<p><strong>ನವದೆಹಲಿ (ಪಿಟಿಐ):</strong> ಉದ್ಯೋಗಕ್ಕಾಗಿ ವ್ಯಾಸಂಗವನ್ನು ಅರ್ಧದಲ್ಲೇ ಬಿಡುವವರಿಗೆ ಪುನಃ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸುವ ‘ಬಾಕಿ ವ್ಯಾಸಂಗ ವರ್ಗಾವಣೆ ವ್ಯವಸ್ಥೆ’ಯನ್ನು (ಕ್ರೆಡಿಟ್ ಇಕ್ವಿವಲೆಂಟ್ ಟ್ರಾನ್್ಸಫರ್ ಸಿಸ್ಟಮ್) ನವೆಂಬರ್ ೧೧ರ ಶಿಕ್ಷಣ ದಿನಾಚರಣೆಯಂದು ಕೇಂದ್ರ ಸರ್ಕಾರ ಆರಂಭಿಸಲಿದೆ.<br /> <br /> ಇದೇ ವೇಳೆ ಸರ್ಕಾರವು ಮುಂದಿನ ವರ್ಷ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ಬಗ್ಗೆಯೂ ಪರಿಶೀಲಿಸುತ್ತಿದೆ ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ‘ಭಾರತ ಆರ್ಥಿಕ ಶೃಂಗಸಭೆ’ಯಲ್ಲಿ ಬುಧವಾರ ಹೇಳಿದರು.<br /> <br /> ಉದ್ಯೋಗಕ್ಕಾಗಿ ವ್ಯಾಸಂಗವನ್ನು ಅರ್ಧದಲ್ಲಿ ಬಿಟ್ಟವರಿಗೆ ತಾವು ಇಷ್ಟಪಟ್ಟ ಯಾವುದೇ ಸಂದರ್ಭದಲ್ಲಿ ಬಾಕಿ ಉಳಿದ ವ್ಯಾಸಂಗವನ್ನು ಒಂದು ಶೈಕ್ಷಣಿಕ ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ವರ್ಗಾಯಿಸಿಕೊಳ್ಳಲು ಹೊಸ ವ್ಯವಸ್ಥೆ ಅನುವು ಮಾಡಿಕೊಡಲಿದೆ.<br /> <br /> ಆರಂಭದಲ್ಲಿ ಇದನ್ನು ೯ನೇ ತರಗತಿಗೆ ಜಾರಿಗೊಳಿಸಿ, ಬರುವ ಜನವರಿಯಿಂದ ಪಿಎಚ್.ಡಿ ವರೆಗಿನ ವ್ಯಾಸಂಗದ ತನಕ ವಿಸ್ತರಿಸಲಾಗುತ್ತದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಈ ಪದ್ಧತಿಯನ್ನು ಅನುಷ್ಠಾನಗೊಳಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.</p>.<p><strong>ಆದೇಶ ಪಾಲನೆ ಕಷ್ಟ<br /> ನವದೆಹಲಿ (ಪಿಟಿಐ)</strong>: ನ್ಯಾಯಾಲಯಗಳು ನೀಡುವ ಕೆಲವು ಆದೇಶಗಳನ್ನು ಅನುಷ್ಠಾನಗೊಳಿಸುವುದು ತುಂಬಾ ಕಷ್ಟ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಪರಿಸರ ಮತ್ತಿತರ ವಿಷಯ ಗಳಿಗೆ ಸಂಬಂಧಿಸಿದ ದಾವೆ ಗಳಿಂದಾಗಿ ಹಲವು ಯೋಜನೆಗಳು ವಿಳಂಬವಾಗುತ್ತಿರುವು ದನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಹೀಗೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಉದ್ಯೋಗಕ್ಕಾಗಿ ವ್ಯಾಸಂಗವನ್ನು ಅರ್ಧದಲ್ಲೇ ಬಿಡುವವರಿಗೆ ಪುನಃ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸುವ ‘ಬಾಕಿ ವ್ಯಾಸಂಗ ವರ್ಗಾವಣೆ ವ್ಯವಸ್ಥೆ’ಯನ್ನು (ಕ್ರೆಡಿಟ್ ಇಕ್ವಿವಲೆಂಟ್ ಟ್ರಾನ್್ಸಫರ್ ಸಿಸ್ಟಮ್) ನವೆಂಬರ್ ೧೧ರ ಶಿಕ್ಷಣ ದಿನಾಚರಣೆಯಂದು ಕೇಂದ್ರ ಸರ್ಕಾರ ಆರಂಭಿಸಲಿದೆ.<br /> <br /> ಇದೇ ವೇಳೆ ಸರ್ಕಾರವು ಮುಂದಿನ ವರ್ಷ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ಬಗ್ಗೆಯೂ ಪರಿಶೀಲಿಸುತ್ತಿದೆ ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ‘ಭಾರತ ಆರ್ಥಿಕ ಶೃಂಗಸಭೆ’ಯಲ್ಲಿ ಬುಧವಾರ ಹೇಳಿದರು.<br /> <br /> ಉದ್ಯೋಗಕ್ಕಾಗಿ ವ್ಯಾಸಂಗವನ್ನು ಅರ್ಧದಲ್ಲಿ ಬಿಟ್ಟವರಿಗೆ ತಾವು ಇಷ್ಟಪಟ್ಟ ಯಾವುದೇ ಸಂದರ್ಭದಲ್ಲಿ ಬಾಕಿ ಉಳಿದ ವ್ಯಾಸಂಗವನ್ನು ಒಂದು ಶೈಕ್ಷಣಿಕ ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ವರ್ಗಾಯಿಸಿಕೊಳ್ಳಲು ಹೊಸ ವ್ಯವಸ್ಥೆ ಅನುವು ಮಾಡಿಕೊಡಲಿದೆ.<br /> <br /> ಆರಂಭದಲ್ಲಿ ಇದನ್ನು ೯ನೇ ತರಗತಿಗೆ ಜಾರಿಗೊಳಿಸಿ, ಬರುವ ಜನವರಿಯಿಂದ ಪಿಎಚ್.ಡಿ ವರೆಗಿನ ವ್ಯಾಸಂಗದ ತನಕ ವಿಸ್ತರಿಸಲಾಗುತ್ತದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಈ ಪದ್ಧತಿಯನ್ನು ಅನುಷ್ಠಾನಗೊಳಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.</p>.<p><strong>ಆದೇಶ ಪಾಲನೆ ಕಷ್ಟ<br /> ನವದೆಹಲಿ (ಪಿಟಿಐ)</strong>: ನ್ಯಾಯಾಲಯಗಳು ನೀಡುವ ಕೆಲವು ಆದೇಶಗಳನ್ನು ಅನುಷ್ಠಾನಗೊಳಿಸುವುದು ತುಂಬಾ ಕಷ್ಟ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಪರಿಸರ ಮತ್ತಿತರ ವಿಷಯ ಗಳಿಗೆ ಸಂಬಂಧಿಸಿದ ದಾವೆ ಗಳಿಂದಾಗಿ ಹಲವು ಯೋಜನೆಗಳು ವಿಳಂಬವಾಗುತ್ತಿರುವು ದನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಹೀಗೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>