲಿಗೆ ನಮ್ಮ ಪ್ರಜಾಪ್ರಭುತ್ವ ಅಂತ್ಯವಾಗುತ್ತದೆ. ಸಂಪತ್ತಿನ ಆಧಿಪತ್ಯ ಮಾತ್ರ ಉಳಿಯಲಿದೆ. ಹಣ ಕೊಡುವವರನ್ನು ಬಿಟ್ಟು ಬೇರೆ ಯಾರಿಗಾದರೂ ಮತ ಹಾಕಿ’ ಎಂದು ಮನವಿ ಮಾಡಿದ್ದಾರೆ.</p><p>ಮತದಾರರಿಗೆ ಬೆದರಿಕೆವೊಡ್ಡುವ ಆತಂಕವನ್ನೂ ಕೇಜ್ರಿವಾಲ್ ವ್ಯಕ್ತಪಡಿಸಿದ್ದಾರೆ.</p><p>ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಎಎಪಿ ಶತಾಯಗತಾಯ ಪ್ರಯತ್ನಿಸುತ್ತಿದ್ದರೆ, 25 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ. </p><p>70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರುವರಿ 8ರಂದು ಫಲಿತಾಂಶ ಹೊರಬೀಳಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವಿಧಾನಸಭಾ ಚುನಾವಣೆಯಲ್ಲಿ ಹಣ ಮತ್ತು ಉಡುಗೊರೆಗಳಿಗೆ ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ ಎಂದು ದೆಹಲಿ ಮತದಾರರಿಗೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದಾರೆ.</p><p>ಮತದಾರರಿಗೆ ಚಿನ್ನದ ಸರ, ಸೀರೆ, ಶೂಗಳು ಮತ್ತು ಹಣವನ್ನು ನೀಡುವ ಮೂಲಕ ಬಿಜೆಪಿ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.</p><p>‘ಬಿಜೆಪಿಯವರು ಕೊಡುತ್ತಿರುವುದು ನಿಮ್ಮ ಹಣ ಸ್ವೀಕರಿಸಿ, ಆದರೆ, ನಿಮ್ಮ ಮತವನ್ನು ₹1,100 ಅಥವಾ ಸೀರೆಗೆ ಮಾರಿಕೊಳ್ಳಬೇಡಿ. ಹಾಗೆ ಮಾಡಿದರೆ, ನಿಮ್ಮ ಮತಕ್ಕೆ ಮೌಲ್ಯವೇ ಇರುವುದಿಲ್ಲ’ಎಂದು ವಿಡಿಯೊ ಸಂದೇಶದ ಮೂಲಕ ಮತದಾರರನ್ನು ಒತ್ತಾಯಿಸಿದ್ದಾರೆ.</p><p>ಮತದಾನದ ಹಕ್ಕನ್ನು ಸುರಕ್ಷಿತವಾಗಿರಿಸಲು ಬಿ.ಆರ್. ಅಂಬೇಡ್ಕರ್ ಅವರು ಮಾಡಿರುವ ತ್ಯಾಗವನ್ನು ಕೇಜ್ರಿವಾಲ್, ಮತದಾರರಿಗೆ ನೆನಪಿಸಿದರು. </p><p>‘ನಿಮ್ಮ ಮತಗಳನ್ನು ಕೊಂಡುಕೊಳ್ಳಬಹುದಾದರೆ ಅಲ್ಲಿಗೆ ನಮ್ಮ ಪ್ರಜಾಪ್ರಭುತ್ವ ಅಂತ್ಯವಾಗುತ್ತದೆ. ಸಂಪತ್ತಿನ ಆಧಿಪತ್ಯ ಮಾತ್ರ ಉಳಿಯಲಿದೆ. ಹಣ ಕೊಡುವವರನ್ನು ಬಿಟ್ಟು ಬೇರೆ ಯಾರಿಗಾದರೂ ಮತ ಹಾಕಿ’ ಎಂದು ಮನವಿ ಮಾಡಿದ್ದಾರೆ.</p><p>ಮತದಾರರಿಗೆ ಬೆದರಿಕೆವೊಡ್ಡುವ ಆತಂಕವನ್ನೂ ಕೇಜ್ರಿವಾಲ್ ವ್ಯಕ್ತಪಡಿಸಿದ್ದಾರೆ.</p><p>ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಎಎಪಿ ಶತಾಯಗತಾಯ ಪ್ರಯತ್ನಿಸುತ್ತಿದ್ದರೆ, 25 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ. </p><p>70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರುವರಿ 8ರಂದು ಫಲಿತಾಂಶ ಹೊರಬೀಳಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>