<p><strong>ಹೈದರಾಬಾದ್ (ಐಎಎನ್ಎಸ್):</strong> ಜೈಪುರ ಸಾಹಿತ್ಯ ಉತ್ಸವದಲ್ಲಿ ವಿವಾದಾತ್ಮಕ ಸಾಹಿತಿ ಸಲ್ಮಾನ್ ರಶ್ದಿ ಅವರ ನಿಷೇಧಿತ `ದಿ ಸಟಾನಿಕ್ ವರ್ಸಸ್~ ಕೃತಿಯ ಕೆಲವು ಭಾಗಗಳನ್ನು ಓದಿದ ಲೇಖಕರನ್ನು ತಕ್ಷಣವೇ ಬಂಧಿಸಬೇಕು ಎಂದು ಸಂಸದ ಹಾಗೂ ಮಜ್ಲೀಸ್-ಎ-ಇತೇಹದುಲ್ ಮುಸ್ಲಿಮೀ ಮುಖಂಡ ಅಸಾದುದ್ದೀನ್ ಓವಾಸಿ ಆಗ್ರಹಿಸಿದ್ದಾರೆ.<br /> <br /> ಇಂತಹ ನಿಷೇಧಿತ ಕೃತಿಯ ಭಾಗಗಳನ್ನು ಪ್ರಚೋದಿಸುವ ಉದ್ದೇಶದಿಂದಲೇ ಓದಲಾಗಿದೆ. ಜತೆಗೆ ಜೈಪುರ ಸಾಹಿತ್ಯ ಉತ್ಸವ ಒಂದು ರೀತಿಯಲ್ಲಿ ಇಸ್ಲಾಂ ವಿರೋಧಿ ವೇದಿಕೆಯಾಗಿಯೂ ಮಾರ್ಪಟ್ಟಿದೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.<br /> <br /> ಲೇಖಕರಾದ ಹರಿ ಕುಂಜ್ರು, ಅಮಿತಾವ್ ಕುಮಾರ್, ಜಿತ್ ಥಾಯಿಲ್ ಹಾಗೂ ರುಚಿರ್ ಜೋಷಿ ಅವರು ರಶ್ದಿ ಅವರ ಈ ಕೃತಿಯ ಕೆಲವು ಭಾಗಗಳನ್ನು ಸಾಹಿತ್ಯ ಉತ್ಸವದ ಮೊದಲ ದಿನ ಓದಿದ್ದರು. ಸಂಘಟಕರು ಇದನ್ನು ತಡೆಯಲು ಯತ್ನಿಸಿದ್ದರು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದೆ.<br /> <br /> <strong>ಲೇಖಕರ ವಿರುದ್ಧ ಕ್ರಮಕ್ಕೆ ಒತ್ತಾಯ (ಜೈಪುರ ವರದಿ): </strong>ನಿಷೇಧಿತ `ಸಟಾನಿಕ್ ವರ್ಸಸ್~ ಕೃತಿಯ ಕೆಲವು ಭಾಗಗಳನ್ನು ಸಾಹಿತ್ಯ ಉತ್ಸವದಲ್ಲಿ ವಾಚನ ಮಾಡಿದ ಲೇಖಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಂಘಟನೆಗಳು ಸಾಹಿತ್ಯ ಉತ್ಸವ ಸಂಘಟಕರನ್ನು ಒತ್ತಾಯ ಮಾಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಐಎಎನ್ಎಸ್):</strong> ಜೈಪುರ ಸಾಹಿತ್ಯ ಉತ್ಸವದಲ್ಲಿ ವಿವಾದಾತ್ಮಕ ಸಾಹಿತಿ ಸಲ್ಮಾನ್ ರಶ್ದಿ ಅವರ ನಿಷೇಧಿತ `ದಿ ಸಟಾನಿಕ್ ವರ್ಸಸ್~ ಕೃತಿಯ ಕೆಲವು ಭಾಗಗಳನ್ನು ಓದಿದ ಲೇಖಕರನ್ನು ತಕ್ಷಣವೇ ಬಂಧಿಸಬೇಕು ಎಂದು ಸಂಸದ ಹಾಗೂ ಮಜ್ಲೀಸ್-ಎ-ಇತೇಹದುಲ್ ಮುಸ್ಲಿಮೀ ಮುಖಂಡ ಅಸಾದುದ್ದೀನ್ ಓವಾಸಿ ಆಗ್ರಹಿಸಿದ್ದಾರೆ.<br /> <br /> ಇಂತಹ ನಿಷೇಧಿತ ಕೃತಿಯ ಭಾಗಗಳನ್ನು ಪ್ರಚೋದಿಸುವ ಉದ್ದೇಶದಿಂದಲೇ ಓದಲಾಗಿದೆ. ಜತೆಗೆ ಜೈಪುರ ಸಾಹಿತ್ಯ ಉತ್ಸವ ಒಂದು ರೀತಿಯಲ್ಲಿ ಇಸ್ಲಾಂ ವಿರೋಧಿ ವೇದಿಕೆಯಾಗಿಯೂ ಮಾರ್ಪಟ್ಟಿದೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.<br /> <br /> ಲೇಖಕರಾದ ಹರಿ ಕುಂಜ್ರು, ಅಮಿತಾವ್ ಕುಮಾರ್, ಜಿತ್ ಥಾಯಿಲ್ ಹಾಗೂ ರುಚಿರ್ ಜೋಷಿ ಅವರು ರಶ್ದಿ ಅವರ ಈ ಕೃತಿಯ ಕೆಲವು ಭಾಗಗಳನ್ನು ಸಾಹಿತ್ಯ ಉತ್ಸವದ ಮೊದಲ ದಿನ ಓದಿದ್ದರು. ಸಂಘಟಕರು ಇದನ್ನು ತಡೆಯಲು ಯತ್ನಿಸಿದ್ದರು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದೆ.<br /> <br /> <strong>ಲೇಖಕರ ವಿರುದ್ಧ ಕ್ರಮಕ್ಕೆ ಒತ್ತಾಯ (ಜೈಪುರ ವರದಿ): </strong>ನಿಷೇಧಿತ `ಸಟಾನಿಕ್ ವರ್ಸಸ್~ ಕೃತಿಯ ಕೆಲವು ಭಾಗಗಳನ್ನು ಸಾಹಿತ್ಯ ಉತ್ಸವದಲ್ಲಿ ವಾಚನ ಮಾಡಿದ ಲೇಖಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಂಘಟನೆಗಳು ಸಾಹಿತ್ಯ ಉತ್ಸವ ಸಂಘಟಕರನ್ನು ಒತ್ತಾಯ ಮಾಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>