ನವದೆಹಲಿ (ಪಿಟಿಐ): ಮದ್ಯಪಾನ ಸೇವಿಸಿ ಚಾಲನೆ ಮಾಡಿದ ಯುವಕನೊಬ್ಬನಿಗೆ ಶಿಕ್ಷೆ ರೂಪದಲ್ಲಿ 2 ತಿಂಗಳ ಕಾಲ ದೇವಸ್ಥಾನದಲ್ಲಿ ಸಮುದಾಯ ಸೇವೆ ಮಾಡಬೇಕೆಂದು ಇಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿದೆ.
ಇಲ್ಲಿನ ಹೆಚ್ಚುವರಿ ಸೆಷನ್ ನ್ಯಾಯಾಧೀಶ ವೀರೇದ್ರ ಭಟ್ ಈ ತೀರ್ಪು ನೀಡಿದ್ದು, ಜೈಲು ಶಿಕ್ಷೆಯ ಬದಲು ಸಮುದಾಯ ಸೇವೆಯಲ್ಲಿ ತೊಡಗುವಂತೆ ಯುವಕನಿಗೆ ಆದೇಶಿಸಲಾಗಿದೆ. `ಪ್ರದೀಪ್ ಅವಿವಾಹಿತನಾಗಿದ್ದು, ವಯಸ್ಸಾದ ಪೋಷಕರನ್ನು ಹೊಂದಿದ್ದಾನೆ.
ಯುವಕನಿಗೆ ಜೈಲುಶಿಕ್ಷೆ ವಿಧಿಸಿದರೆ ಭವಿಷ್ಯದಲ್ಲಿ ಕಪ್ಪುಚುಕ್ಕೆಯಾಗುತ್ತದೆ, ಕುಟುಂಬದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಈ ತೀರ್ಪು ನೀಡಲಾಗಿದೆ~ ಎಂದು ಕೋರ್ಟ್ ಹೇಳಿದೆ.