2007ರಲ್ಲಿ ನಡೆದ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಿ ಸ್ವಾಮಿ ಅಸೀಮಾನಂದ ತಪ್ಪೊಪ್ಪಿಕೊಂಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಆರ್ಎಸ್ಎಸ್ ಈ ರೀತಿ ಹೇಳಿದೆ.
‘ಒಂದು ವೇಳೆ ತನಿಖಾ ಸಂಸ್ಥೆಗಳಿಗೆ ಈ ಪ್ರಕರಣಗಳ ಹಿಂದಿನ ಕಾರಣಗಳನ್ನು ನಿಜವಾಗಿಯೂ ಪತ್ತೆ ಮಾಡಬೇಕೆಂದಿದ್ದರೆ, ತಪ್ಪೊಪ್ಪಿಗೆ ವಿಚಾರವನ್ನು ಇಷ್ಟು ದೊಡ್ಡ ರೀತಿಯಲ್ಲಿ ವ್ಯವಸ್ಥಿತವಾಗಿ ಪ್ರಚಾರಮಾಡುವ ಅಗತ್ಯವಿರಲಿಲ್ಲ’ ಎಂದು ಹೇಳಿದೆ. ಅಸೀಮಾನಂದ ತಪ್ಪೊಪ್ಪಿಕೊಂಡಿರುವ ಮಾಹಿತಿ ಸೋರಿಕೆಯು ರಾಜಕೀಯ ಪ್ರೇರಿತವಾದುದು ಎಂದಿರುವ ಆರ್ಎಸ್ಎಸ್, ‘ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುವ ಮೊದಲು, ಮೆಕ್ಕಾ ಮಸೀದಿ ಸ್ಫೋಟದ ಹಿಂದೆ ನಿಷೇಧಿತ ಸಂಘಟನೆ ಹುಜಿಯ ಕೈವಾಡವಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದರು’ ಎಂದು ಹೇಳಿದೆ. ಆರ್ಎಸ್ಎಸ್ ಸಂಪಾದಕೀಯದಲ್ಲಿ ಬರೆದಿದೆ.